tag:blogger.com,1999:blog-63423199738485486042024-03-05T03:31:17.065-08:00ಒಂದ್ಸಲ....ಅವಿhttp://www.blogger.com/profile/07196818175613402260noreply@blogger.comBlogger38125tag:blogger.com,1999:blog-6342319973848548604.post-64665371871754946212013-06-10T05:16:00.001-07:002013-06-11T21:14:05.846-07:00ಬಟ್ಟಲು ಕಣ್ಣು, ಸುಂದರ ಪಾದಗಳು ಹಾಗೂ ಬುರ್ಖಾ ...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjYEQK-q2Op4pURCGDDRNOJWsInhzEvYDXC7VXz1jtmtBLiPFE8AjGQm6KGWQQbQQrZ_bgVB57Wju4BQzRi4EYwRO3bpagTVmMvqZHINJOe5vmzd4k7Azr7HCi1d3mZa4P3imj5lUgp-r4/s1600/Women-in-Burqa-have-no-right-to-have-tempting-eyes.jpg" imageanchor="1" style="margin-left: 1em; margin-right: 1em;"><img border="0" height="216" src="https://blogger.googleusercontent.com/img/b/R29vZ2xl/AVvXsEjYEQK-q2Op4pURCGDDRNOJWsInhzEvYDXC7VXz1jtmtBLiPFE8AjGQm6KGWQQbQQrZ_bgVB57Wju4BQzRi4EYwRO3bpagTVmMvqZHINJOe5vmzd4k7Azr7HCi1d3mZa4P3imj5lUgp-r4/s320/Women-in-Burqa-have-no-right-to-have-tempting-eyes.jpg" width="320" /></a></div>
<br />
ಮಂಡ್ಯದಿಂದ ಹೊರಟ ಕೆಂಪು ಬಸ್ಸು ಉಸ್ಸೆಂದು ನಿಲ್ಲುತ್ತಾ ಇದ್ದದ್ದು ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲೇ... ವೀರ ಸೇನಾನಿ ಮೈಸೂರು ಹುಲಿ ಟಿಪ್ಪುವಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಇವತ್ತಿಗೂ ಅನೇಕ ನಿಗೂಢಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಪ್ರತಿ ಹಳೇ ರಸ್ತೆಯು ಹೊಸ ಇತಿಹಾಸವನ್ನೇ ಹೇಳೋ ಶ್ರೀರಂಗಪಟ್ಟಣದಲ್ಲಿ ನಿಗೂಢ ತುಂಬಿಕೊಂಡ ಸುಂದರಿಯರಿಗೂ ಕೊರತೆ ಇರಲಿಲ್ಲ. ನನಗೂ ಆಗ ಅಂತದ್ದೇ ವಯಸ್ಸು. ಫೇಲಾಗಿದ್ದ ಪಿಯುಸಿಯನ್ನು ಹಾಗೂ - ಹೀಗೂ ಪಾಸು ಮಾಡಿಕೊಂಡು ಮೈಸೂರಿನ ಮಹಾರಾಜ ಕಾಲೇಜಲ್ಲಿ ಬಿಎ ಸೀಟು ಗಿಟ್ಟಿಸಿದ್ದೆ. ಎಲ್ಎಲ್ಬಿ ಮಾಡು ಎನ್ನೋ ಅಪ್ಪನ ಆದೇಶವನ್ನು ಧಿಕ್ಕರಿಸಿ ಜರ್ನಲಿಸಂ ಬಿಎ ಸೇರಿಕೊಂಡು, ಹಾಸ್ಟೆಲ್ನಲ್ಲಿ ಇರಲಾಗದೇ ನಿತ್ಯ ಊರಿಂದಲೇ ಮೈಸೂರಿಗೆ ಓಡಾಡುತ್ತಿದ್ದ ದಿನಗಳವು.<br />
ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ನಿತ್ಯ 8 ಗಂಟೆಯ ಹೊತ್ತಿಗೆ ಕಪ್ಪನೆಯ <span style="background-color: white; color: #444444; font-family: arial, sans-serif; font-size: 16px; line-height: 24px;">ಬುರ್ಖಾ </span>ಧರಿಸಿ, ಕಣ್ಣುಗಳನ್ನು ಮಾತ್ರ ಸಾರ್ವಜನಿಕ ದರ್ಶನ - ಪ್ರದರ್ಶನಕ್ಕಿರಿಸಿ ಒಬ್ಬಳು ಬರುತ್ತಿದ್ದಳು. ಅವಳ ಕಣ್ಣು ಸುತ್ತಲ ಆ ಬಿಳುಪು ಚರ್ಮ, <span style="background-color: white; color: #444444; font-family: arial, sans-serif; font-size: 16px; line-height: 24px;">ಸುಂದರ </span><span style="background-color: white; color: #444444; font-family: arial, sans-serif; font-size: 16px; line-height: 24px;">ಪಾದಗಳನ್ನ </span>ನೋಡಿದ್ರೆ ಸಾಕು ಅಬ್ಬಾ ಈಕೆ ಅದೆಷ್ಟು ಸುಂದರಿ ಇರಬೇಕು ಅನ್ನಿಸ್ತಿತ್ತು. ಒಂದು ದಿನ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿಯೂ ಬಿಟ್ಟಳು ಆ ಕಣ್ಣು ಮತ್ತು ಮೊಳಕಾಲಿನ ದರ್ಶನ ಮಾತ್ರ ನೀಡುತ್ತಿದ್ದ <span style="background-color: white; color: #444444; font-family: arial, sans-serif; font-size: 16px; line-height: 24px;">ಬುರ್ಖಾ </span> ಸುಂದರಿ.<br />
ಎಲ್ಲೋ ಒಂದು ಹುಡ್ಗಿ ನನ್ಗೂ ಸಿಗಬಹುದು. ನನ್ಗೂ ಲವ್ ಆಗಬಹುದು ಎಂದು ತವಕಿಸುತ್ತಿದ್ದ ಆ ದಿನಗಳಲ್ಲಿ ಆಕೆಯೇ ನನ್ನ ಗೆಳಯಾಗಿ, ಲವ್ವರ್ ಆದಾಳೇನೋ ಅಂತ ಯೋಚಿಸಿದ್ದು ಇತ್ತು. ನಾನೋ ಮಂಡ್ಯದಲ್ಲಿ ಬಸ್ಸು ಹತ್ತಿದ ಮೇಲೆ ಸಾಧ್ಯವಾದಷ್ಟು ಪಕ್ಕದ ಸೀಟು ಖಾಲಿ ಇರುವಂತೆ ನೋಡಿಕೊಳ್ಳುತ್ತಿದೆ. ಶ್ರೀರಂಗಪಟ್ಟಣದಲ್ಲಿ ಆಕೆ ಕಂಡ್ರೆ ಹಾಗೆ ಸೀಟನ್ನು ಅವಳು ಬರೋ ತನಕ ಖಾಲಿ ಇಟ್ಟು ಕೂರಿಸಿಕೊಳ್ತಾ ಇದ್ದೆ. ಅಷ್ಟೇ ಅದರ ಮುಂದಕ್ಕೆ ಒಂದೇ ಒಂದು ಮಾತು ಮುಂದುವರೆಯುತ್ತಿರಲಿಲ್ಲ. ಆಕೆಯೂ ಒಂದು ಥ್ಯಾಂಕ್ಸನ್ನೂ ಎಸೆಯದೇ ಸೇಂಟ್ ಫಿಲೋಮಿನಾ ಕಾಲೇಜು ಸ್ಟಾಪಿನಲ್ಲಿ ಇಳಿದು ಹೋಗಿಬಿಡುತ್ತಿದ್ದಳು. ಆಕೆಯ ಹೆಸರು ಗೊತ್ತಿಲ್ಲದೆ ಹಾಗೆ ಸೀಟು ಹಿಡಿದುಕೊಡ್ತಾ ಇದ್ದೆ.<br />
ಇದ್ದಕ್ಕಿದ್ದಂತೆ ಆಕೆ ಬರೋದು ನಿಂತು ಹೋಯಿತು. ಆದ್ರೆ, ಸೋಮವಾರಗಳಂದು ಮಾತ್ರ ಬರತೊಡಗಿದಳು ಆ ಸುಂದರ ಕಂಗಳ ಚೆಲುವೆ. ಆಕೆ ಮತ್ತೊಬ್ಬಳೊಂದಿಗೆ ಮಾತನಾಡುವಾಗ್ಲೆ ಗೊತ್ತಾಗಿದ್ದು ಆಕೆ ಅಲ್ಲೇ ಕಾಲೇಜು ಹಾಸ್ಟೆಲ್ನಲ್ಲೇ ಸೆಟ್ಲ್ ಆಗಿದ್ದಾಳೆ ಅಂತ. ಒಂದು ಸೋಮವಾರ ಆಕೆ ಎಂದಿನಂತೆ ಬಸ್ಸು ಏರಿದಳು, ಆದರೆ ನನ್ನ ಪಕ್ಕ ಸೀಟು ಖಾಲಿ ಇರಲಿಲ್ಲ. ನನಗ್ಯಾಕೋ ಮಾತನಾಡಿಸ್ಲೇ ಬೇಕು ಅಂತ ಅನ್ನಿಸತೊಡಗಿಬಿಟ್ಟಿತ್ತು. ನನ್ನ ಸೀಟು ಪಕ್ಕದಲ್ಲೇ ನಿಂತಿದ್ರೂ ಒಂದೇ ಒಂದು ಮಾತು ಆಡಲಿಲ್ಲ. ಬಟ್ ಆಕೆ ಇಳಿಯುವಾಗ ಅದೇನೆನ್ನಿಸಿತೋ ಏನೋ ಒಂದು ಸ್ಮೈಲ್ ಎಸೆದು ಇಳಿಯತೊಡಗಿದಳು. ನಾನು ಆಕೆಯನ್ನೇ ಹಿಂಬಾಲಿಸಿ ಬಸ್ಸು ಇಳಿದುಬಿಟ್ಟೆ. ಆಕೆ ನಾನು ಇಳಿದದ್ದನ್ನು ನೋಡಲಿಲ್ಲ, ಇತರ ಗೆಳೆತಿಯರೊಂದಿಗೆ ಮಾತನಾಡುತ್ತಾ ಕಾಲೇಜಿನ ಒಳಗೆ ಕಾಲಿಡತೊಡಗಿದಳು. ನಾನು ಅವಳ ಹಿಂದೆಯೇ ಹೆಜ್ಜೆ ಹಾಕಿದ್ದೆ...<br />
ಕಾಲೇಜು ಕಾಂಪೌಂಡ್ ಎಂಟರ್ ಆಗ್ತಾ ಇದ್ದ ಹಾಗೆ ತಲೆ ಮೇಲಿನ <span style="background-color: white; color: #444444; font-family: arial, sans-serif; font-size: 16px; line-height: 24px;">ಬುರ್ಖಾ </span>ಸರಿಸತೊಡಗಿದಳು... ನನಗೋ ಫುಲ್ ಎಕ್ಸೈಟ್ಮೆಂಟ್ ಕ್ಷಣ... ಸರಿ ಸುಮಾರು ನಾಲ್ಕೂವರೆ ತಿಂಗಳು ಕಣ್ಣು - <span style="background-color: white; color: #444444; font-family: arial, sans-serif; font-size: 16px; line-height: 24px;">ಪಾದಗಳನ್ನ </span> ನೋಡಿಯೇ ಫಿದಾ ಆಗಿದ್ದ ನನಗೆ ಆಕೆಯ ಮುಖ ದರ್ಶನ ಆಗೋ ಸಮಯ ಅದು. ಆ ಕಪ್ಪನೆಯ ಬಟ್ಟೆ ತಲೆ, ಮುಖವನ್ನು ತೆರವಾದ ಕೂಡಲೇ ನನ್ನ ಮುಖದಲ್ಲಿ ಇದ್ದ ಕುತೂಹಲದ ಸಂತಸ ಮಂಕಾಯಿತು... ಛೇ.... ಎಂಬ ಉದ್ಗಾರ ನನ್ನ ಬಾಯಿಂದ ಬಂತು. ಕಾರಣ, ಅವಳ ಬಿಳುಪೇ ನಾಚುವಷ್ಟು ಕುರೂಪಳಂತೆ ಆಕೆ ಕಂಡಳು. ಉಬ್ಬಿದ ಹಲ್ಲು ಇಡೀ ಸೌಂದರ್ಯವನ್ನೇ ಹಾಳು ಮಾಡಿದ್ದವು. ಚೂಪು ಮುಖಕ್ಕೆ ಆ ವಿಚಿತ್ರ ಉಬ್ಬು ಹಲ್ಲುಗಳು <span style="background-color: white; color: #444444; font-family: arial, sans-serif; font-size: 16px; line-height: 24px;">ಅಕ್ವರ್ಡ್ </span> ಅನ್ನಿಸಿ, ಕುರೂಪಿ ಅನ್ನಿಸುತಿತ್ತು.<br />
ಇದಾಗಿ 12 ವರ್ಷಗಳು ಕಳೆದು ಹೋಗಿದೆ. ಯಾಕೋ ನೆನಪಾದಳು. ಸುಮ್ಮನೆ ಗೀಚಿದೆ...!?</div>
ಅವಿhttp://www.blogger.com/profile/07196818175613402260noreply@blogger.com1tag:blogger.com,1999:blog-6342319973848548604.post-8732093561555577942013-02-10T08:12:00.002-08:002013-02-10T08:12:12.157-08:00ಆತ್ಮಸಾಕ್ಷಿ<div dir="ltr" style="text-align: left;" trbidi="on">
<span class="userContent">ಆತ್ಮಸಾಕ್ಷಿ ನೆಚ್ಚಿ ದುಡಿವವರು ನಾವು<br /> ಆತ್ಮಸಾಕ್ಷಿ ಬಿಟ್ಟು ಬೇರಾರಿಗೂ ಹೆದರೆನು<br /> ಆದರೇನು ಮಾಡಲಿ, ಈ ಊರು ಬೇಡುವುದು ಬರಿಯ ಸಾಕ್ಷಿಯನು<br /> ಇವರು ನೀಡುವ ನೋವಿಗೆ,<br /> ಗಾಯ ಆಗೋದಿಲ್ಲ, ರಕ್ತ ಸುರಿಯೋದಿಲ್ಲ<br /> ಆದರೂ ನೋವಾಗುತ್ತದೆ ಪ್ರಾಣವೇ ಬಾಯಿಗೆ ಬಂದಂತೆ<br /> ನೊಂದವನಿಗೆ ಮಾತ್ರ ಗೊತ್ತಾಗುತ್ತದೆ ನೋವು<br /> ಇದಕ್ಕೆಲ್ಲಿಂದ ತರಲಿ ಸಾಕ್ಷಿ...!<br /> ಪ್ರಾಮಾಣಿಕತೆಯೇ ಪಾಶವೇ ಈ ಊರಲಿ...!?<br /> ನನ್ನ ಆತ್ಮಸಾಕ್ಷಿಯ ನಾ ಏನ ಮಾಡಲಿ...!</span></div>
