Sunday, February 10, 2013

ಆತ್ಮಸಾಕ್ಷಿ

ಆತ್ಮಸಾಕ್ಷಿ ನೆಚ್ಚಿ ದುಡಿವವರು ನಾವು
ಆತ್ಮಸಾಕ್ಷಿ ಬಿಟ್ಟು ಬೇರಾರಿಗೂ ಹೆದರೆನು
ಆದರೇನು ಮಾಡಲಿ, ಈ ಊರು ಬೇಡುವುದು ಬರಿಯ ಸಾಕ್ಷಿಯನು
ಇವರು ನೀಡುವ ನೋವಿಗೆ,
ಗಾಯ ಆಗೋದಿಲ್ಲ, ರಕ್ತ ಸುರಿಯೋದಿಲ್ಲ
ಆದರೂ ನೋವಾಗುತ್ತದೆ ಪ್ರಾಣವೇ ಬಾಯಿಗೆ ಬಂದಂತೆ
ನೊಂದವನಿಗೆ ಮಾತ್ರ ಗೊತ್ತಾಗುತ್ತದೆ ನೋವು
ಇದಕ್ಕೆಲ್ಲಿಂದ ತರಲಿ ಸಾಕ್ಷಿ...!
ಪ್ರಾಮಾಣಿಕತೆಯೇ ಪಾಶವೇ ಈ ಊರಲಿ...!?
ನನ್ನ ಆತ್ಮಸಾಕ್ಷಿಯ ನಾ ಏನ ಮಾಡಲಿ...!