Wednesday, July 6, 2011

ಹಳೆ ನೆನಪಿನೊಂದಿಗೆ ಹೊಸ ದಾರಿಯಲ್ಲಿ



ಇವತ್ತಿನಿಂದ ನಾನು ಉದಯವಾಣಿ ವರದಿಗಾರ. ೨೦ ತಿಂಗಳ ಹಿಂದೆ ಸುವರ್ಣ ನ್ಯೂಸ್ ಸೇರೋವಾಗ, ೮ ವರ್ಷಗಳ ಹಿಂದೆ ಕನ್ನಡಪ್ರಭ ಸೇರೋವಾಗ ಇದ್ದ ಭಯವೇ ಇಂದು ಆಗ್ತಿದೆ. ದೆಹಲಿಯಲಿ ದುಡಿದು ಬದುಕಬಲ್ಲೆನ? ಅನ್ನೋ ಅನುಮಾನ, ಆತಂಕ ಇದ್ದೇ ಇದೆ. ಇನ್ನು ಸುವರ್ಣ ನ್ಯೂಸ್ ಸೇರೋವಾಗ ಇದ್ದ ಪರಕೀಯತೆ, ಅನಾಥ ಭಾವ ಮಾತ್ರ ಉದಯವಾಣಿಯಲ್ಲಿ ಕಾಡದು ಅಂದುಕೊಂಡಿದ್ದೇನೆ.
ಸುವರ್ಣ ಸೇರಿದಾಗ ಕೆಲಸವು ಹೊಸದು, ಸಹದ್ಯೋಗಿಗಳು ಹೊಸಬರು. ಕೆಲವರು ಪ್ರೀತಿಯಿಂದ ಮಾತನಾಡಿಸಿದರೆ, ಕೆಲವರನ್ನು ಮಾತನಾಡಿಸಲು ಕಷ್ಟ ಇತ್ತು ಕಾರಣ ನಾವು ಪ್ರಿಂಟ್ ಮೀಡಿಯಾ ಅನ್ನೋ ತಾತ್ಸಾರ ಕೆಲವರದು. ನಮ್ಮ ಕೆ.ಪಿ. ನಾಗರಾಜ ಅಂತು ಕಂಗಾಲ್ ಆಗ್ಬಿಟ್ಟಿದ್ದ. ಆದ್ರೆ ಅಲ್ಲಿ ಸಿಕ್ಕ ಅಕ್ಕ ಶೋಭಾ, ಸುಭಾಷ್ ಹುಗಾರ್, ಜಯಪ್ರಕಾಶ್ ಶೆಟ್ಟಿ, ಹಳೆ ಗೆಳೆಯ ವಿನೋದ್, ಸದಾ ನನ್ನೊಂದಿಗೆ ಜಗಳ ಆಡೋ ಜೈ ಶಂಕರ್, ಅಲ್ಲಿನ ಮೂಲ ನಿವಾಸಿ ಆದರು ನನ್ನ ಇಷ್ಟ ಪಟ್ಟ ಗೆಳೆಯ ಅರವಿಂದ್ ಬಿರಾದರ್, ಸ್ವಲ್ಪ ಮಾತಿನ ಗೆಳೆಯ ಉಮೇಶ್, ನನ್ನನು ಸದಾ ರೇಗಿಸುವ ಸಬಿತ, ಅಣ್ಣ ಅಂತ ಕಾಡುವ ಶ್ಯಾಮಲಾ ನನ್ನೊಳಗಿನ ಅನಾಥ ಭಾವ ದೂರ ತಳ್ಳಿದರು. ಹೊಸ ನೀರು ಹರಿಯ ತೊಡಗಿತು, ಹೊಸಬರಿಗೆ ನಾನೇ ಹಳಬ. ಸುವರ್ಣ ನಮ್ ಟೀಂ ಅಂತ ಅನ್ಸೋಕೆ ಶುರು ಆಯಿತು.