ಅವಿhttp://www.blogger.com/profile/07196818175613402260noreply@blogger.com0tag:blogger.com,1999:blog-6342319973848548604.post-3502704162505595042012-12-30T08:48:00.001-08:002012-12-30T08:48:24.310-08:00ಹಳೇ ಇನ್ಬಾಕ್ಸು ತೆರೆದಾಗ....<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhaHPnXdkPYz2SyFXldEN_hBg1K4S4n2ZXUJkXbwyZRt0O9URvwGyAvz8veXOiqNZ7fbAVL0BwFpkdqqoc848KvY0bl1_DfIvwrg49ryU2nU2viCTyGsPRE4mr427uxB7fqtPK19U6GkYU/s1600/avi3.JPG" imageanchor="1" style="margin-left: 1em; margin-right: 1em;"><img border="0" height="168" src="https://blogger.googleusercontent.com/img/b/R29vZ2xl/AVvXsEhaHPnXdkPYz2SyFXldEN_hBg1K4S4n2ZXUJkXbwyZRt0O9URvwGyAvz8veXOiqNZ7fbAVL0BwFpkdqqoc848KvY0bl1_DfIvwrg49ryU2nU2viCTyGsPRE4mr427uxB7fqtPK19U6GkYU/s320/avi3.JPG" width="320" /></a></div>
<br />
ಹೈಸ್ಕೂಲ್, ಕಾಲೇಜಿನ ಹಳೇ ನೋಟ್ಬುಕ್ಗಳ ಕೊನೆ ಪೇಜುಗಳು ನೋಡಿದಷ್ಟೆ ಖುಷಿ ಪಟ್ಟೆ. ಜಿಮೇಲ್ ಪಾಪ್ಯುಲರ್ ಆದ್ಮೇಲೆ ನನ್ನ ಮೊಟ್ಟ ಮೊದಲ ಇಮೇಲ್ ಐಡಿ ಆದ ಯಾಹೂ ಬಳಸೋದು ಬಿಟ್ಟಿದ್ದೆ. ಅದಕ್ಕೆ ಮತ್ತೊಂದು ಕಾರಣವೂ ಇತ್ತು ಎನ್ನಿ. 2012 ಮುಗ್ಸಿ 2013 ಶುರು ಮಾಡೋ ಹೊತ್ತಿನಲ್ಲಿ, ಯಾಕೋ ಹಳೇ ಐಡಿ ಇದ್ಯಾ ಚೆಕ್ ಮಾಡ್ಬೇಕು ಅನ್ನಿಸ್ತು. ನಾನು ಡೆಲ್ಲಿಯಲ್ಲಿದ್ದಾಗ ಒಮ್ಮೆ ತೆರೆದು ನೋಡಿದ್ದೆ... ಅದನ್ನು ಬಿಟ್ರೆ ಈಗ ತೆರೆದು ನೋಡಿದೆ. ಭಾನುವಾರ ಅಲ್ವಾ ಪುರಸೊತ್ತಾಗಿದ್ದೆ.. ಹಳೇ ಮೇಲು ಚೆಕ್ ಮಾಡ್ತಾ ಮಾಡ್ತಾ ಸ್ವಲ್ಪ ಎಮೋಷನಲ್ ಆದೆ. ಹಳೇ ಫೋಟೋಗಳು. ಹಳೇ ಮಾತುಗಳು. ನೆನಪಿನ ಪುಟ ತಿರುವತೊಡಗಿದವು.<br />
<br />
ಈ ಇಮೇಲ್ ಐಡಿ ಕ್ರಿಯೇಟ್ ಮಾಡೋಕೆ ಇವತ್ತು ಡಾಕ್ಟರ್ ಆಗಿರೋ ಗೆಳೆಯ ಮಂಜು ಮತ್ತು ನಾನು ಸುಮಾರು 12 ವರ್ಷದ ಹಿಂದೆ ಮಂಡ್ಯದ ಆರ್ಪಿ ರಸ್ತೆಯಲ್ಲಿದ್ದ ಆಗಿನ ಏಕೈಕ ಸೈಬರ್ ಸೆಂಟರ್ನಲ್ಲಿ ಹರಸಾಹಸ ಪಟ್ಟಿದ್ದೆವು. ಯಾಹೂ ಅನ್ನೋ ಪದದ ಮೋಹಕ್ಕೆ ಒಳಗಾಗಿಯೇ ಅವತ್ತು ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿದ್ವು. ಅದಕ್ಕೆ ಗೆಳೆಯ ಮಂಜನೇ ಪಾಸ್ವಡರ್್ ಟೈಪಿಸಿದ್ದ... ಯಾಕೋ ನಾನು ಅದನ್ನು ಈವರೆಗೆ ಚೇಂಜ್ ಮಾಡಿಲ್ಲ. ಯಾಹೂ ಇನ್ಬಾಕ್ಸ್ ನೋಡ್ತಾ ನೋಡ್ತಾ ಅನ್ಸಿದ್ದು. `ನನ್ನ ಈಗಿನ ಜಿಮೇಲ್ನಲ್ಲಿ ಚೂರೂ ಎಮೋಷನ್ ಇಲ್ಲ' ಅಂತ. ಧಾರವಾಡ ಬಿಡೋ ತನಕ ಚಟುವಟಿಕೆಯಿಂದ ಇದ್ದ ಯಾಹೂ. ಬೆಂಗಳೂರಿಗೆ ಬಂದ ಮೇಲೆ ಜಿಮೇಲ್ ಬೇಕಿನಿಸಿಬಿಟ್ಟಿತು. ಬೆಂಗಳೂರಿನಂತೆಯೇ ಜಿಮೇಲ್ ಪಕ್ಕಾ ಪ್ರೊಫೆಷನಲ್ ಮತ್ತು ಬಿಸಿನಸ್ ಮೈಡೆಂಡ್ ಆಗಿಯೇ ನನ್ನಲ್ಲಿ ಉಳಿದುಬಿಟ್ಟಿತು.<br />
<br />
ಇದೇ ಯಾಹೂವಿನ ಇನ್ಬಾಕ್ಸ್ಗಳಿಗೆ ಒಂದೂ ಮೇಲ್ ಬಂದಿಲ್ಲವಲ್ಲ ಅಂತ ಎಷ್ಟೋ ಬಾರಿ ಮೈಸೂರಿನ ರಮಾವಿಲಾಸ ರಸ್ತೆಯಲ್ಲಿದ್ದ ಗಲ್ಲಿಯಲ್ಲಿನ ಮೋಹನ್ ಸೈಬರ್ ಸೆಂಟರ್ನಲ್ಲಿ ಕುಳಿತು ಹಳಹಳಿಸಿದ್ದು ಇದೆ. ಅದಕ್ಕೆ ಬಂದು ಬಿಡಬಹುದಾದ ಗೆಳತಿಯರ ಬೆಚ್ಚನೆಯ ಮೇಲ್ಗಳಿಗೆ ಕಾತರಿಸಿದ್ದು, ಆ ಮೇಲ್ಗಳನ್ನು ಪದೇ ಪದೇ ಓದಿಕೊಂಡು ಉತ್ತರಿಸಿದ ನೆನಪುಗಳೆಲ್ಲಾ ಕಣ್ಣ ಮುಂದೆ ಸುಳಿದು ಹೋದವು. ಯಾಹೂ ಇನ್ಬಾಕ್ಸ್ನಲ್ಲಿ ಒಂದು ವರ್ಷದಿಂದ ಜಾಹಿರಾತು ಮೇಲ್ಗಳನ್ನು ಹೊರತುಪಡಿಸಿ ನನಗಾಗಿಯೇ ಬಂದಿದ್ದು ಎರಡು ಮೇಲ್ ಮಾತ್ರ. ನನ್ನ ಗೆಳತಿಯೊಬ್ಬಳ ರೆಫರೆನ್ಸ್ ಇರೋ ರೆಸ್ಯುಮ್ ಮಾತ್ರ. ಪಾಪ ಅವಳ ಬಳಿ ನನ್ನ ಹೊಸ ಐಡಿ ಇಲ್ವೇ ಇಲ್ಲ...!<br />
<br />
ನನ್ನ ಹಳೇ ಫೋಟೋಗಳನ್ನು ನನ್ನ ಈಗಿನ ಅವಸ್ಥೆಯನ್ನು ನೋಡಿ ನನ್ಗೇ ನಗು ಬಂತು. 2007 ಮಾಚರ್್ 30ರಂದು ಮೈಸೂರಿನಲ್ಲಿ ನನ್ನ ಕೊನೆಯ ದಿನದ ಕೆಲಸ. ಅವತ್ತೇ ಮೈಸೂರಿನ ಜಯಪುರದ ಬಳಿ ಸಮುದಾಯ ಭವನದ ಶಂಕುಸ್ಥಾಪನೆಗಾಗಿ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ್ರಿಗೆ ಜೋರು ಜಗಳ. ಲಾಠಿ ಚಾಜರ್್ ಆಗಿ ಮೂರು ಬಸ್ಸುಗಳಿಗೆ ಬೆಂಕಿ ಬಿತ್ತು. ಅವತ್ತು ಸಿದ್ದರಾಮಯ್ಯ ಅವರನ್ನ ಬಂಧಿಸಿ ಮೈಸೂರು ಪೊಲೀಸ್ ಗ್ರೌಂಡಿನಲ್ಲಿ ಬಂಧಿಸಿಡಲಾಯ್ತು. ಅಲ್ಲಿಂದ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯ ಮೈಸೂರು ಡಿಸಿ ಕಚೇರಿ ಬಳಿ ಹೋಗಿ ಕುಳಿತುಬಿಟ್ರು. ಇದೆಲ್ಲಾ ಮುಗಿವಾಗ ಬೆಳಗಿನ ಜಾವ 2 ಗಂಟೆ. ಕೊನೆ ಕ್ಷಣದ ಸುದ್ದಿ ಬರೆದು ಮುಗಿಸುವ ತನಕ ಕಾದು ಕುಳಿತಿದ್ದ ಮೈಸೂರು ಕನ್ನಡಪ್ರಭದ ಸಹದ್ಯೋಗಿಗಳು ನನಗೆ ಶಾಲು ಹೊದೆಸಿ, ಹಣ್ಣು ನೀಡಿ ಆತ್ಮೀಯ ಬೀಳ್ಕೊಡುಗೆ ಕೊಟ್ರು. ನನ್ನ ಗುರು ಅಂಶಿ ಪ್ರಸನ್ನಕುಮಾರ್ ಲೀಡರ್ಶಿಪ್ನಲ್ಲಿ ಇಡೀ ಕಚೇರಿಯೇ ನನಗೆ ಶುಭ ಹಾರೈಸಿತು. ಮೈಸೂರಿನಲ್ಲಿ ನನ್ನಪಾಲಿನ ಕೇರಾಫ್ ಆಗಿದ್ದ ಶ್ರೀಕಾಂತ್, ಸದಾ ಬೈದಾಡುತ್ತಾ ಹೊಗಳುತ್ತಿದ್ದ ಇಂಡಿಯನ್ ಎಕ್ಸಪ್ರೆಸ್ನ ಶಿವಕುಮಾರ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಮೈಸೂರಿನ ನೆನಪಿಗೆ. ಮುಂಜಾವಿನಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಅವತ್ತೇ ಮಧ್ಯಾಹ್ನ ಬೆಂಗಳೂರಿನಲ್ಲಿ ಒಂದು ತಿಂಗಳ ತರಬೇತಿಗಾಗಿ ಜಾಯಿನ್ ಆದೆ. ನಂತ್ರ ಹೊರಟದ್ದು ಧಾರವಾಡಕ್ಕೆ. ಧಾರವಾಡ ನನ್ನ ಪ್ರೊಫೆಷನಲ್ ಹಾಗೂ ಪರ್ಸನಲ್ ಆಗಿ ಬೆಳೆಸಿತು ಮತ್ತು ಉಳಿಸಿತು. ಎಲ್ಲ ಚಿತ್ರಗಳು ಕಣ್ಣ ಮುಂದೆ ಸುಳಿದಾಡತೊಡಗಿತು.<br />
<br />
ಅವತ್ತು ಮೈಸೂರು ಬಿಡುವಾಗ ಭಯ ಇದ್ದರೂ, ಅದಕ್ಕಿಂತ ಹೆಚ್ಚಿನ ಆತ್ಮವಿಶ್ವಾಸ, ಕಾತರ, ಹೊಸ ಐಡಿಯಾಗಳು, ಗುರಿ ಮತ್ತು ಅವಳು ನನ್ನ ಮುನ್ನಡೆಸತೊಡಗಿದ್ದರು. ನಾನು ಯಾವತ್ತೂ ಬಯಸಿರದ ಜಾಗದಲ್ಲಿ ಇವತ್ತು ನಿಂತಿದ್ದೇನೆ. ಮೈಸೂರಿನಿಂದ ಟ್ರಾನ್ಸ್ಫರ್ ಕೇಳಿದ್ದೀನಿ ಸರ್ ಅಂದಾಗ, ಯಾಕೆ ಅಂತ ಕಾಳಜಿಯಿಂದ ವಿಚಾರಿಸಿಕೊಂಡಿದ್ರು ಗುರುಗಳಾದ ಅಂಶಿಪ್ರಸನ್ನಕುಮಾರ್, ನನ್ನ ಅಲೆಮಾರಿ ಚಟ ಗೊತ್ತಾಗಿ ಬೆನ್ನುತಟ್ಟಿ ಕಳುಹಿಸಿದ್ರು. ಅವರ ಹೆಸರಿಗೆ ಧಕ್ಕೆ ಬರದ ರೀತಿಯಲ್ಲಿ ಈ ಕ್ಷಣದವರೆಗೆ ಕೆಲಸ ಮಾಡಿದ್ದೇನೆ. ಕಂಪನಿ ಯಾವುದೇ ಇರಲಿ ಯಾವಾಗಲೂ ನನಗೆ ಮಾರ್ಗದರ್ಶನ ಮಾಡಿದವರು. ಈ 6 ವರ್ಷದಲ್ಲಿ ಏನೆಲ್ಲ ಪಡೆದೆ, ಏನೆಲ್ಲಾ ಕಳ್ಕೊಂಡೆನೋ...? ಮೈಸೂರು ಬಿಟ್ಟ ಮೇಲೆ ಚೂರು ಚೂರಾಗಿ ನನ್ನ ಹುಟ್ಟೂರು, ಮನೆಯವರ ಜೊತೆ ಸಂಪರ್ಕ ಕಡಿಮೆಯಾಗತೊಡಗಿತು. ಸದ್ಯಕ್ಕೆ ನಾನು ನಮ್ಮೂರಿಗೆ 6 ತಿಂಗಳಿಗೋ - ವರ್ಷಕ್ಕೋ ಹೋಗುವಂತಾಗಿದ್ದೇನೆ. ಆರೋಗ್ಯ ಕೆಟ್ಟು ಕೆರ ಹಿಡಿಯೋವಷ್ಟು ದಪ್ಪಗಾಗಿದ್ದೇನೆ. ಅನೇಕ ಗೆಳೆಯರನ್ನು ಪಡೆದಿದ್ದರೂ, ಬೆಂಗಳೂರಿಗೆ ಬಂದ ಮೇಲೆ ಹಳೇ ಗೆಳೆಯರನ್ನು ಕಳೆದುಕೊಂಡಿದ್ದೇನೆ ಅನ್ನೋ ಭೀತಿ ಇದೆ. ಮುಂದೆ ಏನು? ನಾನೇನು ಆಗ್ಬೇಕು...? ಅನ್ನೋ ಗೊಂದಲದಲ್ಲೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಜೊತೆಗೆ ನಾವಿದ್ದೇವೆ ಅಂತ ಬಾರಿ ಬಾರಿ ಹೇಳ್ತಾ ಇದ್ರೂ ಯಾಕೋ ಒಂಟಿ ಒಂಟಿ ಅನ್ನಿಸ್ತದೆ. ಪ್ಲೀಸ್ ಮದ್ವೆ ಆಗು ಸರಿ ಹೋಗುತ್ತೆ ಅಂತ ಮಾತ್ರ ಹಳಸಲು ಸಜೆಷನ್ ಕೊಡ್ಬೇಡಿ. ಅನುಭವಕ್ಕಿಂತ ದೊಡ್ಡ ಮೇಷ್ಟ್ರು ಇಲ್ಲ. ಆದ್ರೆ ಕಾಸ್ಟ್ಲಿ ಮೇಸ್ಟ್ರು ಅವ್ರು. ಟಿವಿ ಚಾನಲ್ಗಳು ಏನೆಲ್ಲಾ ನನ್ನಿಂದ ಕಿತ್ತುಕೊಂಡಿದ್ರೂ ತುಂಬಾ ರಿಚ್ ಅನ್ನಿಸೋ ಅನುಭವ ಕೊಟ್ಟಿದೆ. ಅಪರೂಪಕ್ಕೆ ಬರೆಯೋಕೆ ಕುಳಿತಿರೋದ್ರಿಂದ ಇನ್ನೂ ಬರೀಬೇಕು ಅನ್ನಿಸ್ತಿದೆ. ಬಟ್ ನಿಮ್ಮ ಮೇಲಿನ ಕರುಣೆಯಿಂದ ಇಲ್ಲಿಗೆ ನಿಲ್ಲಿಸ್ತೀನಿ. ಸರಿ ಎಲ್ರಿಗೂ ಹೊಸ ವರ್ಷದ ಶುಭಾಶಯಗಳು.<br />
<br />
(ಫೋಟೋ ವಿವರ - ಮೈಸೂರು ಕನ್ನಡಪ್ರಭ ಕಚೇರಿಯಿಂದ ಧಾರವಾಡಕ್ಕೆ ಹೊರಟಾಗ ನನಗೆ ಸಿಕ್ಕ ಬೀಳ್ಕೊಡುಗೆಯ ಫೋಟೋ)<br />
<br />
<br />
<br />
</div>
ಅವಿhttp://www.blogger.com/profile/07196818175613402260noreply@blogger.com0tag:blogger.com,1999:blog-6342319973848548604.post-86566503810961619892012-09-18T02:21:00.001-07:002012-09-18T02:23:25.005-07:00ಲೈಫು ಅನ್ನೋದು... <div dir="ltr" style="text-align: left;" trbidi="on">
<img src="http://www.malaysianur.com/wp-content/uploads/2012/07/Life.jpg" />
<br />
<br />
ಲೈಫು ಅನ್ನೋದು ಕನ್ನಡ ಫಿಲಂ ಅಲ್ಲ ಕಣ್ರೀ... ಲೈಫು ಅಂದ್ರೆ ತಮಿಳು ಸಿನ್ಮಾ. ಇದ್ದಂಗೆ.... ಕನ್ನಡ ಫಿಲಂನಲ್ಲಿ ಹಾಡು ಬರುತ್ತೆ ಅಂದುಕೊಳ್ತಿದ್ದಂಗೆ ಹಾಡು... ಫೈಟು ಬೇಕು ಅನ್ನಿಸ್ತಾ ಇದ್ದಂಗೆ ಫೈಟು ಶುರು ಆಗ್ಬಿಡುತ್ತೆ... ಆದ್ರೆ, ಈ ಕೊಂಗನಾಡಿನ ಮಂದಿ ಇದ್ದಾರಲ್ಲ ತಮಿಳರು ತೆಗಿಯೋ ಸಿನ್ಮಾ ಥೇಟು ಲೈಫು ಇದ್ದಂಗೆ.. ನಮ್ಮ ನಿರೀಕ್ಷೆಯಲ್ಲಾ ಸುಳ್ಳು ಮಾಡ್ಕೊಂಡು ಅನಿರೀಕ್ಷಿತ ಕ್ಲೈಮ್ಯಾಕ್ಸ್ ಬಂದು ಬಿಡುತ್ತೆ...</div>
ಅವಿhttp://www.blogger.com/profile/07196818175613402260noreply@blogger.com0tag:blogger.com,1999:blog-6342319973848548604.post-22792471084335901622012-06-22T09:20:00.001-07:002012-06-22T09:20:36.201-07:00ಯಾರೂ ಬಾರದಿರಲಿ...<div dir="ltr" style="text-align: left;" trbidi="on">
<br />
ನನ್ನ ಪಾಡಿಗೆ ನಾನಿದ್ದೆ<br />
ಗಾಯ, ಅದರ ನೋವು, ನೆನಪೂ ರೂಢಿಯಾಗಿತ್ತು<br />
ಇದ್ದಕ್ಕಿದ್ದಂತೆ ಬಂದೋಳು<br />
ಗಾಯದ ಮೇಲೆ ಬರೆ ಎಳೆದಳು...<br />
ಹೊಸ ಗಾಯ ಮಾಡಿದಳು<br />
ಆ ಗಾಯ ಮಾಯಲು ಬಿಡದೇ<br />
ನನ್ನ ಸಾಯಲು ಬಿಡದೇ ಕಾಡುತಿಹಳು<br />
ಈ ನೋವು ರೂಢಿಯಾಗಲು ಇನ್ನೆಷ್ಟು ದಿನ ಬೇಕೋ....?<br />
ಬಟ್... ಮತ್ತೆ ತಮಾಷೆಗೂ ಯಾರೂ ಬಾರದಿರಲಿ...<br />
ಅವರ ಕೆಲಸ ಮುಗಿಸಿ, ಗಾಯ ಮಾಡಿ ಹೋಗಲು...<br />
</div>ಅವಿhttp://www.blogger.com/profile/07196818175613402260noreply@blogger.com0tag:blogger.com,1999:blog-6342319973848548604.post-52666556151172970232012-06-17T06:09:00.002-07:002012-06-17T06:09:34.474-07:00ಕರ್ಚಿಫು<div dir="ltr" style="text-align: left;" trbidi="on">
ನಾನು ಕರ್ಚಿಫು ಬಳಸುವುದಿಲ್ಲ<br />
ಕರ್ಚಿಫು ನೋಡಿದರೆ ಕನ್ನಡಿ ನೆನಪಾಗುತ್ತೆ<br />
ಕನ್ನಡಿಯಲಿ ನನ್ನ ಕಂಡಂತೆ ಆಗುತ್ತದೆ<br />
ಕರ್ಚಿಫು ನೋಡಿ ಮರಗುತ್ತೇನೆ,<br />
ನನ್ನ ಸ್ಥಿತಿ ನೆನೆದು ನಗುತ್ತೇನೆ<br />
ನಾನು ಕರ್ಚಿಫು.......... <br />
<br /> </div>ಅವಿhttp://www.blogger.com/profile/07196818175613402260noreply@blogger.com0tag:blogger.com,1999:blog-6342319973848548604.post-29097406424937234352011-08-30T01:39:00.000-07:002011-08-30T05:21:15.268-07:00ಗಲ್ಲಿ ಟು ಡೆಲ್ಲಿ.....<a href="https://blogger.googleusercontent.com/img/b/R29vZ2xl/AVvXsEisbpoa3I_S8XI6Z_JOYlmrEUFvE6bunlGKiz0ZyXxoRUYiJkJPn4I0qhr1RSlbt4_qN_kqR9u7Aan2QksxS7ibvLCCfq3-DGGNL5Qi-D1i5L9LzXGtREuH5_VanyI1XY1TuG-bZJnssog/s1600/DSC_3497.jpg" onblur="try {parent.deselectBloggerImageGracefully();} catch(e) {}"><img style="display:block; margin:0px auto 10px; text-align:center;cursor:pointer; cursor:hand;width: 400px; height: 329px;" src="https://blogger.googleusercontent.com/img/b/R29vZ2xl/AVvXsEisbpoa3I_S8XI6Z_JOYlmrEUFvE6bunlGKiz0ZyXxoRUYiJkJPn4I0qhr1RSlbt4_qN_kqR9u7Aan2QksxS7ibvLCCfq3-DGGNL5Qi-D1i5L9LzXGtREuH5_VanyI1XY1TuG-bZJnssog/s400/DSC_3497.jpg" border="0" alt="" id="BLOGGER_PHOTO_ID_5646566213354027698" /></a>
<br /><div>
<br /></div><div>ದಿಲ್ಲಿಗೆ ಬಂದು ಒಂದು ತಿಂಗಳಾಗಿ ಹೋಯಿತು. ನನಗೆ ಇನ್ನೂ ಜಾಸ್ತಿ ದಿನ ಆಗಿಬಿಟ್ಟಿದೆ ಅಂತ ಫೀಲ್ ಆಗ್ತಿದೆ. ವಿಚಿತ್ರ ಹವಾಗುಣದ ಈ ಊರನ್ನು ಅರ್ಥ ಮಾಡಿಕೊಳ್ಳೋ ಓಡಾಟದಲ್ಲಿ ದಿನ ಕಳಿತಾ ಇದೆ. ಬರ್ತಾ ಇದ್ದ ಹಾಗೆ ಯಡಿಯೂರಪ್ಪ ರಾಜೀನಾಮೆ ಪ್ರಕರಣ, ಅದಾದ ನಂತರ ಅಣ್ಣಾ ಹಜಾರೆ ಆಂದೋಲನಕ್ಕೆ ಸಾಕ್ಷಿಯಾಗೋ ಅವಕಾಶ ಸಿಕ್ಕಿತು.</div><div>ಈ ದಿಲ್ಲಿಯಲ್ಲಿ ಓಡಾಡಬೇಕು, ಕೆಲಸ ಮಾಡಬೇಕು ಅನ್ನೋದು ಇಂದು ನಿನ್ನೆಯ ಆಸೆ ಅಲ್ಲ. ಕಾಲೇಜಿನಲ್ಲಿ ಇದ್ದಾಗಲೇ ದೆಹಲಿಯಲ್ಲಿ ಕೆಲಸ ಮಾಡಬೇಕು ಅನ್ನೋ ಕನಸು ಹಂಚಿಕೊಂಡಿದ್ದೆ. ಅದನ್ನು ಅರಿತಿದ್ದ ಈ ಟಿವಿಯಲ್ಲಿದ್ದ ಗೆಳೆಯ ಚೇತನ್ (ಈಗ ಬೆಂಗಳೂರು ಇಂಡಿಯನ್ ಎಕ್ಸಪ್ರೆಸ್ನಲ್ಲಿ ಇದ್ದಾನೆ) 2008ರಲ್ಲಿ ಈಟಿವಿಯಿಂದ ದೆಹಲಿಗೆ ಬರೋ ಅವಕಾಶ ಕೊಡಿಸಿದ್ದ. ಬಟ್ ಅನಿವಾರ್ಯ ಕಾರಣಗಳಿಂದ ನಾನು ಬಂದಿರಲಿಲ್ಲ. ಆದ್ರೆ, ದೆಹಲಿಯ ಆಸೆ ಮಾತ್ರ ಹಾಗೇ ಇತ್ತು. ಅದಕ್ಕೆ ಮತ್ತೆ ಅವಕಾಶ ನೀಡಿದವರು ಉದಯವಾಣಿಯ ರವಿಹೆಗಡೆ.</div><div>ದೆಹಲಿಯ ಫು<span class="Apple-tab-span" style="white-space:pre"> </span>ಟ್ಪಾತ್ ಮೇಲೆ ಒಬ್ಬನೇ ಓಡಾಡುವಾಗ ಏನೇನೋ ನೆನಪಾಗುತ್ತೆ. ವೆಟರನರಿ ಡಾಕ್ಟರೋ, ಬಿಎಸ್ಸಿ ಅಗ್ರಿ ಮಾಡಬೇಕು ಅನ್ನೋ ಆಸೆಯಿಂದ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಓದುವಾಗ ಗಮನ ಎಲ್ಲೆಲ್ಲೋ ಹರಿಯಿತು. ಟ್ಯೂಷನ್ಗೆ ಹೋಗದೇ ಪಾಸ್ ಮಾಡಬೇಕು ಅನ್ನೋ ನನ್ನ ನಿಧರ್ಾರವನ್ನು ಬದಲಿಸಿದ್ದು ಗೆಳೆಯ ತಪ್ಲೆ. ಟ್ಯೂಷನ್ಗೆ ಹೋಗಲು ಶುರುಮಾಡಿದವನು ಓದುವುದು ಬಿಟ್ಟೆ. .......... ಹಿಂದೆ ತಿರುಗುವುದು ಕಲಿತೆ. ಅದು ನನ್ನ ಭ್ರಮೆ ಅಂತ ಅರಿವಾಗುವಷ್ಟರಲ್ಲಿ ಮನೆಯಲ್ಲಿ ಅಪ್ಪ - ಚಿಕ್ಕಪ್ಪನ ತಲ್ಲಣ. ನಾನು ಭೂಮಿತಾಯಿ ನಂಬಿದವನಂತೆ ಗದ್ದೆ ಕೆಲಸಕ್ಕೆ ಇಳಿದುಬಿಟ್ಟೆ. ಕನ್ನಡ, ಇಂಗ್ಲಿಷು ಮತ್ತು ಬಯೋಲಾಜಿ ಮಾತ್ರ ಪಾಸಾಯಿತು. ಉಳಿದ ಮೂರರಲ್ಲೂ ಫೇಲು. ಅದನ್ನು ನಂಬಲು ಮನೆಯವರಿರಲಿ, ನನ್ನ ಹಿಂದೆ ಮುಂದೆ ಪರೀಕ್ಷೆಗೆ ಕುಳಿತಿದ್ದ ಹುಡುಗ - ಹುಡುಗಿಯರು ನಂಬಲು ರೆಡಿ ಇರಲಿಲ್ಲ. ಕಾರಣ, ಪರೀಕ್ಷೆ ಬರೆಯುವಾಗ ಅಷ್ಟೊಂದು ಅಡಿಷನಲ್ ಶೀಟ್ ತೆಗೆದುಕೊಂಡಿದ್ದೆ....!</div><div>ಆಮೇಲೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಅಪ್ಪ - ಅಮ್ಮನ ಒತ್ತಾಯಕ್ಕೆ ಕಟ್ಟಿದೆ. ಅಮ್ಮನಿಗೋ ನನ್ನ ಮಗ ಗದ್ದೆ ಕೆಲಸಕ್ಕೆ ಇಳಿದು ಫೇಲ್ ಮಾಡಿಕೊಂಡ ಅಂತ ತಪ್ಪು ತಿಳಿದಳು. ನಾನೋ ಮೊದಲ ಪರೀಕ್ಷೆಯಲ್ಲಿ ತೆಗೆದುಕೊಂಡ ಅಡಿಷನಲ್ ಶೀಟ್ನ ಸಾಲ ತೀರಿಸುವವನಂತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಖಾಲಿ ಹಾಳೆ ಕೊಟ್ಟು ಎದ್ದು ಬರುತ್ತಿದ್ದೆ. ಒಂದು ದಿನ ಫಿಸಿಕ್ಸ್ ಲೆಕ್ಚರರ್ ಹೇಮಲತಾ ಮೇಡಂ ಖಾಲಿ ಯಾಕೋ, ಏನು ಬರೆದಿಲ್ಲ ಅಂತ ಹಾಕಿದ ಪ್ರಶ್ನೆಗೆ, `ವ್ಯಾಲ್ಯೂವೇಷನ್ ಮಾಡೋರಿಗೆ ಕಾಣ್ಸುತ್ತೆ ಬಿಡಿ' ಅಂತ ಉಡಾಫೆ, ಉದ್ದಟತನದ ಮಾತನಾಡಿ ಬಂದಿದ್ದೆ. ಕಾಲೇಜಿನಲ್ಲಿ ನನ್ನ ಇಮೇಜು ಹಾಗೆ ಇದ್ದುದ್ದರಿಂದ ಅವರು ತಿರುಗಿ ಮಾತನಾಡಲು ಹೋಗಿರಲಿಲ್ಲ.</div><div>ಅಷ್ಟರಲ್ಲಿ ಅಪ್ಪ - ಚಿಕ್ಕಪ್ಪನ ಜಗಳಗಳಿಂದಾಗಿ ಜಮೀನು ಚಿಕ್ಕದಾಯ್ತು. ಜಮೀನು ಮಾಡಿಸಲು ಇನ್ಯಾರಿಗೋ ಕೊಟ್ಟರು. ಫೇಲಾಗಿದ್ದ ನನಗೆ ನಿತ್ಯ ಬೈಗುಳ, ನಿಂದನೆ ಕಾಮನ್ ಆಗಿತ್ತು. ಅಷ್ಟರಲ್ಲಿ ನನ್ನ ಅಮ್ಮನ ಗೋಳು ನೋಡಲಾಗದೇ ನಾನು ಕಂಪ್ಯೂಟರ್ ಕೋಸರ್್ ಒಂದಕ್ಕೆ ಸೇರಿದೆ. ಮಂಡ್ಯದ ಸುಭಾಷ್ನಗರದ ಗೈಸ್ ಗ್ರಾಫಿಕ್ಸ್ ನನ್ನ ಬದುಕು ಬದಲಾಗಲು ಮುನ್ನುಡಿ ಬರೆಯಲಾರಂಭಿಸಿತು. ಅಲ್ಲಿ ಸ್ಕ್ರೀನ್ ಪ್ರಿಂಟಿಂಗ್ ಕಲಿತು ಅಚ್ಚರಿ ಸ್ಕ್ರೀನ್ ಪ್ರಿಂಟರ್ಸ್ ಅನ್ನು ಶುರುಮಾಡಿದ್ದ ನನಗೆ, ಹಾಯ್ ಬೆಂಗಳೂರಿನ ನಿರಂತರ ಓದು ಪತ್ರಕರ್ತನಾಗುವತ್ತ ಪ್ರೇರೇಪಿಸಲಾರಂಭಿಸಿತ್ತು. ಅಷ್ಟರಲ್ಲಿ ಪ್ರೈವೇಟ್ ಆಗಿ ಪಿಯುಸಿ ಆಟ್ಸರ್್ ಎಕ್ಸಾಮ್ ತೆಗೆದುಕೊಂಡು ಪಾಸ್ ಮಾಡಿದೆ. ಅದರಲ್ಲಿ ನನಗೆ ಶೇ. 74 ರಷ್ಟು ಮಾಕ್ಸರ್್ಗಳು. ಅಷ್ಟು ಮಾಕ್ಸರ್್ ತೆಗೆಯಬಲ್ಲೆ ಅಂತ ಕಾನ್ಫಿಡೆನ್ಸ್ ಕೊಟ್ಟಿದ್ದು ಸಾಹಿತ್ಯದ ಓದು. ಕೆಲವರ ಆತ್ಮಕಥೆಗಳು.</div><div>ನನಗೆ ಮೈಸೂರಿನ ಮಹಾರಾಜ ಕಾಲೇಜು ಇದೆ, ಪತ್ರಿಕೋದ್ಯಮ ಕೋಸರ್್ ಇದೆ ಅಂತ ತಿಳಿಸಿದ್ದು, ಆಗ ಮಂಡ್ಯದಿಂದ ಟೈಮ್ಸ್ ಆಫ್ ಇಂಡಿಯಾ ಹಾಗೂ ಈಟಿವಿಗೆ ವರದಿ ಮಾಡುತ್ತಿದ್ದ ಟಿ.ಆರ್. ಸತೀಶ್. ಮಹಾರಾಜ ಕಾಲೇಜಿನ ಆ ಕಟ್ಟಡ, ಹುಡುಗರು ಎಲ್ಲಾ ನೋಡಿ ನನಗೆ ಸೀಟು ಸಿಗದು ಎಂದುಕೊಂಡಿದ್ದೆ. ನನ್ನ ಅಪ್ಪನಿಗೋ ನನ್ನನ್ನು ಲಾಯರ್ ಮಾಡಬೇಕು ಅನ್ನೋ ಹಟ. ನನ್ನ ಅಪ್ಪನ ಮಾತಿಗೆ ಬೆಲೆ ಕೊಡದೇ ಮೈಸೂರು ಬಸ್ಸು ಹತ್ತಿದೆ. ಅಲ್ಲಿಗೆ ರೈತನಾಗುವ ನನ್ನ ಆಸೆ ಮುಗಿದು ಹೊಸದೊಂದು ಗುರಿ ಮುಟ್ಟಲು ಓಡಲು ಶುರುಮಾಡಿದೆ......</div><div><b>ಯಾಕೋ ಏನೇನೋ ನೆನಪು. ದಿಲ್ಲಿಯ ಫುಟ್ಪಾತ್ ತುಂಬಾ ನೇರಳೆ ಹಣ್ಣುಗಳ ಆತ್ಮಹತ್ಯೆ ಆಗಿದೆ. ಅವಳಿಗೆ ನೇರಳೆ ಹಣ್ಣು ಅಂದರೆ ತುಂಬಾ ಇಷ್ಟ. ಯಾಕೋ ಈ ನೇರಳೆ ಹಣ್ಣುಗಳಂತೆಯೇ ನನ್ನ ಅವಳ ಕನಸೂ ಆತ್ಮಹತ್ಯೆ ಮಾಡಿಕೊಂಡಿತೇ.......!?. </b></div><div>ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ವಿದ್ಯಾಥರ್ಿ ದಿನಗಳಿಂದಲೇ ಬಹುವಾಗಿ ಇಷ್ಟ ಪಡುತ್ತಿದ್ದ ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರ ನೇತೃತ್ವದಲ್ಲಿ ನಾನು ಮತ್ತು ನನ್ನಂತೆಯೇ ದೆಹಲಿಗೆ ಹೊಸಬನಾಗಿರುವ ಟಿವಿ 9 ಗೆಳೆಯ ಚಂದ್ರಮೋಹನ್ಗೆ ಆತ್ಮೀಯ ಸ್ವಾಗತ, ಔತಣ ದೊರೆಯಿತು. ಮನೆ ನೆನಪಿಸುವಂತಹ ಸೊಪ್ಪು - ಮುದ್ದೆ ಊಟ ಹಾಕಿಸಿ ಹಿರಿಯರೆಲ್ಲಾ ಒಂದಷ್ಟು ಸಲಹೆ, ಉತ್ತಮವಾದುದೊಂದು ಪುಸ್ತಕ ಕೊಟ್ಟರು. ಕಷ್ಟ ಬಂದಾಗ ನಮ್ಮ ಹೆಗಲು ಇರುತ್ತೆ ಮರೆಯದಿರಿ, ಚನ್ನಾಗಿ ಕೆಲಸ ಮಾಡಿ ಎನ್ನೋ ಅಭಯವನ್ನೂ ನೀಡಿದರು. </div><div>ಆ ಔತಣ ಕೂಟದಲ್ಲಿ ದೆಹಲಿಯಲ್ಲಿರೂ ಕನ್ನಡಿಗ ಪತ್ರಕರ್ತರು ಸೇರಿದ್ದರು. ದಿ ವೀಕ್ ಸಂಪಾದಕ ಸಚ್ಚಿ, ಔಟ್ಲುಕ್ನ ಕೃಷ್ಣಪ್ರಸಾದ್, ಡೆಕ್ಕನ್ ಹೆರಾಲ್ಡ್ನ ಅರುಣ್, ಅಜಿತ್ ಅತ್ರಾಡಿ ಟೈಮ್ಸ್ ನೌನ ಅನೂಪ್ ಅವರು ಇಂಗ್ಲಿಷ್ ಪತ್ರಕರ್ತರಾದರು ಕನ್ನಡಿಗರು. ದೆಹಲಿಗೆ ಕನ್ನಡಿಗ ಪತ್ರಕರ್ತರು ಬಂದರೆ ಇವರು ಆತ್ಮೀಯರಾಗುತ್ತಾರೆ. ಕೈಲಾದ ಸಹಾಯ ಮಾಡುತ್ತಾರೆ. ಇನ್ನು ಕನ್ನಡದ ಎಲ್ಲಾ ಪತ್ರಕರ್ತರು ಒಂದೆಡೆ ಸೇರಿದ್ದೆವು ಅನ್ನೋ ಖುಷಿ ಇತ್ತು. ಎಲ್ಲರಿಂದಲೂ ಸಹಕಾರ ದೊರೆಯುತ್ತಿದೆ. ಕೆಲಸದ ಜೊತೆಗೆ, ಹೊಸದೇನೋ ಕಲಿಯುವ ಹುಮ್ಮಸ್ಸು. ಜೊತೆಗೆ, ಯಾಕೋ ನಾನು ಅಷ್ಟು ಇಷ್ಟ ಪಡದ ಬೆಂಗಳೂರು, ಅನಿವಾರ್ಯವಾಗಿ ಸೇರಿದ್ದ ಟಿವಿ ಕೆಲಸವೂ ಪದೇ ಪದೇ ನೆನಪಾಗುತ್ತೆ.