ಮೆಟ್ರೋ ರಿಪೋರ್ಟರ್ ಆಗಿದ್ದ ದಿನಗಳ ಅನುಭವ ವಿಚಿತ್ರವಾದದ್ದು. ರಾಜಕೀಯ ವರದಿಗಾರನಾಗಿ ಸುವರ್ಣದಲ್ಲಿ ದುಡಿದ ದಿನಗಳು ಮೋಸ್ಟ್ ಮೆಮೊರಬಲ್. ಅದಕ್ಕೆ ಮಾನ್ಯ ಸಿ.ಎಂ ಯಡಿಯೂರಪ್ಪಗೆ, ಎಚ್.ಡಿ. ಕುಮಾರಸ್ವಾಮಿಗೆ ಥ್ಯಾಂಕ್ಸ್ ಹೇಳಲೇಬೇಕು. ದಿನಗಟ್ಟಲೆ ಸಿ.ಎಂ. ಮನೆ, ರಾಜಭವನ, ರೆಸಾರ್ಟ್ ಕಾಯೋದು ಕಲಿತೆ. ಅದೇ ದಿನಗಳಲ್ಲಿ ಅಂಡಮಾನ್ ನೋಡಿ ಬಾರೋ ಅವಕಾಶ ಕೊಟ್ಟರು ರಂಗನಾಥ್ ಸರ್. ಮೊದಲ ಬಾರಿ ವಿಮಾನವು ಹತ್ತಿ ಇಳಿದೆ. ಹೂಗಾರ್ ಹಿರಿಯರಾದ್ರು ನಮ್ಮೊಂದಿಗೆ ಕಿರಿಯರಾಗಿ ಕೆಲಸ ಮಾಡಿದ್ರು. ಅವರ ಹಾಸ್ಯ ಪ್ರಜ್ಞೆ ಗೆ ಅವರೇ ಸಾಟಿ. ಇನ್ನು ಜಯಪ್ರಕಾಶ್ ಶೆಟ್ಟಿ ಕಾಲೇಜ್ ಹುಡುಗನಾಗಿ ಬಿಡ್ತಿದ್ರು. ಕೆಲಸದ ಒತ್ತಡವನ್ನು ಒಂದು ತಂಡವಾಗಿ ಎಂಜಾಯ್ ಮಾಡೋದು ಕಲಿತೆವು. ಇನ್ನು ನಮ್ ಕ್ಯಾಮರಾಮನ್ ಗಳು, ಡ್ರೈವರ್ ಗಳು ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಲೇಬೇಕು. ಮೊದಮೊದಲು ಟಿವಿ ಸ್ಪೀಡಿಗೆ ಬೆದರಿದಾಗ ನೆರವಿಗೆ ಬಂದು ಆತ್ಮ ವಿಶ್ವಾಸ ತುಂಬಿದ್ದೆ ಕ್ಯಾಮರಾಮನ್ ಹಾಗು ಡ್ರೈವರ್ ಗಳು. ಕೆಲವರು ಅವಮಾನಿಸಿದ್ದು, ಗೇಲಿ ಮಾಡಿದ್ದು ಇದೆ. ಅವೆಲ್ಲ ಇಲ್ಲಿ ಗೆಲ್ಲಲೇ ಬೇಕು ಅನ್ನೋ ಹಠ ಬೆಳೆಯಲು ಹೆಲ್ಪ್ ಆದವು.
ಇದ್ದಕಿದ್ದಂತೆ ಒಂದು ದಿನ ನನ್ನ ಮೆಟ್ರೋ ಚೀಫ್ ಅಂತ ಘೋಷಿಸಿದರು. ಅಳಕುತ್ತ ಆ ಸೀಟ್ನಲ್ಲಿ ಕುಳಿತೆ. ಹದಿನಾರು ರಿಪೋರ್ಟರ್ ಗಳ ದೊಡ್ಡ ತಂಡಕ್ಕೆ ನಾನೇ ಲೀಡರ್. ಈ ತಂಡದಲ್ಲಿ ೯ ಹುಡುಗಿಯರು. ಕೆಲಸ ಮಾಡುತಿದ್ದವ, ಕೆಲಸ ಮಾಡಿಸುವ ಕೆಲಸ ಹೇಗೆ ಎಂದು ಅಳಕುತ್ತಲೇ ಕೆಲಸ ಆರಂಭಿಸಿದೆ. ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಟ್ಟು ಪ್ರತಿಯೊಬ್ಬರ ಶಕ್ತಿ, ಆಸಕ್ತಿ ತಿಳ್ಕೊಂಡೆ. ಅಕ್ಕ ಶೋಭಾ ನೆರವು ಬೇಕಾಯ್ತು. ಎಷ್ಟು ಸ್ಟೋರಿ ಅನ್ನೋದಲ್ಲ, ಯಾವ ಸ್ಟೋರಿ ಅನ್ನೋದರ ಮೇಲೆ ಕೆಲಸ ಶುರು ಮಾಡಿದೆವು. ಫಸ್ಟ್ ಅನ್ನೋದಕಿಂತ ಬೆಸ್ಟ್ ಅನ್ನೋದರ ಕಡೆ ಗಮನ ಕೊಡಿ ಅಂತ ಒಂದು ಮೀಟಿಂಗ್ ಮಾಡಿ ಪುಟ್ಟ ಭಾಷಣ ಮಾಡಿದೆ. ಬರ್ತಾ ಬರ್ತಾ ಸಲಿಸಾಯ್ತು, ಜೊತೆಗೆ ಬೇರೆಯವರು ರಜೆ ಇದ್ದಾಗ ಇನ್ಪುಟ್ ಜವಾಬ್ದಾರಿಯು ಬಿತ್ತು . ನನ್ನ ಟೀಂ ಹುಡುಗರು ಇಷ್ಟ ಪಟ್ಟು ಕೆಲಸ ಮಾಡಲು ಶುರು ಮಾಡಿದರು. ಮೊದಲಿಗೆ ನನ್ನ ಬೈದಿದ್ದ ಹುಡುಗರು, ನನ್ನ ನಿರ್ದಾರಕ್ಕೆ ಕಾರಣ ತಿಳಿದು ಸಾರೀ ಅಂದ್ರು. ನನ್ನೋಳಗಬ್ಬ ಲೀಡರ್ ಇದಾನೆ ಅನ್ನೋದನ್ನ ನನಗೆ ತಿಲಿಸಿಕೊತ್ತಿದ್ದೆ ಮೆಟ್ರೋ ಟೀಂ. ನಾವು ಅಂದುಕೊಂದಸ್ತು ಅಲ್ಲದಿದ್ದರೂ ಮೊದಲಿಗಿಂತ ವಾಸಿ ಅನ್ನೋ ಮಟ್ಟಕ್ಕೆ ನಮ್ ಟಿಅರ್ ಪಿ ಜಾಸ್ತಿ ಆಯಿತು. ಗೂಳಿ ತರ ತಿರ್ಗಾಡ್ತಿದ್ದೋನು ಕುಳಿತು ಕೆಲಸ ಮಾಡೋದು ಕಷ್ಟ ಅಂತ ಮೊದ ಮೊದಲು ಅನ್ನಿಸಿದ್ರೂ, ಬರ್ತಾ ಬರ್ತ ಎಲ್ಲವು ಅಡ್ಜಸ್ಟ್ ಆಯಿತು. ನಮ್ ಟೀಂ ನಲಿ ಬಹುತೇಕ ಎಲ್ಲ ಹೊಸಬರೇ. ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟಗಳಿಗೆ ಮೂಕ ಪ್ರೇಕ್ಷಕನಾಗಿ ಇರ್ತಿದ್ದೆ. ಮಿತಿ ಮೀರೋ ಹೊತ್ತಿನಲ್ಲಿ ಎಂಟ್ರಿ ಕೊಡೋದು. ನಾನು ಬೇಡ ಅಂದ್ರು ಕೆಲವು ಮಾಹಿತಿ ಕೊಡೊ ಹುಡುಗರು ಎಲ್ಲ ಸೇರಿ ನನ್ನ ಅವ್ರು ನಮ್ ಚೀಫ್ ಅಂತ ಒಪ್ಪಿದರು.
ಕೆಲವರು ಆಗಾಗ ಮನಸಿಗೆ ಬೇಜಾರು ಮಾಡಿದ್ದು ಇದೆ. ಟೀಂ ಸ್ಪಿರಿಟ್ ಮುಂದೆ ಆ ಬೇಜಾರಿಗೆ ಬೆಲೆ ಇಲ್ಲ. ಕೆಲವೊಮ್ಮೆ ಬೈದ್ದಿದ್ದೇನೆ, ಎಲ್ಲವನು ಮರೆತು ನನ್ನ ಲೀಡರ್ ಅನ್ನಿಸಿದ ಆ ತಂಡಕ್ಕೆ ಋಣಿ ನಾನು.