</div><div>ನನ್ನ ಗೆಳೆಯರು, ಅಪ್ಪ - ಅಮ್ಮ ಯಾರೂ ನಾನು ಪತ್ರಕರ್ತನಾಗುವೆ ಎಂದು ಊಹಿಸಿರಲಿಲ್ಲ. ನನ್ನೊಳಗಿನ ಪತ್ರಕರ್ತನ ಮೊದಲು ಗುರುತಿಸಿದ್ದು ಎಚ್.ಆರ್. ರಂಗನಾಥ್ ಮತ್ತು ಕೂಡ್ಲಿ ಗುರುರಾಜ್. ಅವರಿಬ್ಬರು ಸೇರಿ ಮೈಸೂರಲ್ಲಿ ಅತ್ಯುತ್ತಮ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಳಿ ಕಳುಹಿಸಿದರು. ಅವರು ನನ್ನ ತಿದ್ದಿತೀಡಿ ಪತ್ರಕರ್ತನಾಗಿಸಿದರು. ಆನಂತರ ರಂಗನಾಥ್ ಮತ್ತು ರವಿಹೆಗಡೆ ಉತ್ತಮ ಅವಕಾಶ ನೀಡುತ್ತಾ ಬಂದರು. ಇದಕ್ಕೆ ನೆರವು ನೀಡಿದ್ದು ನೂರಾರು ಕೈಗಳು. ಇಷ್ಟು ದಿನ ಸಿಕ್ಕಂತೆಯೇ ಇಲ್ಲೂ ನೆರವು ಸಿಗೋ ಲಕ್ಷಣ ಗೋಚರಿಸಿದೆ. ನಾನು ಅದನ್ನು ಬಳಸಿಕೊಳ್ಳುತ್ತೇನಾ? ಬೆಳೆಯುತ್ತೇನಾ? ಗೊತ್ತಿಲ್ಲ. ಮಂಡ್ಯ ತಾಲೂಕು ಹನಕೆರೆ ಗಲ್ಲಿಯಿಂದ ಹೊರಟವನು ದಿಲ್ಲಿಗೆ ಬಂದಿದ್ದೇನೆ. ಯಾಕೋ ನೆನಪುಗಳಿಂದ ತಪ್ಪಿಸಿಕೊಳ್ಳೋದು? ನೆರವು ನೀಡಿದವರನ್ನ ಮರೆಯೋದು ಕಷ್ಟ... ಕಷ್ಟ... ಕಷ್ಟ....</div><div>
<br /></div><div>(ಅಣ್ಣಾ ಹಜಾರೆ ಉಪವಾಸ ಮುಗಿಸಿದ ನಂತರ ಜನಶ್ರೀ ಗೆಳೆಯ ರಾಘವಶಮರ್ಾ, ನವೀನ್ ಮತ್ತು ಸಂಡೆ ಇಂಡಿಯನ್ನ ಡಿಸೈನರ್ ಪ್ರಕಾಶ್ ಶೆಟ್ಟಿ ಜೊತೆ ಪೋಸ್ ಕೊಟ್ಟೆವು ಹೀಗೆ...)</div><div> </div><div> </div>ಅವಿhttp://www.blogger.com/profile/07196818175613402260noreply@blogger.com4tag:blogger.com,1999:blog-6342319973848548604.post-41749594878852127502011-08-08T08:06:00.000-07:002011-08-08T08:12:12.802-07:00ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿದಳು.........<a href="https://blogger.googleusercontent.com/img/b/R29vZ2xl/AVvXsEgrVxoblnU5ZbiB68AlvnZicFYlyuo-36AQlNwFeVTlAMYg7EdGvQVrXuOc2dXllLSWT6t1RYvPFFpQFLj8_ww8eQ3VTBVLcfJfjZnB1dgQcw080LLNzdMRuiTXPKJvHmNYiE0srqJOlpo/s1600/Veena++Kulkarni+++6.jpg" onblur="try {parent.deselectBloggerImageGracefully();} catch(e) {}"><img style="float:left; margin:0 10px 10px 0;cursor:pointer; cursor:hand;width: 270px; height: 400px;" src="https://blogger.googleusercontent.com/img/b/R29vZ2xl/AVvXsEgrVxoblnU5ZbiB68AlvnZicFYlyuo-36AQlNwFeVTlAMYg7EdGvQVrXuOc2dXllLSWT6t1RYvPFFpQFLj8_ww8eQ3VTBVLcfJfjZnB1dgQcw080LLNzdMRuiTXPKJvHmNYiE0srqJOlpo/s400/Veena++Kulkarni+++6.jpg" border="0" alt="" id="BLOGGER_PHOTO_ID_5638503150252390706" /></a>
<br /><span class="Apple-style-span" style="border-collapse: collapse; font-family: arial, sans-serif; "><span class="Apple-style-span" ><div>`ಸರ್ ನಮ್ಮೆಲ್ಲರ ಪ್ರೀತಿಯ ವೀಣಕ್ಕ ತೀರಿಕೊಂಡ್ರು' ಎಂಬ ಒಂದು ಸಾಲಿನ ಎಸ್ಎಂಎಸ್ ನನ್ನ ಕಣ್ಣನಿಗೂಡುವಂತೆ ಮಾಡಿಬಿಟ್ಟಿತು. ಧಾರವಾಡ ಪ್ರಜಾವಾಣಿ ಪತ್ರಿಕೆ ಫೋಟೋಗ್ರಾಫರ್ ಕೇದಾರ್ ಕಳುಹಿಸಿದ ಎಸ್ಎಂಎಸ್ ಇದು.</div><div>ವೀಣಕ್ಕ ಅಂದ್ರೆ <span style="font-family: Arial, Helvetica, sans-serif; line-height: 28px; ">ಬರಹಗಾರ್ತಿ</span> ವೀಣಾ <span style="font-family: Arial, Helvetica, sans-serif; line-height: 28px; ">ಕುಲಕರ್ಣಿ<wbr> </span>. ಖ್ಯಾತ ಸಾಹಿತಿ ಎನ್ಕೆ <span style="font-family: Arial, Helvetica, sans-serif; line-height: 28px; ">ಕುಲಕರ್ಣಿ </span> ಅವರ ಮೊಮ್ಮಗಳು. ಧಾರವಾಡದ ವಿದ್ಯಾವರ್ಧಕ ಸಂಘ ಇರಲಿ, ಲೇಖಕಿಯರ ಸಂಘವೇ ಇರಲಿ ಸಾಹಿತ್ಯ ಚಟುವಟಿಕೆಯಲ್ಲಿ ಈಕೆ ಸದಾ ಸ್ವಯಂ ಸೇವಕಿಯೇ. ಸಾಹಿತ್ಯ ಸಂಘಟನೆ, ಕನ್ನಡ ಪರ ಹೋರಾಟಗಳು ಇದ್ದಲೆಲ್ಲಾ ಈಕೆ ಹಾಜರ್. ಅವುಗಳ ಸುದ್ದಿ ಬರಲಿ ಎಂದು ಪತ್ರಿಕೆಗಳು ಬಯಸುವಷ್ಟೇ ಸುದ್ದಿಯನ್ನು ತಾನೇ ಬರೆದು ತಂದು ಕೊಡುತ್ತಿದ್ದಳು. ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕಿಯಾಗಿದ್ದ ಈಕೆಗೆ ಇನ್ನು ಕೆಲವೇ ದಿನಗಳಲ್ಲಿ ನೌಕರಿ ಕಾಯಂ ಆಗುವುದಿತ್ತು. ಇದಕ್ಕಾಗಿ ಆಕೆ ಶ್ರಮಿಸಿದ್ದು ಬಹಳಷ್ಟು.</div><div>ಮೊನ್ನೆ ನಾನು ಸುವರ್ಣ ನ್ಯೂಸ್ ಬಿಟ್ಟು ಉದಯವಾಣಿ ಸೇರುವ ಮುನ್ನ ಇದ್ದ ನಿರುದ್ಯೋಗಿ ದಿನಗಳನ್ನು ಕಳೆಯಲು ಧಾರವಾಡಕ್ಕೂ ಹೋಗಿದ್ದೆ. ಆ ಸಂದರ್ಭದಲ್ಲಿ ವೀಣಕ್ಕನ ನೋಡಲು ಹೋದವನು ಹೆಚ್ಚು ಹೊತ್ತು ಆಕೆಯ ಮುಂದೆ ಕುಳಿತರೆ ಭಾವುಕನಾಗಿ ಕಣ್ಣೀರು ಹಾಕಿಬಿಟ್ಟೇನು ಎಂದು ಎದ್ದು ಬಂದಿದೆ.</div><div>ಆಕೆಗೆ ನಾಲ್ಕು ತಿಂಗಳ ಹಿಂದೆ ಬ್ರೇನ್ ಹ್ಯಾಮರೇಜ್ ಆಗಿತ್ತು. ಅಂದ್ರೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಎರಡು ಬಗೆಯ ಆಪರೇಷನ್ ಆಗಿತ್ತು. ಮೊದಲಿಗೆ ಮಾತನಾಡಲು ಮರೆತಿದ್ದ ವೀಣಕ್ಕ, ಮಾತನಾಡಲು ತೊಡಗಿದ್ದಳಂತೆ. ಆದ್ರೆ, ಯಾರನ್ನು ಗುರುತಿಸುವುದಾಗಲಿ, ಹಳೆಯ ನೆನಪಾಗಲಿ ಇಲ್ಲದೆ ಮಂಕಾಗಿ ನೋಡುತ್ತಾ ಕೂರುತಿದ್ದಳಂತೆ. ಆಪರೇಷನ್ ಆದ ತಿಂಗಳ ಬಳಿಕೆ ಸ್ವಲ್ಪ ಮಾತನಾಡ ತೊಡಗಿದ ವೀಣಕ್ಕ, ಒಬ್ಬಿಬ್ಬರನ್ನು ಗುರುತು ಹಿಡಿಯತೊಡಗಿದ್ದಳು. ಆಕೆಯನ್ನು ಕಾಡಿಸಿ, ಕೀಟಲೆ ಮಾಡುತ್ತಿದ್ದ ಪತ್ರಕರ್ತ ತಮ್ಮಂದಿರು ಆಕೆಗೆ ಹಳೆಯದನ್ನು ನೆನಪಿಸಲು ಆಗಾಗ ಹೋಗಿ ಮಾತನಾಡಿಸಿ ಬರುತ್ತಿದ್ದರು. </div><div>ಮೊನ್ನೆ ನಾನು ಅವರ ಮನೆಗೆ ಕಾಲಿಟ್ಟಾಗ ಆಕೆ ದಿವಾನ್ ಕಾಟ್ ಮೇಲೆ ಕುಳಿತಿದ್ದಳು. ಕಪ್ಪಿಟ್ಟು, ವೃದ್ಧರಿಗೆ ಮೂಡಿದಂತೆ ನೆರಿಗೆ ಮೂಡಿದ್ದ ಮುಖದ ಮೇಲೆ ಅರಿಶಿನ ಹಚ್ಚಿದ್ದರು. ಅದೇ ತಾನೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಂದಿದ್ದರು ಆಕೆಯ ವೃದ್ದ ತಂದೆ ತಾಯಂದಿರು. ಮೊದಲಿಗೆ ನನ್ನ ಗುರುತು ಹಿಡಿಯದ ವೀಣಕ್ಕ, `ನೀನು ಅ..ಅ..ಅ ಕನ್ನಡಪ್ರಭದಲ್ಲಿದ್ದೆ ಅಲ್ಲೇನು. ಸಾಧನಕೇರಿ ಬಗ್ಗೆ ಭಾರಿ ಬರಿತಿದ್ದಲ್ಲಾ, ಈಗ ಛಲೋ ಆಗ್ಯಾದ. ಹೋಗಿ ನೋಡ್ಕಂಡ್ ಬಾ... ಅಂದ್ಲು. ನಿನ್ನ ನಂಬರ್ ನನಪದಾ ನನಗೆ, ಅವಿನಾಶ ಅಲ್ಲೇನು ನೀನು. ಈಗ ನೆನಪಾತು ನೋಡು. 6 ಪುಸ್ತಕ ಬರೀಲಿಕ್ಕ ಕುಂತೆ. ಆರೋಗ್ಯ ಕೆಡ್ತು. ಎಲ್ಲಾ ಸರಿ ನಿಮ್ಮ ರಂಗನಾಥ್ ಯಾಕ್ ಟಿವಿಲಿ ಬರೋದ್ ಬಿಟ್ಟಾರ ಅಂದ್ಲು.' ನನ್ನ ಹೆಸರು ಮರೆತಿದ್ದೀಯ, ನಮ್ಮ ರಂಗನಾಥ್ ನೆನಪಿದ್ದಾರಲ್ಲ ಅಂದೆ. `ಛಲೋ ಮಾತಾಡ್ತಾರ ಅವ್ರು. ಲಗ್ನಕ್ಕೆ ಕರೀತಿನಿ ಅಂದಿದ್ದೆ. ನನಗ ಹೇಳ್ದೆ ಲಗ್ನ ಆಗಿಬಿಟ್ಯಾ' ಇಲ್ಲಕ್ಕ ಲಗ್ನ ಆಗಿಲ್ಲ. ಆಗೋವಾಗ ನಿನಗೆ ಹೇಳದೆ ಆಗ್ತೀನಾ? ಟಿವಿ ಬಿಟ್ಟು ಉದಯವಾಣಿ ಸೇರಿಕೊಂಡೆ. ಡೆಲ್ಲಿಗೆ ಹೊಂಟೀನಿ ಅಂದೆ. ಬಾಳ ಛಲೋ ಆತು. ನಾನು ಡೆಲ್ಲಿ ನೋಡಿದ್ದೆ, ಮತ್ತೊಮ್ಮೆ ನೋಡ್ಬೇಕು ಬರ್ತೀನಿ. ಆರೋಗ್ಯ ಸರಿ ಆದ ಕೂಡ್ಲೆ ಪುಸ್ತಕ ಬರೆದು ಮುಗಿಸ್ತೀನಿ ಬರ್ಬೇಕು. ಮೊದ್ಲು ನೀನು ಲಗ್ನ ಆಗು.... ಮತ್ತೆ ಪೇಪರ್ ಸೇರಿ ಚಲೋ ಮಾಡಿದೆ' ಅಂದವಳೇ ಬಿಡದೇ ಬಾಳೆಹಣ್ಣು ನೀಡಿ ತಿನ್ನಿಸಿದ್ದಳು ವೀಣಕ್ಕ. ಖಂಡಿತ ನೀನು ಮೊದ್ಲಂಗೆ ಆಗ್ತೀ ಅಕ್ಕ, ಡೆಲ್ಲಿ ತೋರಿಸ್ತೀನಿ ಬರಬೇಕು. ಪುಸ್ತಕ ಒಂದೊಂದಾಗಿಯೇ ಬರಿ ಎಂದು ಭಾವುಕನಾಗಿ ಎದ್ದು ಬಂದಿದ್ದೆ.</div><div>ಮದುವೆ ಆಗದೆ ಇದ್ದ ವೀಣಕ್ಕನ ವೈಯಕ್ತಿಕ ಬದುಕಿನ ಸಮಸ್ಯೆಗಳು ಹಲವು. ವೈಯಕ್ತಿಕ ಸಮಸ್ಯೆ ಎಲ್ಲೂ ತೋರಿಸಿಕೊಳ್ಳದೆ ನಗು ನಗುತ್ತಾ ಬರೆಯುತ್ತಿದ್ದ, ಸಾಹಿತ್ಯ ಸಂಘಟನೆಯಲ್ಲಿ ತೊಡುಗುತ್ತಿದ್ದ ವೀಣಕ್ಕ ಇನ್ನಿಲ್ಲವಾಗಿದ್ದಾಳೆ. ಧಾರವಾಡದಲ್ಲಿ ನನ್ನ ವರದಿ, ಲೇಖನಗಳಿಗೆ ಸದಾ <span style="font-family: Arial, Helvetica, sans-serif; line-height: 28px; ">ವಿಮರ್ಶೆ</span>, ಮೆಚ್ಚುಗೆ, ಕೋಪ <span style="font-family: Arial, Helvetica, sans-serif; line-height: 28px; ">ಪ್ರದರ್ಶಿಸುತ್ತಿದ್ದ </span>ಕೆಲವರ ಪೈಕಿ ವೀಣಕ್ಕ ಪ್ರಮುಖಳು. ನಾನು ಟಿವಿ ಸೇರಿದಾಗ ಫೋನ್ ಮಾಡಿ ಬರೆಯೋದು ಬಿಡ ಬ್ಯಾಡವೋ ಅಂದಿದ್ದಳು. ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ನನಗಾಗಿ ಕಾದು ಭೇಟಿಯಾಗಿ ಹರಸಿ ಹೋಗಿದ್ದ ವೀಣಕ್ಕ ಈಗ ಬಾರದ ಊರಿಗೆ ಹೋಗಿಬಿಟ್ಟಿದ್ದಾಳೆ. ಅವಳ ಪುಸ್ತಕಗಳು ಅರ್ಧಮರ್ಧ ಆಗಿಬಿಟ್ಟಿವೆ....<span class="Apple-style-span" style="font-family: Arial, Helvetica, sans-serif; line-height: 28px; border-collapse: separate; ">ಪುಸ್ತಕ ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿಕೊಂಡು ಹೋಗಿದ್ದಾಳೆ ವೀಣಕ್ಕ </span></div><div> ಅವಳಿಗೆ ಶಾಂತಿ ಸಿಗಲಿ. ಮುಂದಿನ ಜನ್ಮ ಅನ್ನೋದು ಇರೋದೆ ಆದ್ರೆ, ಆಕೆಗೆ ನೋವಿಲ್ಲದ ನೆಮ್ಮದಿಯ ಜೀವನ ಸಿಗಲಿ.........</div></span></span>ಅವಿhttp://www.blogger.com/profile/07196818175613402260noreply@blogger.com3tag:blogger.com,1999:blog-6342319973848548604.post-28822094245499198422011-07-06T23:44:00.000-07:002011-07-14T04:46:39.841-07:00ಹಳೆ ನೆನಪಿನೊಂದಿಗೆ ಹೊಸ ದಾರಿಯಲ್ಲಿ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjP6qCje3gc_WZNRzTlNMNO6ImiZvFawg2Ksb7zwWVDOXaJokd79kExAhTKh4ICfRRKpcG5kInx3tx_KxFHHg7-Qw5n52x_nYfevS1EbtI9VIjQ3I56qlh1KBG6mGYPYani_iPjPRprCxQ/s1600/avi1.jpg"><img style="margin: 0pt 0pt 10px 10px; float: right; cursor: pointer; width: 400px; height: 300px;" src="https://blogger.googleusercontent.com/img/b/R29vZ2xl/AVvXsEjP6qCje3gc_WZNRzTlNMNO6ImiZvFawg2Ksb7zwWVDOXaJokd79kExAhTKh4ICfRRKpcG5kInx3tx_KxFHHg7-Qw5n52x_nYfevS1EbtI9VIjQ3I56qlh1KBG6mGYPYani_iPjPRprCxQ/s400/avi1.jpg" alt="" id="BLOGGER_PHOTO_ID_5626499634178012834" border="0" /></a><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjTgdvm0o-TBT7m252J-sTJbAHfN0-27PhHCuKhTdpUE-NjGONNLFiRWPQIdlsfQ06efUIWy5rlCg7n8QBDR6PaEBMxoI_sjs_qIf0hvDXDhuza87FtyNyniYlD8dmYXVuK3mK25c4La70/s1600/avi.jpg"><img style="margin: 0pt 10px 10px 0pt; float: left; cursor: pointer; width: 400px; height: 300px;" src="https://blogger.googleusercontent.com/img/b/R29vZ2xl/AVvXsEjTgdvm0o-TBT7m252J-sTJbAHfN0-27PhHCuKhTdpUE-NjGONNLFiRWPQIdlsfQ06efUIWy5rlCg7n8QBDR6PaEBMxoI_sjs_qIf0hvDXDhuza87FtyNyniYlD8dmYXVuK3mK25c4La70/s400/avi.jpg" alt="" id="BLOGGER_PHOTO_ID_5626499430784414946" border="0" /></a><br /><span class="Apple-style-span" style="line-height: 28px;font-family:Arial,Helvetica,sans-serif;font-size:medium;" ><div>ಇವತ್ತಿನಿಂದ ನಾನು ಉದಯವಾಣಿ ವರದಿಗಾರ. ೨೦ ತಿಂಗಳ ಹಿಂದೆ ಸುವರ್ಣ ನ್ಯೂಸ್ ಸೇರೋವಾಗ, ೮ ವರ್ಷಗಳ ಹಿಂದೆ ಕನ್ನಡಪ್ರಭ ಸೇರೋವಾಗ ಇದ್ದ ಭಯವೇ ಇಂದು ಆಗ್ತಿದೆ. ದೆಹಲಿಯಲಿ ದುಡಿದು ಬದುಕಬಲ್ಲೆನ? ಅನ್ನೋ ಅನುಮಾನ, ಆತಂಕ ಇದ್ದೇ ಇದೆ. ಇನ್ನು ಸುವರ್ಣ ನ್ಯೂಸ್ ಸೇರೋವಾಗ ಇದ್ದ ಪರಕೀಯತೆ, ಅನಾಥ ಭಾವ ಮಾತ್ರ ಉದಯವಾಣಿಯಲ್ಲಿ ಕಾಡದು ಅಂದುಕೊಂಡಿದ್ದೇನೆ.</div><div> ಸುವರ್ಣ ಸೇರಿದಾಗ ಕೆಲಸವು ಹೊಸದು, ಸಹದ್ಯೋಗಿಗಳು ಹೊಸಬರು. ಕೆಲವರು ಪ್ರೀತಿಯಿಂದ ಮಾತನಾಡಿಸಿದರೆ, ಕೆಲವರನ್ನು ಮಾತನಾಡಿಸಲು ಕಷ್ಟ ಇತ್ತು ಕಾರಣ ನಾವು ಪ್ರಿಂಟ್ ಮೀಡಿಯಾ ಅನ್ನೋ ತಾತ್ಸಾರ ಕೆಲವರದು. ನಮ್ಮ ಕೆ.ಪಿ. ನಾಗರಾಜ ಅಂತು ಕಂಗಾಲ್ ಆಗ್ಬಿಟ್ಟಿದ್ದ. ಆದ್ರೆ ಅಲ್ಲಿ ಸಿಕ್ಕ ಅಕ್ಕ ಶೋಭಾ, ಸುಭಾಷ್ ಹುಗಾರ್, ಜಯಪ್ರಕಾಶ್ ಶೆಟ್ಟಿ, ಹಳೆ ಗೆಳೆಯ ವಿನೋದ್, ಸದಾ ನನ್ನೊಂದಿಗೆ ಜಗಳ ಆಡೋ ಜೈ ಶಂಕರ್, ಅಲ್ಲಿನ ಮೂಲ ನಿವಾಸಿ ಆದರು ನನ್ನ ಇಷ್ಟ ಪಟ್ಟ ಗೆಳೆಯ ಅರವಿಂದ್ ಬಿರಾದರ್, ಸ್ವಲ್ಪ ಮಾತಿನ ಗೆಳೆಯ ಉಮೇಶ್, ನನ್ನನು ಸದಾ ರೇಗಿಸುವ ಸಬಿತ, ಅಣ್ಣ ಅಂತ ಕಾಡುವ ಶ್ಯಾಮಲಾ ನನ್ನೊಳಗಿನ ಅನಾಥ ಭಾವ ದೂರ ತಳ್ಳಿದರು. ಹೊಸ ನೀರು ಹರಿಯ ತೊಡಗಿತು, ಹೊಸಬರಿಗೆ ನಾನೇ ಹಳಬ. ಸುವರ್ಣ ನಮ್ ಟೀಂ ಅಂತ ಅನ್ಸೋಕೆ ಶುರು ಆಯಿತು.</div><div>ಮೆಟ್ರೋ ರಿಪೋರ್ಟರ್ ಆಗಿದ್ದ ದಿನಗಳ ಅನುಭವ ವಿಚಿತ್ರವಾದದ್ದು. ರಾಜಕೀಯ ವರದಿಗಾರನಾಗಿ ಸುವರ್ಣದಲ್ಲಿ ದುಡಿದ ದಿನಗಳು ಮೋಸ್ಟ್ ಮೆಮೊರಬಲ್. ಅದಕ್ಕೆ ಮಾನ್ಯ ಸಿ.ಎಂ ಯಡಿಯೂರಪ್ಪಗೆ, ಎಚ್.ಡಿ. ಕುಮಾರಸ್ವಾಮಿಗೆ ಥ್ಯಾಂಕ್ಸ್ ಹೇಳಲೇಬೇಕು. ದಿನಗಟ್ಟಲೆ ಸಿ.ಎಂ. ಮನೆ, ರಾಜಭವನ, ರೆಸಾರ್ಟ್ ಕಾಯೋದು ಕಲಿತೆ. ಅದೇ ದಿನಗಳಲ್ಲಿ ಅಂಡಮಾನ್ ನೋಡಿ ಬಾರೋ ಅವಕಾಶ ಕೊಟ್ಟರು ರಂಗನಾಥ್ ಸರ್. ಮೊದಲ ಬಾರಿ ವಿಮಾನವು ಹತ್ತಿ ಇಳಿದೆ. ಹೂಗಾರ್ ಹಿರಿಯರಾದ್ರು ನಮ್ಮೊಂದಿಗೆ ಕಿರಿಯರಾಗಿ ಕೆಲಸ ಮಾಡಿದ್ರು. ಅವರ ಹಾಸ್ಯ ಪ್ರಜ್ಞೆ ಗೆ ಅವರೇ ಸಾಟಿ. ಇನ್ನು ಜಯಪ್ರಕಾಶ್ ಶೆಟ್ಟಿ ಕಾಲೇಜ್ ಹುಡುಗನಾಗಿ ಬಿಡ್ತಿದ್ರು. ಕೆಲಸದ ಒತ್ತಡವನ್ನು ಒಂದು ತಂಡವಾಗಿ ಎಂಜಾಯ್ ಮಾಡೋದು ಕಲಿತೆವು. ಇನ್ನು ನಮ್ ಕ್ಯಾಮರಾಮನ್ ಗಳು, ಡ್ರೈವರ್ ಗಳು ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಲೇಬೇಕು. ಮೊದಮೊದಲು ಟಿವಿ ಸ್ಪೀಡಿಗೆ ಬೆದರಿದಾಗ ನೆರವಿಗೆ ಬಂದು ಆತ್ಮ ವಿಶ್ವಾಸ ತುಂಬಿದ್ದೆ ಕ್ಯಾಮರಾಮನ್ ಹಾಗು ಡ್ರೈವರ್ ಗಳು. ಕೆಲವರು ಅವಮಾನಿಸಿದ್ದು, ಗೇಲಿ ಮಾಡಿದ್ದು ಇದೆ. ಅವೆಲ್ಲ ಇಲ್ಲಿ ಗೆಲ್ಲಲೇ ಬೇಕು ಅನ್ನೋ ಹಠ ಬೆಳೆಯಲು ಹೆಲ್ಪ್ ಆದವು.</div></span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಇದ್ದಕಿದ್ದಂತೆ ಒಂದು ದಿನ ನನ್ನ ಮೆಟ್ರೋ ಚೀಫ್ ಅಂತ ಘೋಷಿಸಿದರು. ಅಳಕುತ್ತ ಆ ಸೀಟ್ನಲ್ಲಿ ಕುಳಿತೆ. ಹದಿನಾರು ರಿಪೋರ್ಟರ್ ಗಳ ದೊಡ್ಡ ತಂಡಕ್ಕೆ ನಾನೇ ಲೀಡರ್. ಈ ತಂಡದಲ್ಲಿ ೯ ಹುಡುಗಿಯರು. ಕೆಲಸ ಮಾಡುತಿದ್ದವ, ಕೆಲಸ ಮಾಡಿಸುವ ಕೆಲಸ ಹೇಗೆ ಎಂದು ಅಳಕುತ್ತಲೇ ಕೆಲಸ ಆರಂಭಿಸಿದೆ. ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಟ್ಟು ಪ್ರತಿಯೊಬ್ಬರ ಶಕ್ತಿ, ಆಸಕ್ತಿ ತಿಳ್ಕೊಂಡೆ. ಅಕ್ಕ ಶೋಭಾ ನೆರವು ಬೇಕಾಯ್ತು. ಎಷ್ಟು ಸ್ಟೋರಿ ಅನ್ನೋದಲ್ಲ, ಯಾವ ಸ್ಟೋರಿ ಅನ್ನೋದರ ಮೇಲೆ ಕೆಲಸ ಶುರು ಮಾಡಿದೆವು. ಫಸ್ಟ್ ಅನ್ನೋದಕಿಂತ ಬೆಸ್ಟ್ ಅನ್ನೋದರ ಕಡೆ ಗಮನ ಕೊಡಿ ಅಂತ ಒಂದು ಮೀಟಿಂಗ್ ಮಾಡಿ ಪುಟ್ಟ ಭಾಷಣ ಮಾಡಿದೆ. ಬರ್ತಾ ಬರ್ತಾ ಸಲಿಸಾಯ್ತು, ಜೊತೆಗೆ ಬೇರೆಯವರು ರಜೆ ಇದ್ದಾಗ ಇನ್ಪುಟ್ ಜವಾಬ್ದಾರಿಯು ಬಿತ್ತು . ನನ್ನ ಟೀಂ ಹುಡುಗರು ಇಷ್ಟ ಪಟ್ಟು ಕೆಲಸ ಮಾಡಲು ಶುರು ಮಾಡಿದರು. ಮೊದಲಿಗೆ ನನ್ನ ಬೈದಿದ್ದ ಹುಡುಗರು, ನನ್ನ ನಿರ್ದಾರಕ್ಕೆ ಕಾರಣ ತಿಳಿದು ಸಾರೀ ಅಂದ್ರು. ನನ್ನೋಳಗಬ್ಬ ಲೀಡರ್ ಇದಾನೆ ಅನ್ನೋದನ್ನ ನನಗೆ ತಿಲಿಸಿಕೊತ್ತಿದ್ದೆ ಮೆಟ್ರೋ ಟೀಂ. ನಾವು ಅಂದುಕೊಂದಸ್ತು ಅಲ್ಲದಿದ್ದರೂ ಮೊದಲಿಗಿಂತ ವಾಸಿ ಅನ್ನೋ ಮಟ್ಟಕ್ಕೆ ನಮ್ ಟಿಅರ್ ಪಿ ಜಾಸ್ತಿ ಆಯಿತು. ಗೂಳಿ ತರ ತಿರ್ಗಾಡ್ತಿದ್ದೋನು ಕುಳಿತು ಕೆಲಸ ಮಾಡೋದು ಕಷ್ಟ ಅಂತ ಮೊದ ಮೊದಲು ಅನ್ನಿಸಿದ್ರೂ, ಬರ್ತಾ ಬರ್ತ ಎಲ್ಲವು ಅಡ್ಜಸ್ಟ್ ಆಯಿತು. ನಮ್ ಟೀಂ ನಲಿ ಬಹುತೇಕ ಎಲ್ಲ ಹೊಸಬರೇ. ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟಗಳಿಗೆ ಮೂಕ ಪ್ರೇಕ್ಷಕನಾಗಿ ಇರ್ತಿದ್ದೆ. </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಮಿತಿ </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಮೀರೋ ಹೊತ್ತಿನಲ್ಲಿ ಎಂಟ್ರಿ ಕೊಡೋದು. ನಾನು ಬೇಡ ಅಂದ್ರು ಕೆಲವು ಮಾಹಿತಿ ಕೊಡೊ ಹುಡುಗರು ಎಲ್ಲ ಸೇರಿ ನನ್ನ ಅವ್ರು ನಮ್ ಚೀಫ್ ಅಂತ ಒಪ್ಪಿದರು.<br /></span><span class="Apple-style-span" style="line-height: 28px;font-family:Arial,Helvetica,sans-serif;font-size:medium;" ><div> ಕೆಲವರು ಆಗಾಗ ಮನಸಿಗೆ ಬೇಜಾರು ಮಾಡಿದ್ದು ಇದೆ. ಟೀಂ ಸ್ಪಿರಿಟ್ ಮುಂದೆ ಆ ಬೇಜಾರಿಗೆ ಬೆಲೆ ಇಲ್ಲ. ಕೆಲವೊಮ್ಮೆ ಬೈದ್ದಿದ್ದೇನೆ, ಎಲ್ಲವನು ಮರೆತು ನನ್ನ ಲೀಡರ್ ಅನ್ನಿಸಿದ ಆ ತಂಡಕ್ಕೆ ಋಣಿ ನಾನು.