ಮೆಟ್ರೋ ಟೀಂ ನಮ್ಮದು ಅಂತ ಖುಷಿ ಇಂದ ಕೆಲಸ ಮಾಡೋವಾಗ್ಲೇ ನನ್ನ ಹಳೆ ಆಸೆಗೆ ಉದಯವಾಣಿ ಅವಕಾಶ ನೀಡುವೆ ಅಂತು. ಅಳುಕುತ್ತ ಅನಾಥ ಭಾವದಿಂದ ಬರಮಾಡಿಕೊಂಡ ಸುವರ್ಣ ನ್ಯೂಸ್ ನನ್ನನ್ನು ಕಳಿಸಿಕೊಡುವಾಗ ಭಾವುಕವಾಯ್ತು. ನನ್ನ ಕಣ್ಣ ಅಂಚು ಒದ್ದೆಯಾಗಿತ್ತು. ವಿಶೇಷವಾಗಿ ನಮ್ ಮೆಟ್ರೋ ಟೀಂ ಹುಡುಗರು ನನ್ನ ಸೆಲೆಬ್ರಿಟಿ ತರ ಫೀಲ್ ಮಾಡೋ ಹಾಗೆ ಮಾಡಿದ್ರು. ಯಾರು ಅಳಬಾರದು ಅಂತ ಎಲ್ಲರನ್ನು ನಗಿಸುತ್ತಲೇ ಕೆಲಸ ಮುಗಿಸಿ ಹೊರಟಿದ್ದೆ. ಆಗ ತಾನೇ ನೈಟ್ ಶಿಫ್ಟ್ ಗೆ ಬಂದ ಗೆಳೆಯ ರವಿ ಅಂತು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ನನ್ನನು ಅಳಿಸಿಬಿಟ್ಟ. ಕೆಲವರು ಭಾವುಕವಾಗಿ ಮೇಲ್ ಮಾಡಿದ್ರು. ಕೊನೆಯ ಮೀಟಿಂಗ್ನಲ್ಲಿ ಹೇಳಿದೆ, ಇನ್ ಮುಂದೆ ನಾನು ನಿಮ್ ಬಾಸ್ ಅಲ್ಲ ಫ್ರೆಂಡ್ ಮಾತ್ರ. ನನ್ನ ಹೆಸರು ಹಿಡಿದು ಕರಿಯಬಹುದು ಅಂದಿದ್ದೆ. ಬೈಕ್ ಹತ್ತುವ ಹೊತ್ತಿಗೆ ಒಂದು ಹುಡುಗಿಯ ಎಸ ಎಂ ಎಸ - ಮಚ್ಚ ವೀ ಮಿಸ್ ಯು ಲಾಟ್ ಅಂತ. ಖುಷಿ ಆಯಿತು. ನಮ್ ಡ್ರೈವರ್ ವೆಂಕಿ ಲವ್ ಯು ಬಾಸ್ ಅಂತ ಮೆಸ್ಸಜಿಸಿದ. ಕೆಲವರು ಅಣ್ಣ ಅಂದ್ರು. ಫೋಟೋಸ್ ತೆಗೆದು ಫೇಸ್ ಬುಕ್, ಬ್ಲಾಗ್ ತುಂಬಿಸಿದರು. ಅವರ ಅಭಿಮಾನಕ್ಕೆ, ವಿಶ್ವಾಸಕ್ಕೆ thankssssssssssss.

ಬಟ್ ಸುವರ್ಣ ತಂಡದಲ್ಲಿ ಕೆಲಸ ಕಲಿಸುವ ಅಕ್ಕ ಶೋಭಾ ಸಿಕ್ಕಳು, ಕಾಡುವ ತಂಗಿಯರು ಸಿಕ್ಕರ್ರು, ಹಿರಿ ಕಿರಿ ಗೆಳೆಯರು ಸಿಕ್ಕರೂ. ಒಂದೇ ಒಂದು ಕೊರತೆ ಇಲ್ಲೂ ಮುಂದುವರಿಯಿತು. ಗರ್ಲ್ ಫ್ರೆಂಡ್ ಮಾತ್ರ ಸಿಗಲಿಲ್ಲ. ನೋಡೋಣ ಡೆಲ್ಲಿ ಯಾದರು ಗರ್ಲ್ ಫ್ರೆಂಡ್ ಕೊಡುತ್ತ.....??!!. ಮದ್ಹುವೆ ಆಗಿ ಹೋಗೋ ಅಂತ ಅಮ್ಮನ ಮಾತು ಯಾಕೋ ಕೇಳಿಸುತ್ತಿಲ್ಲ. ಡೆಲ್ಲಿ ಇಂದ ಪಂಜಾಬಿ ಸೊಸೆ ತಂದು ಕೊಡ್ತೀನಿ ಅಂದಿದ್ದೇನೆ. ನನ್ನ ಗೆಳೆಯರು ನನ್ನ ಹೊಸ ಹುಚಾಟ ಸಹಿಸಿಕೊಳ್ಳೋ ಭರವಸೆ ನೀಡಿದ್ದಾರೆ. ಹೊಸ ಭಯ, ಕನಸಿನೊಂದಿಗೆ ಹೊಸ ಕೆಲಸಕ್ಕೆ ಹೊರಟಿದ್ದೇನೆ.... ಗೆಲ್ಲುತ್ತೇನ ಗೊತ್ತಿಲ್ಲ