</div></span><span class="Apple-style-span" style="line-height: 28px;font-family:Arial,Helvetica,sans-serif;font-size:medium;" > ಮೆಟ್ರೋ ಟೀಂ ನಮ್ಮದು ಅಂತ ಖುಷಿ ಇಂದ ಕೆಲಸ ಮಾಡೋವಾಗ್ಲೇ ನನ್ನ ಹಳೆ ಆಸೆಗೆ ಉದಯವಾಣಿ ಅವಕಾಶ ನೀಡುವೆ ಅಂತು. ಅಳುಕುತ್ತ ಅನಾಥ ಭಾವದಿಂದ ಬರಮಾಡಿಕೊಂಡ ಸುವರ್ಣ ನ್ಯೂಸ್ ನನ್ನನ್ನು ಕಳಿಸಿಕೊಡುವಾಗ ಭಾವುಕವಾಯ್ತು. ನನ್ನ ಕಣ್ಣ ಅಂಚು ಒದ್ದೆಯಾಗಿತ್ತು. ವಿಶೇಷವಾಗಿ ನಮ್ ಮೆಟ್ರೋ ಟೀಂ ಹುಡುಗರು ನನ್ನ ಸೆಲೆಬ್ರಿಟಿ ತರ ಫೀಲ್ ಮಾಡೋ ಹಾಗೆ ಮಾಡಿದ್ರು. ಯಾರು ಅಳಬಾರದು ಅಂತ ಎಲ್ಲರನ್ನು ನಗಿಸುತ್ತಲೇ ಕೆಲಸ ಮುಗಿಸಿ ಹೊರಟಿದ್ದೆ. ಆಗ ತಾನೇ ನೈಟ್ ಶಿಫ್ಟ್ ಗೆ ಬಂದ ಗೆಳೆಯ ರವಿ ಅಂತು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ನನ್ನನು ಅಳಿಸಿಬಿಟ್ಟ. ಕೆಲವರು ಭಾವುಕವಾಗಿ ಮೇಲ್ ಮಾಡಿದ್ರು. ಕೊನೆಯ ಮೀಟಿಂಗ್ನಲ್ಲಿ ಹೇಳಿದೆ, ಇನ್ ಮುಂದೆ ನಾನು ನಿಮ್ ಬಾಸ್ ಅಲ್ಲ ಫ್ರೆಂಡ್ ಮಾತ್ರ. ನನ್ನ ಹೆಸರು ಹಿಡಿದು ಕರಿಯಬಹುದು ಅಂದಿದ್ದೆ. ಬೈಕ್ ಹತ್ತುವ ಹೊತ್ತಿಗೆ ಒಂದು ಹುಡುಗಿಯ ಎಸ ಎಂ ಎಸ - ಮಚ್ಚ ವೀ ಮಿಸ್ ಯು </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಲಾಟ್ </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಅಂತ. ಖುಷಿ ಆಯಿತು. ನಮ್ ಡ್ರೈವರ್ ವೆಂಕಿ ಲವ್ </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಯು </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" > ಬಾಸ್ ಅಂತ ಮೆಸ್ಸಜಿಸಿದ. ಕೆಲವರು </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಅಣ್ಣ </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಅಂದ್ರು. ಫೋಟೋಸ್ ತೆಗೆದು ಫೇಸ್ ಬುಕ್, ಬ್ಲಾಗ್ ತುಂಬಿಸಿದರು. ಅವರ ಅಭಿಮಾನಕ್ಕೆ, ವಿಶ್ವಾಸಕ್ಕೆ thankssssssssssss.</span><div><span class="Apple-style-span" style="line-height: 28px;font-family:Arial,Helvetica,sans-serif;font-size:medium;" ><br /></span></div><div><span class="Apple-style-span" style="line-height: 28px;font-family:Arial,Helvetica,sans-serif;font-size:medium;" ></span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಬಟ್ ಸುವರ್ಣ ತಂಡದಲ್ಲಿ ಕೆಲಸ ಕಲಿಸುವ ಅಕ್ಕ ಶೋಭಾ ಸಿಕ್ಕಳು, ಕಾಡುವ ತಂಗಿಯರು ಸಿಕ್ಕರ್ರು, ಹಿರಿ ಕಿರಿ ಗೆಳೆಯರು ಸಿಕ್ಕರೂ. ಒಂದೇ ಒಂದು ಕೊರತೆ ಇಲ್ಲೂ ಮುಂದುವರಿಯಿತು. ಗರ್ಲ್ ಫ್ರೆಂಡ್ ಮಾತ್ರ ಸಿಗಲಿಲ್ಲ. ನೋಡೋಣ ಡೆಲ್ಲಿ ಯಾದರು ಗರ್ಲ್ ಫ್ರೆಂಡ್ ಕೊಡುತ್ತ.....??!!. ಮದ್ಹುವೆ ಆಗಿ ಹೋಗೋ ಅಂತ ಅಮ್ಮನ ಮಾತು ಯಾಕೋ ಕೇಳಿಸುತ್ತಿಲ್ಲ. ಡೆಲ್ಲಿ ಇಂದ ಪಂಜಾಬಿ ಸೊಸೆ ತಂದು ಕೊಡ್ತೀನಿ ಅಂದಿದ್ದೇನೆ. ನನ್ನ ಗೆಳೆಯರು ನನ್ನ ಹೊಸ ಹುಚಾಟ ಸಹಿಸಿಕೊಳ್ಳೋ ಭರವಸೆ ನೀಡಿದ್ದಾರೆ. ಹೊಸ ಭಯ, ಕನಸಿನೊಂದಿಗೆ ಹೊಸ ಕೆಲಸಕ್ಕೆ ಹೊರಟಿದ್ದೇನೆ.... </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" >ಗೆಲ್ಲುತ್ತೇನ ಗೊತ್ತಿಲ್ಲ </span><span class="Apple-style-span" style="line-height: 28px;font-family:Arial,Helvetica,sans-serif;font-size:medium;" ><div> </div></span></div>ಅವಿhttp://www.blogger.com/profile/07196818175613402260noreply@blogger.com1tag:blogger.com,1999:blog-6342319973848548604.post-15557476377786663802010-07-17T06:37:00.000-07:002010-07-17T07:58:40.720-07:00ಮತ್ತೆ ಬರೆಯುವಾಸೆ......?!<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgIjQ6EK5FrrCPne4O0S46hoKFJj7Z_3Tf-of66KTyHmdFO2-1ioJcyHIv_uYkdniZ610LRofsKgnumviGUcif5wly85JCzh0Fj61d9gHfcoug4ySLd4fJVarAitgWMQKZfUlifvv7O2NE/s1600/avi.jpg"><img style="display: block; margin: 0px auto 10px; text-align: center; cursor: pointer; width: 400px; height: 300px;" src="https://blogger.googleusercontent.com/img/b/R29vZ2xl/AVvXsEgIjQ6EK5FrrCPne4O0S46hoKFJj7Z_3Tf-of66KTyHmdFO2-1ioJcyHIv_uYkdniZ610LRofsKgnumviGUcif5wly85JCzh0Fj61d9gHfcoug4ySLd4fJVarAitgWMQKZfUlifvv7O2NE/s400/avi.jpg" alt="" id="BLOGGER_PHOTO_ID_5494888428073266306" border="0" /></a><br /><br />ನಿಮ್ಮ ಪ್ರೀತಿಗೆ <span>ಅದರ </span>ರೀತಿಗೆ ಕಣ್ಣ ಹನಿಗಳೇ ಕಾಣಿಕೆ<br />ಧಾರವಾಡದ ಜನದ ಮನ ತೋರಿದ ಪ್ರೀತಿಗೆ<br />ಇಲ್ಲ ಯಾವುಧೆ ಹೋಲಿಕೆ<br />ಪ್ರೀತಿ ಹೀಗೆ ಇರಲಿ<br />ಹೋಗಿ ಬರುವೆ<br /><br />ಎಂದು ಮೆಸ್ಸಜಿಸುವ ಹೊತ್ತಿಗೆ ಕಣ್ಣು ಕಾಣದಷ್ಟು ನೀರು ಹರಿಯ ತೊಡಗಿತ್ತು. ಮೈಸೂರ್ ಬಿಟ್ಟು ಧಾರವಾಡಕ್ಕೆ ಹೋಗುವಾಗಲು ಹೀಗೆ ಆಗಿತ್ತು. ಗೊತ್ತಿಲ್ಲದ ಜನ, ಮನ ಬದುಕುವುದು ಹೇಗೋ ಎನ್ನುವ ಆತಂಕ ಒತ್ತುಕೊಂಡೆ ಹೋಗಿದ್ಧೆ. ಬಟ್ ಕೆಲವೇ ದಿನದಲ್ಲಿ ನಾನು ಧಾರವಾಡಿಗನಾಗಿಬಿಟ್ಟೆ. ಧಾರವಾಡವನ್ನು ಬಿಟ್ಟು ವರ್ಷ ಆಗಿ ಹೋಯ್ತು. ಆದರು ಧಾರವಾಡವನ್ನು ಪದೇ ಪದೇ ಮಿಸ್ ಮಾಡ್ಕೊತಿದಿನಿ. ನನ್ನ ಮಾತಿನ ಶೈಲಿಯಲ್ಲಿ ಇನ್ನು ಧಾರವಾಡದ ಸೊಗಡಿದೆ. ಹೀಗಾಗಿ ತುಂಬಾ ಜನ ನೀವು ಧಾರವಾಡದವರ ಅಂತಾರೆ. ನಾನು ಎಸ್ ಅಂತೇನೆ.<br /><br />ಬೆಂಗಳೂರಿಗೆ ಹೋದ ಮೇಲೆ ಬದಲಾಗ್ತಿಯ ಅಂತ ಕೆಲವರು ಹೇಳಿದ್ರು. ಹೌದು ಅವರ ಅರ್ಧ ಮಾತು ನಿಜವಾಗಿದೆ. ಬೆಂಗಳೂರಿಗೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಕೆಲಸ ಬದಲಾಯ್ತು. ಅದಕ್ಕೆ ತಕ್ಕಂತೆ ಕೆಲ ಕಾಲ ಬಟ್ಟೆಯೂ ಬದಲಾಗಿತ್ತು. ನನ್ನ ದಡೂತಿ ದೇಹ, ನನ್ನ ಯೋಚನೆ, ಯೋಜನೆ ಮಾತ್ರ ಬದಲಾಗಲಿಲ್ಲ. ಟಿವಿ ಸೇರಿದ ಮೇಲೆ ಬರವಣಿಗೆ ಅನ್ನೋದು ನಿಂತೇ ಹೋಗಿದೆ.<br /> ಬೆಂಗಳೂರು ಕನ್ನಡಪ್ರಭ ದಲ್ಲಿ ಇರುವಷ್ಟು ದಿನ ಬೆಂಗಳೂರಿನ ಆತುರಕ್ಕೆ ಹೊಂದಿಕುಳ್ಳುವುದೇ ಆಗಿತ್ತು. ಅದಾದ ಮೇಲೆ ಟಿವಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿ ನಾನು ಕಾಣಿಸಿಕೊಳ್ಳುವುದು ಹೇಗೆ ಎಂಬ ಕಸರತ್ತು. ಈ ಕಸರತ್ತು ಇನ್ನು ಮುಂದುವರೆದೆ ಇದೆ. ಸ್ವಂತ ಕೆಲ್ಸಕ್ಕೆ ಇಲ್ಲದ ಕಂಪ್ಯೂಟರ್. ಹೀಗಾಗಿ ವರ್ಷದಿಂದ ಬ್ಲಾಗಿಸಿರಲಿಲ್ಲ. ಗೆಳಯ ಸುಭಾಷ್ ಲ್ಯಾಪ್ಟಾಪ್ ಮತ್ತೆ ಬ್ಲಾಗಿ<span><span>ಸಲು</span></span> ಪ್ರೇರೇಪಿಸಿದೆ. ನನ್ನದೇ ಒಂದು ಕಂಪ್ಯೂಟರ್ ಕೊಳ್ಳುವ ಆಲೋಚನೆಯಲ್ಲಿದ್ದೇನೆ. ಏನೋ ಬರೆದರೆನೆ ತೃಪ್ತಿ . ಮತ್ತೆ ಬರೆಯುವ ಆಸೆ ಮೊಳೆತಿದೆ. ಅದರ ಜೊತೆಗೆ ಬೆಂಗಳೂರು ಬೋರು ಅನ್ನಿಸತಿದೆ.ಅವಿhttp://www.blogger.com/profile/07196818175613402260noreply@blogger.com8tag:blogger.com,1999:blog-6342319973848548604.post-90557368586601823892009-05-22T22:50:00.002-07:002009-05-22T23:22:17.097-07:00ಬದಕಿನ ಬಂಡಿ ತಿರುಗಿದೆ ಬೆಂಗಳೂರಿನತ್ತ.......<a href="https://blogger.googleusercontent.com/img/b/R29vZ2xl/AVvXsEjZrxq69d7d4pnT7KVBQF0r513wrdTHVcJ-d4Pdmh6tHVggl1kWNu_jt0xwSMb3wgVrFZbn7xVLyRN7yE7ngPdAgbLB4LUIhPkF9Y5MmBtoORSs2hl7GaevwkgXVW-kPzsaXFPcQ3lBBgU/s1600-h/tt.jpg"><img id="BLOGGER_PHOTO_ID_5338893621191045186" style="DISPLAY: block; MARGIN: 0px auto 10px; WIDTH: 265px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjZrxq69d7d4pnT7KVBQF0r513wrdTHVcJ-d4Pdmh6tHVggl1kWNu_jt0xwSMb3wgVrFZbn7xVLyRN7yE7ngPdAgbLB4LUIhPkF9Y5MmBtoORSs2hl7GaevwkgXVW-kPzsaXFPcQ3lBBgU/s400/tt.jpg" border="0" /></a><br /><div><a href="https://blogger.googleusercontent.com/img/b/R29vZ2xl/AVvXsEivTp2yzJXebk_zdIJ1Wr3siZMQJ-FtfQNJeClQxMJzu0TKYxNz-po5gvNWKGqFIDT2i7vAJkf0MzPxUiWwuAzYZZZWQ9Y2pSsqjgTJj_p1JwMLyqfSH6SXQK37tT5ibl6va6plHDGymCo/s1600-h/tt.jpg"></a><div><br />ಕಲಿಸಿ, ಬೆಳೆಸಿದ ಮೈಸೂರು ಬೇಡ ಬೇಡ ಎಂದರೂ ಊರು ಸುತ್ತುವ ಆಸೆಯಿಂದ ಮೈಸೂರು ಬಿಟ್ಟಾಗಲೂ ಕಣ್ಣಲ್ಲಿ ನೀರಿತ್ತು. ಮನಸ್ಸು ಒದ್ದೆ ಮುದ್ದೆ ಮಾಡಿಕೊಂಡು ಧಾರವಾಡಕ್ಕೆ ೨೦೦೭ರ ಮೇ ಒಂದರಂದು ಕಾಲಿರಿಸಿದೆ. ಧಾರವಾಡದಲ್ಲಿ ಆಗಿನ್ನೂ ಬಿಸಿಲು. ಅದು ನಿಗಿ ನಿಗಿ ಉರಿದು ಉತ್ತರ ಕರ್ನಾಟಕದ ಬಿಸಿಲ ಝಲಕ್ ನನಗೆ ಅರಿವಾಗುವ ಹೊತ್ತಿಗೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಯಿತು. ಮೋಡಗಳು ಎಂದೂ ಒಂದೊಕ್ಕೊಂದು ಡಿಕ್ಕಿ ಹೊಡೆದು ಸಿಡಾರ್, ಗುಡಾರ್ ಎಂಬ ಸದ್ದು ಹೊರಡಿಸದೇ ಧೋ..ಧೋ... ಎಂದು ಮಳೆ ಸುರಿಸಿತು. ಈ ಊರಲ್ಲಿ ಗುಡುಗು, ಸಿಡಿಲು ಬಾರಿಸುವುದೇ ಇಲ್ಲವಾ ಎಂದನಿಸಿತು.<br />ಧಾರವಾಡದ ಮಳಿ ನಂಬಬ್ಯಾಡ<br />ಬೆಳಗಾವಿ ಹುಡುಗಿ ನಂಬಬ್ಯಾಡ<br />ಎಂಬ ಮಾತುಗಳು ಆಗಾಗ ಮಂದಿ ಆಡತೊಡಗಿದರು. ನಾನು ಮಂಡ್ಯ, ಮೈಸೂರು ಭಾಷೆಯಲ್ಲೇ ಮಾತನಾಡಿದರೆ ಜನ ನನ್ನ ಹೊರಗಿನವ ಎಂದೇ ನೋಡತೊಡಗಿದರು. ನಾನು ಅವರಂತೆಯೇ ಮತಾನಾಡುವುದು ರೂಢಿಸಿಕೊಳ್ಳತೊಡಗಿದೆ. ರೊಟ್ಟಿ ಪಲ್ಲೆ ಇಷ್ಟವಾಯಿತು. ಸಂಜೆ ಹೊತ್ತು ಮಿರ್ಚಿ ಗಿರಮಿಟ್ ಪ್ರಿಯವಾಗತೊಡಗಿತು. ನಾನು ಧಾರವಾಡ ಹಚ್ಚಿಕೊಳ್ಳತೊಡಗಿದೆ.<br /><br />ಆಗ ತಾನೆ ಹಿಟ್ ಆಗಿದ್ದ ಮುಂಗಾರು ಮಳೆ ಸಿನಿಮಾದ ಅನಿಸುತ್ತಿದೆ ಯಾಕೋ ಇಂದು ಹಾಡಿಗಿಂತ ನನಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡೇ ಪ್ರಿಯವಾಗತೊಡಗಿತು. ಕಾರಣ, ಬೆಳಗ್ಗೆ ಕಣ್ಣು ಬಿಡುವ ಹೊತ್ತಿಗೆ ಮಳೆ ಸುರಿಯುತ್ತಿತ್ತು. ಎದ್ದವನೇ ಕಂಪ್ಯೂಟರ್ ಆನ್ ಮಾಡಿ ಮುಂಗಾರು ಮಳೆಯೇ ಹಾಡು ಹಾಕುತ್ತಿದ್ದೆ. ಏಕೋ ಗೊತ್ತಿಲ್ಲ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡು ಶುರುವಾಗುತ್ತಿದ್ದಂತೆ ಮನೆ ಹಿಂದಿನ ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಅವಳು ನಿಂತು ಮಳೆ ನೀರು ಹಿಡಿಯುತ್ತಾ ನಿಲ್ಲುತ್ತಿದ್ದಳು. ಅವಳೂ ಇದೇ ಹಾಡು ಗುನುಗುತ್ತಿದ್ದಳು. ನಾನು ಅದನ್ನು ಮೆರೆಯಲ್ಲೇ ನಿಂತು ನೋಡಬೇಕು. ನಾನು ಕಂಡರೆ ಆಕೆ ಮರೆಯಾಗಿ ಬಿಡುತ್ತಿದ್ದಳು. ಆ ಮಳೆ ಅವಳಿಗೆ ಅದ್ಯಾವ ನೆನಪು ತರಿಸುತಿತ್ತೋ...? ಮಳೆ ಮುಗಿಯುವ ಹೊತ್ತಿಗೆ ಅವಳ ಇಹ ಪರ. ಅವಳ ಇಂಜಿನಿಯರಿಂಗ್ ಕಾಲೇಜಿನ ಹುಡುಗ ಎಲ್ಲರೂ ಗೊತ್ತಾದರು.<br />ಮಳೆ ತನ್ನ ಬಿರುಸು ಕಳೆದುಕೊಳ್ಳುವ ಹೊತ್ತಿಗೆ ನನ್ನ ನೆರಳಿನಂತೆಯೇ ಕಾಯುವ ಗೆಳೆಯ ಕಲಂದರ್ ನನಗೆ ಮಳೆಯಲ್ಲೇ ಅರ್ಧ ಧಾರವಾಡ ತೋರಿಸಿದ್ದರು. ಊರು ನೋಡು ನೋಡುತ್ತಾ ಕಣ್ಮಣಿಗೂ ತೋರಿಸುತ್ತಾ ಮಳೆಯಲ್ಲೇ ತಿರುಗಾಡಿದೆ. ಮಳೆ ಮುಗಿದು ಚಳಿ ಆವರಿಸುವ ಹೊತ್ತಿಗೆ ಕಣ್ಮಣಿ ಆರೋಗ್ಯ ಸುಧಾರಿಸಿ, ಟಾಟಾ ಹೇಳಿಯಾಗಿತ್ತು. ಆದರೆ, ಬೆಳ ಬೆಳಗ್ಗೆ ಏಳುವ ಚಟ ಹೋಗಿರಲಿಲ್ಲ. ನಮ್ಮ ಹುಬ್ಬಳ್ಳಿ ಆವೃತ್ತಿಯೂ ಶುರುವಾಗಿತ್ತು. ಕೆಲಸದ ಜವಾಬ್ದಾರಿ ಜೊತೆಗೆ, ಅಷ್ಟರಲ್ಲಿ ಸರ್ಕ್ಯೂಲೇಷನ್ ವಿಭಾಗಕ್ಕೆ ನಮ್ಮ ಚಿಕ್ಕಮಠ ಬಂದು ರೂಂ ಮೇಟ್ ಆದ. ಟಾಟಾ ಮರೆತು ಕೆಲಸದಲ್ಲಿ ಸಕ್ರಿಯನಾದೆ. ಧಾರವಾಡದ ಊರೂರು ಸುತ್ತುತ್ತಾ ವಿಶೇಷ ವರದಿಗಳ ಹೆಕ್ಕಿ ತಂದೆ. ಇವ ಸಣ್ಣ ಹುಡುಗ ಅಂದುಕೊಂಡವರು ಮೆಚ್ಚುಗೆಯಿಂದ ನೋಡ ತೊಡಗಿದರು. ಕೆಲವರು ಸಣ್ಣ ಕಿರಿಕಿರಿ ಮಾಡಿದರು. ಅದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಒಂದು ವರ್ಷ ಕಳೆಯುವುದರ ಒಳಗೆ ನಾನು ಧಾರವಾಡಿಗನಾಗಿದ್ದೆ.<br />ಧಾರವಾಡದ ಸುದ್ದಿಗಾರರ ಪೈಕಿ ನಾನೇ ಅತಿ ಚಿಕ್ಕ ವಯಸ್ಸಿನವನಿದ್ದೆ. ಒಂದು ವರ್ಷ ಕಳೆಯುವುದರೊಳಗೆ ಧಾರವಾಡ ಮೀಡಿಯಾದಲ್ಲಿ ಹೊಸಬರು ಬಂದರು. ನಾನು ಹಳಬನಾಗಿದ್ದೆ. ಪತ್ರಕರ್ತರೆಲ್ಲರ ಮಿತ್ರ ಡಾ. ಶ್ಯಾಮಮೂರ್ತಿ ನಾಯಕ ಅಚ್ಚುಮೆಚ್ಚಾಗಿದ್ದ. ಆವರ ೭೫ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು. ಎದುರಾದ ಸವಾಲುಗಳೆಲ್ಲಾ ನನ್ನ ಗಟ್ಟಿಯಾಗಿಸಿದವು. ಮಧ್ಯೆ ಬೇರೆಲ್ಲೋ ಅಲೆಯುವ ಆಸೆಯಾಗಿ ಮತ್ತೆ ಧಾರವಾಡಕ್ಕೆ ಮರಳಿದ್ದೆ. ಚುನಾವಣೆ ಕೆಲಸಗಳಿಗಾಗಿ ಬೆಳಗಾವಿ ಜಿಲ್ಲೆ ಸುತ್ತಾಡುವ ಅವಕಾಶ ಸಿಕ್ಕಿತು. ಈಗ ಮತ್ತೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಗಿದೆ. ಆದರೆ, ಈ ಬಾರಿ ಸಿಡಿಲು ಗುಡುಗು ಜೋರಾಗಿದೆ. ನನ್ನ ನಿರೀಕ್ಷೆ, ಬೇಡಿಕೆಯಂತೆಯೇ ಬೆಂಗಳೂರಿಗೆ ಬಾ ಎಂದು ಸಂಪಾದಕರು ಸೂಚಿಸಿದ್ದಾರೆ. ನನ್ನ ಬದುಕಿನ ಬಂಡಿ ಬೆಂಗಳೂರಿನತ್ತ ಹೊರಟಿದೆ. ಆದರೆ, ಇಲ್ಲಿ ಸಿಕ್ಕ ಗೆಳೆಯರು ಸಂಖ್ಯೆ, ಅವರು ತೋರಿದ ಪ್ರೀತಿ, ವಿಶ್ವಾಸ ಅಪಾರ. ಅವರ ಹೆಸರು ಬರೆದರೇ ಒಂದು ಪುಟವಾಗುತ್ತೆ. ಆ ಎಲ್ಲ ಗೆಳೆಯರ ಒಡನಾಟ, ಮಾತುಗಳು ಕೈ ಜಗ್ಗುತ್ತಿದೆ. ಕಣ್ಣಲ್ಲಿ ನನಗೇ ಗೊತ್ತಿಲದೆ ಹನಿಗೂಡಿ ವಿದಾಯ ಹೇಳುತ್ತಿವೆ. ನನ್ನೂರಿನ ಗೆಳೆಯರಿಗೆ ನಾನು ಬೆಂಗಳೂರಿಗೆ ಬರುತ್ತಿರುವುದು ಖುಷಿ. ಇಲ್ಲಿನ ಗೆಳೆಯರಿಗೆ ಕಷ್ಟ. ನನಗೆ ಎರಡೂ ಆಗುತ್ತಿದೆ. ಆದರೆ, ಧಾರವಾಡದ ಮೇಲಿನ ಮೂಹ ಎಷ್ಟಿದೆಯೆಂದರೇ.. ಐದು ದಿನಗಳಿಂದ ಯಾಕೋ ಊರಿಗೆ ಫೋನ್ ಮಾಡಿಲ್ಲ. ಅಲ್ಲಿ ಸಂಭ್ರಮದ ಮಾತು ಕೇಳಿ ಬರುತ್ತವೆ. ಯಾಕೋ ಫೋನ್ ಮಾಡಬೇಕು ಅನಿಸುತ್ತಲೂ ಇಲ್ಲ. ಎಮೋಷನಲ್ ಫೂಲ್ ಆಗಬೇಡ ಎಂಬ ಕಣ್ಮಣಿಯ ಮಾತುಗಳು ನೆನಪಾಗುತ್ತವೆ. ಸವಿ ನೆನಪುಗಳ ಹೊತ್ತು ಬೆಂಗಳೂರಿಗೆ ಹೊರಟಿದ್ದೇನೆ. ಮತ್ತೆ ಮಳೆ ಉಯ್ಯುತ್ತಿದೆ, ಎಲ್ಲಾ ನೆನಪಾಗುತ್ತಿದೆ...., </div></div>ಅವಿhttp://www.blogger.com/profile/07196818175613402260noreply@blogger.com9tag:blogger.com,1999:blog-6342319973848548604.post-30688239087845115102009-05-03T22:24:00.000-07:002009-05-03T22:39:56.714-07:00ಸಂಬಳ ಹೆಚ್ಚು ಅಂತ ಹೆಣ್ಣು ಕೊಡಲಿಲ್ಲ!<a href="https://blogger.googleusercontent.com/img/b/R29vZ2xl/AVvXsEguMPA4cWOhcq-bejQzZN_U0E6ifzb4j6L1I_QBQCjnPGmwZd0MWLCU1wkk0VJ7LlGmu1fxTo1p7mcPhfT9c1j5Te9fAN49lHBEDmcLpUUGPoBO9lqQhmHJ07rBfPIqW3h0LWsZmX3DnQ0/s1600-h/chik.jpg"><img id="BLOGGER_PHOTO_ID_5331838006165983826" style="FLOAT: left; MARGIN: 0px 10px 10px 0px; WIDTH: 184px; CURSOR: hand; HEIGHT: 218px" alt="" src="https://blogger.googleusercontent.com/img/b/R29vZ2xl/AVvXsEguMPA4cWOhcq-bejQzZN_U0E6ifzb4j6L1I_QBQCjnPGmwZd0MWLCU1wkk0VJ7LlGmu1fxTo1p7mcPhfT9c1j5Te9fAN49lHBEDmcLpUUGPoBO9lqQhmHJ07rBfPIqW3h0LWsZmX3DnQ0/s400/chik.jpg" border="0" /></a><br /><div><a href="https://blogger.googleusercontent.com/img/b/R29vZ2xl/AVvXsEhVp5hu-emsXkLXh5vXiVD5zALKawOKqczjI13lurjri1WXdADobiE-IEEhpRQOhHCQBiyLP9sLymya2hjDUawaxoMAK0FsZtDRZV1ICw4roo-BgcnaVoSfg9bEMMHfBrK3Bf3Xr1lt5iw/s1600-h/chik.jpg"></a><p>ಸಂಬಳ ಕಡಿಮೆ ಅಂತ ಪತ್ರಕರ್ತರಿಗೆ, ಪತ್ರಿಕೆಯಲ್ಲಿ ಕೆಲಸ ಮಾಡುವವರಿಗೆ ಹೆಣ್ಣು ಕೊಡುತ್ತಿರಲಿಲ್ಲ. ಪತ್ರಕರ್ತರೊಬ್ಬರು ಹೆಣ್ಣು ನೋಡಲು ಹೋದಾಗ, ‘ಪತ್ರಿಕೆಯಲ್ಲಿ ಕೆಲಸ ಮಾಡೋದೇನೋ ಸರಿ. ಜೀವನಕ್ಕೆ ಏನು ಮಾಡ್ತೀರಿ’ ಅಂತ ಒಬ್ಬರು ಕೇಳಿದ್ದರಂತೆ ಎಂಬುದು ಪತ್ರಿಕೋದ್ಯಮದಲ್ಲಿ ಚಾಲ್ತಿಯಲ್ಲಿರುವ ಹಳೆಯ ಘಟನೆ. </p><p>ಆದರೆ, ನನ್ನ ಗೆಳೆಯನೊಬ್ಬನಿಗೆ ಸಂಬಳ ಹೆಚ್ಚು ಅನ್ನೋ ಕಾರಣಕ್ಕೆ ಹೆಣ್ಣು ಕೊಡಲಿಲ್ಲ. ಅವನಿಗೆ ಮೂವತ್ತು ಸಾವಿರ ಸಂಬಳ ಬರುತ್ತದೆ ಎಂದರೆ ನಂಬಲು ಹೆಣ್ಣಿನ ಕಡೆಯವರಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೆ ಈ ಪರಿ ಸುಳ್ಳು ಹೇಳೋ ಗಂಡಿಗೆ ಹೆಣ್ಣು ಕೊಡಲ್ಲ ಎಂದು ಬಿಟ್ಟರು!. </p><p>ಹೌದು, ನಾನು ಧಾರವಾಡಕ್ಕೆ ಬಂದ ಐದು ತಿಂಗಳಲ್ಲಿ ಸರ್ಕ್ಯೂಲೇಶನ್ ವಿಭಾಗಕ್ಕೆ ಶಿವಾನಂದ ಚಿಕ್ಕಮಠ ನೇಮಕವಾಯಿತು. ಆತ ಬರಿಯ ಸಹೋದ್ಯೋಗಿಯಾಗದೆ ನನ್ನ ರೂಂಮೇಟ್ ಆದ. ಹೋಗಿ -ಬನ್ನಿ ಮಾಯಾವಾಗಿ ಹೋಗಲೇ ಅನ್ನುವಷ್ಟು ಆತ್ಮೀಯರಾದೆವು. ಆತನಿಗೆ ಬರವಣಿಗೆಯ ಮೋಹವೂ ಇದ್ದುದ್ದರಿಂದ ನನ್ನ ಕೆಲಸದಲ್ಲಿ ಅವನು, ನಾನು ಅವನ ಕೆಲಸದಲ್ಲಿ ಕೈ ಜೋಡಿಸುತ್ತಿದ್ದೆವು. ಒಂದು ದಿನ ಧಾರವಾಡ ರೈಲ್ವೆ ಸ್ಟೇಷನ್ನಲ್ಲಿ ನಾನು ಟೋಪಿ ಧರಿಸಿ ಪೇಪರ್ ಮಾರುವಂತೆಯೂ ಮಾಡಿದ್ದ. ಕೆಲಸದಲ್ಲಿ ದೈತ್ಯ ಆತ. </p><p>ಸುಮಾರು ಒಂದು ವರ್ಷದಲ್ಲಿ ಆತನ ದೈತ್ಯ ಕೆಲಸ ಕೇಂದ್ರ ಸರ್ಕಾರಿ ನೌಕರಿ ಎಂದೇ ಕರೆಯಿಸಿಕೊಳ್ಳುವ ಇಂಗ್ಲಿಷ್ನ ದಿ ಹಿಂದು ಪತ್ರಿಕೆಯವರಿಗೆ ಇಷ್ಟವಾಗಿ ನೇಮಿಸಿಕೊಂಡರು. ನಮ್ಮಲ್ಲಿ ಟಿಎ ಡಿಎ ಎಲ್ಲಾ ಸೇರಿ ಹತ್ತು ಸಾವಿರ ರು.ವರೆಗೆ ಸಂಬಳ ಬರುವುದು ಕಷ್ಟವಿತ್ತು. ಆದರೆ, ದಿ ಹಿಂದು ಪತ್ರಿಕೆಯಲ್ಲಿ ಆತ ಟಿಎ ಡಿಎ ಎಲ್ಲಾ ಸೇರಿ ತಿಂಗಳಿಗೆ ಮೂವತ್ತು ಸಾವಿರ ರು.ವರೆಗೂ ಪಡೆಯುತ್ತಾನೆ. ಅದೇ ಸತ್ಯವನ್ನು ಹೆಣ್ಣಿನ ಕಡೆಯವರಿಗೆ ನಂಬಲಾಗಲಿಲ್ಲ. ಒಮ್ಮೆ ನೇರವಾಗಿಯೇ, ತಮಾಷೆ ಬೇಡ ಸರಿಯಾಗಿ ಹೇಳಿ ಎಂದು ಕೇಳಿದ್ದಾರೆ. ಪೇಪರ್ ಕೆಲಸದಲ್ಲಿ ಇಷ್ಟು ಕೊಡುವುದು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. ಆತ ಕಚೇರಿಯಲ್ಲಿ ಇಲ್ಲದ ಸಮಯ ನೋಡಿ ಅವರ ಮೇಲಿನವರಲ್ಲಿ ವಿಚಾರಿಸಿದ್ದಾರೆ. ಅವರು ಸಂಬಳದ ಮೊತ್ತ ಅಷ್ಟೇ ಹೇಳಿದ್ದಾರೆ. ಕೊನೆಗೆ ಮದುವೆ ದಲ್ಲಾಳಿಯ ಬಳಿ, ‘ಮದುವೆಗೆ ಮೊದಲೆ ಈ ಪರಿ ಸುಳ್ಳು ಹೇಳ್ತಾರಲ್ರಿ. ಅವರ ಆಫೀಸಲ್ಲೂ ಅಡ್ಜಸ್ಟ್ ಮಾಡಿಸ್ಯಾನ. ಹೆಣ್ಣು ಕೊಡಲ್ಲ’ ಅಂದು ಬಿಟ್ಟರಂತೆ.</p><p>ನನಗೆ ಫೋನ್ ಮಾಡಿ ಹೇಳಿದಾಗ ಇಬ್ಬರೂ ಜೋರಾಗಿ ನಕ್ಕಿದ್ದೆವು. ಕೈಯಾಗ ರೊಕ್ಕ ಇಲ್ಲದ ಕಾಲದಾಗೂ ಹೆಣ್ಣು ಕೊಡಲಿಲ್ಲ, ರೊಕ್ಕ ಐತಿ ಅಂದ್ರು ಕೊಡ್ತಿಲ್ವಲ್ಲ ಎಂದು ನಗುತ್ತಲೇ ವಿಷಾದ ವ್ಯಕ್ತಪಡಿಸಿದ್ದ. ಆ ಶಿವಾನಂದನಿಗೆ ಕೊನೆಗೂ ಜಮಖಂಡಿ ಬಳಿಯ ಹೆಣ್ಣು ಗೊತ್ತಾಗಿದೆ. ಮೇ 26ರಂದು ಬೆಳಗಾವಿಯಲ್ಲಿ ಮದುವೆ. ಆದರೆ, ನಮ್ಮ ಶಿವಾನಂದನಿಗೆ ಒಂದು ಡೌಟು -‘ಆ ಹುಡುಗಿಗೆ ಟೇಸ್ಟೆ ಇಲ್ಲ ಅನ್ಸುತ್ತಾ ಇದೆ. ಸುಮಾರು ನೂರು ಹುಡುಗಿಯರನ್ನು ನೋಡಿದೆ. ಎಲ್ಲರಿಂದಲೂ ತಿರಸ್ಕೃತನಾದ ನನ್ನನ್ನು ಅಷ್ಟು ಚೆನ್ನಾಗಿ ಇರೋ ಹುಡುಗಿ ಒಪ್ಯಾಳಲ್ಲ. ಕೇಳೇ ಬಿಡ್ಲಾ ಅವಳ್ನಾ..’ಎಂದ. ಬೇಡ ಇರು ಗುರು ಮದುವೆ ಆದ್ಮೇಲೆ ಕೇಳು. ಆಮೇಲೆ ಅವಳು ಬ್ಯಾಡ ಅಂದಾಳು ಎಂದು ನಕ್ಕೆವು. ಇಷ್ಟು ದಿನ ಇಬ್ಬರು ಸೇರಿದರೆ ನಗುವುದೇ ಕಾಯಕವಾಗಿತ್ತು. ಮೇ 26ರಂದು ಕೊನೆಯ ಬಾರಿ ನಕ್ಕು ಬಿಡು ಎಂದಿದ್ದೇನೆ. ನಿನ್ನ ನಗುವಿಗೂ ಕೊನೆ ಹೇಳ್ತೀನಿ ಅಂತ ಶಪಥ ಮಾಡ್ಯಾನ. ಶಪಥ ಸುಳ್ಳಾಗಿ, ಅವನ ಹೊಸ ಜೀವನಕ್ಕೆ ಒಳ್ಳೆಯದಾಗಲಿ. ನಗು <span class="">ಜಾರಿಯಲ್ಲಿರಲಿ...,</span></p></div>ಅವಿhttp://www.blogger.com/profile/07196818175613402260noreply@blogger.com7tag:blogger.com,1999:blog-6342319973848548604.post-36206706273733513112009-04-25T01:18:00.000-07:002009-04-25T01:22:00.732-07:00ಸಕ್ಕರೆ ನಾಡಿನ ಕಹಿ ಸತ್ಯಗಳು<a href="https://blogger.googleusercontent.com/img/b/R29vZ2xl/AVvXsEh2cBJKRrZnAwOWoVQbTHQERXUgBdIZxKtPd04i7IY8etrQv1cscrlKZSdashbveDkCPRWfeYoIRKw6QumttxvElfIeusggp4qJPd9-9H1OJO0a9MwKznCL1TRicnU0BAhMzqmzs_2N9cc/s1600-h/Y2.JPG"><img id="BLOGGER_PHOTO_ID_5328541187640388754" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEh2cBJKRrZnAwOWoVQbTHQERXUgBdIZxKtPd04i7IY8etrQv1cscrlKZSdashbveDkCPRWfeYoIRKw6QumttxvElfIeusggp4qJPd9-9H1OJO0a9MwKznCL1TRicnU0BAhMzqmzs_2N9cc/s400/Y2.JPG" border="0" /></a><br /><div><br />‘ಚಿಕ್ಕೋಡಿ’ ಒಂದು ಕಾಲಕ್ಕೆ ರಾಷ್ಟ್ರರಾಜಕಾರಣದಲ್ಲಿ ಹೆಸರು ವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರವು ಸಮಸ್ಯೆಗಳಿಂದಲೇ ಹೆಚ್ಚು ಸುದ್ದಿಗೆ ಬರುತ್ತಿವೆ. ಸಮಸ್ಯೆಗಳು ಮಾತ್ರವಲ್ಲ ಈ ಕ್ಷೇತ್ರದಲ್ಲಿ ಸಮೃದ್ಧಿಯೂ ಇರುವುದು ವಿಶೇಷ. ಇಲ್ಲಿ ಬೇವೂ ಇದೆ, ಬೆಲ್ಲವೂ ಇದೆ.<br />ಕ್ಷೇತ್ರದ ಭೌಗೋಳಿಕ ವ್ಯಾಪ್ತಿಯ ವಿಸ್ತಾರದಷ್ಟೇ ವೈಚಿತ್ರದಂತೆಯೇ ಇಲ್ಲಿನ ಸಮಸ್ಯೆಗಳು ಒಂದು ವಿಧಾನಸಭಾ ಕ್ಷೇತ್ರಕ್ಕಿಂತ ಒಂದು ವಿಚಿತ್ರವಾಗಿದೆ. ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ವ್ಯತಿರಿಕ್ತ ಎನ್ನುವಂತಹ ವಾತಾವರಣ ಇದೆ. ಅಥಣಿ, ರಾಯಬಾಗ, ಕಾಗವಾಡ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ನೆರೆಯೂ ಉಂಟು, ಬರವೂ ಉಂಟು. ಬರ ಮತ್ತು ನೆರೆಯ ವಿಷಯದಲ್ಲಿ ಇದೊಂದು ೫೦:೫೦ ಕ್ಷೇತ್ರ.<br />ಸಪ್ತನದಿಗಳಿವೆ..,<br />- ಸಮೃದ್ಧಿ ತಂದುಕೊಡಬೇಕಾದ ಕೃಷ್ಣಾ ನದಿ ಸಂಕಷ್ಟ ಹಂಚತೊಡಗಿದೆ. ೨೦೦೫ರಿಂದ ಕೃಷ್ಣಾ ನದಿ ಪ್ರವಾಹ ನದಿ ದಂಡೆಯ ಹಳ್ಳಿಗಳನ್ನು ಹಣಿದು ಹಾಕಿದೆ. ಚಿಕ್ಕೋಡಿ ತಾಲೂಕು ಒಂದರಲ್ಲೇ ವೇದಗಂಗಾ, ದೂದಗಂಗಾ, ಚಕಂತ್ರಾ, ಪಂಚಗಂಗಾ ಹಾಗೂ ಕೃಷ್ಣಾ ಸೇರಿದಂತೆ ೫ ನದಿಗಳು ಹರಿಯುತ್ತವೆ. ಆದರೆ, ನಾಲ್ಕು ಸಣ್ಣ ನದಿಗಳೂ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಕೃಷ್ಣಾ ಜೊತೆ ಸೇರಿಕೊಂಡು ಕೃಷ್ಣಾರ್ಪಣ ಆಗುತ್ತದೆ. ಇನ್ನು ಯಮಕನಮರಡಿ ಕ್ಷೇತ್ರದಲ್ಲಿ ಘಟಪ್ರಭಾದಲ್ಲಿ ಹಿರಣ್ಯಕೇಶಿ ನದಿ ವಿಲೀನಗೊಂಡು ಸಾಗುತ್ತದೆ. ಇದು ಸಪ್ತನದಿಗಳ ಕ್ಷೇತ್ರ.<br />ಬರ ಥರ..ಥರ..<br />- ಕುಡಚಿ, ಚಿಕ್ಕೋಡಿ ಹಾಗೂ ರಾಯಬಾಗ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಲ್ಪ ನೀರಾವರಿ ಪ್ರದೇಶ ಹೆಚ್ಚು. ಆದರೆ, ಅಲ್ಲೂ ಬರಗಾಲ ಎದುರಿಸುವ ಪ್ರದೇಶ ಇದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉತ್ತರ ದಿಕ್ಕಿಗೆ ಇರುವ ಎಲ್ಲಾ ಹಳ್ಳಿಗಳು ಬರ ಎದುರಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲಕ್ಕಿಂತ ಹೆಚ್ಚು ಬರಗಾಲ ಎದುರಿಸುವುದು ಅಥಣಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳು.<br />- ೧೯೭೨ ರಿಂದ ಅಥಣಿ ಪ್ರದೇಶದಲ್ಲಿ ಅತೀ ಕಡಿಮೆ ಮಳೆಯಾಗುತ್ತದೆ. ಇಲ್ಲಿನ ಎಲ್ಲಾ ಜನರು ವರ್ಷದಲ್ಲಿ ಇಲ್ಲೇ ವಾಸಿಸುವುದು ಹೆಚ್ಚೆಂದರೇ ೬ ತಿಂಗಳು ಮಾತ್ರ. ನಂತರ ಕೆಲಸ ಅರಸಿ ಗುಳೇ ಹೋಗುತ್ತಾರೆ. ಈ ಕ್ಷೇತ್ರದ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದ್ದಾರೆ. ನೀರಾವರಿ ಪ್ರದೇಶ ಇದ್ದರೂ ರಾಯಬಾಗ, ಕಾಗವಾಡ ಕ್ಷೇತ್ರಗಳಲ್ಲಿ ಜವಳು -ಸವಳು ಭೂಮಿ, ನೀರಿನ ಸಮಸ್ಯೆ ಇದೆ. ಅಥಣಿ ಕ್ಷೇತ್ರದ ೨೨ ಹಳ್ಳಿಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.<br />ಗಡಿ -ಬಿಡಿ..,<br />- ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ರಾಯಬಾಗ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳು ಮಾತ್ರ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿಲ್ಲ. ಆದರೂ ಈ ಕ್ಷೇತ್ರಗಳಲ್ಲೂ ಮರಾಠಿಯ ಪ್ರಭಾವವಿದೆ. ನಿಪ್ಪಾಣಿ ಹಾಗೂ ಅಥಣಿ ಕ್ಷೇತ್ರದ ಅತಿ ಹೆಚ್ಚು ಪ್ರದೇಶ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿವೆ. ನಿಪ್ಪಾಣಿಯಲ್ಲಂತೂ ಮರಾಠಿಯದ್ದೇ ಪ್ರಾಬಲ್ಯ. ಹೀಗಾಗಿ ಮತ ಕೇಳುವವರು ಇಲ್ಲಿ ಮರಾಠಿಯ ಮೊರೆ ಹೋಗುವುದು ಸಾಮಾನ್ಯ.<br />ಅತಿ ದೊಡ್ಡ ಗ್ರಾಪಂ..<br />- ರಾಯಬಾಗ ವಿಧಾನಸಭಾ ಕ್ಷೇತ್ರದ ಹಾರೋಗೇರಿ ಗ್ರಾಮ ಪಂಚಾಯ್ತಿ ರಾಜ್ಯದಲ್ಲೇ ಅತಿ ದೊಡ್ಡ ಗ್ರಾಪಂ ಎಂಬ ಖ್ಯಾತಿ ಪಡೆದಿದೆ. ಹಾರೋಗೇರಿ ಗ್ರಾಮ ಪಂಚಾಯ್ತಿಯಲ್ಲಿ ೭೨ ಸದಸ್ಯರಿದ್ದಾರೆ. ಸುಮಾರು ೨೫ ಸಾವಿರ ಮತದಾರರಿದ್ದಾರೆ. ಒಂದು ಪುರಸಭೆ ಆಗುವ ಲಕ್ಷಣ ಇದ್ದರೂ, ಗ್ರಾಮ ಪಂಚಾಯ್ತಿಯಾಗಿಯೇ ಅದು ಉಳಿದಿದೆ.<br />೧೫ ಸಕ್ಕರೆ ಕಾರ್ಖಾನೆ..,<br />- ಚಿಕ್ಕೋಡಿ ಲೋಕಸಭಾ ಕ್ಷೇತ್ರ ಒಂದರಲ್ಲೇ ಒಟ್ಟು ೧೫ ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ ೯ ಕಾರ್ಖಾನೆಗಳು ಚಾಲ್ತಿಯಲ್ಲಿದ್ದರೆ, ೫ ಕಾರ್ಖಾನೆಗಳು ನಿರ್ಮಾಣದ ಹಂತದಲ್ಲಿವೆ. ೧ ಕಾರ್ಖಾನೆ ರೋಗಗ್ರಸ್ಥವಾಗಿ ಬಂದ್ ಆಗಿದೆ. ಇವುಗಳಲ್ಲಿ ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳಾಗಿವೆ. ಅಥಣಿ ವಿಧಾನಸಭಾ ಕ್ಷೇತ್ರ ಒಂದೇ ೬ ಸಕ್ಕರೆ ಕಾರ್ಖಾನೆಗಳಿಗೆ ನೆಲ ನೀಡಿದೆ. ಇಷ್ಟೆಲ್ಲಾ ಕಾರ್ಖಾನೆಗಳಿದ್ದರೂ ಇಲ್ಲಿನ ಬಹುಪಾಲು ಕಬ್ಬು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗೆ ಹೋಗುತ್ತವೆ.<br />ವ್ಯಕ್ತಿ ರಾಜಕಾರಣ..,<br />ಇಷ್ಟೆಲ್ಲಾ ವಿಚಿತ್ರ ವೈರುಧ್ಯ, ಸಮಸ್ಯೆಗಳಿರುವ ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ, ಪ್ರಣಾಳಿಕೆ, ಕಾರ್ಯಕ್ರಮಗಳಿಗಿಂತ ವ್ಯಕ್ತಿಗತ ರಾಜಕಾರಣಕ್ಕೇ ಹೆಚ್ಚು ಬೆಲೆ. ವ್ಯಕ್ತಿಗತ ವರ್ಚಸ್ಸೇ ಇಲ್ಲಿನ ಚುನಾವಣೆ ವಸ್ತು. ಇಷ್ಟು ದಿನ ಮೀಸಲು ಕ್ಷೇತ್ರವಾಗಿದ್ದ ಇದು ಸಾಮಾನ್ಯ ಕ್ಷೇತ್ರವಾಗಿ ಹೊಸದಾಗಿ ಜಾತಿ ಲೆಕ್ಕಾಚಾರಕ್ಕೂ ಎಡೆ ಮಾಡಿದೆ. </div>ಅವಿhttp://www.blogger.com/profile/07196818175613402260noreply@blogger.com0tag:blogger.com,1999:blog-6342319973848548604.post-75434817059928902622009-04-23T06:21:00.000-07:002009-04-23T06:26:17.566-07:00ಗೆಳೆಯನ ಹೊಸ ಆಲೋಚನೆ...,<a href="https://blogger.googleusercontent.com/img/b/R29vZ2xl/AVvXsEiVF_JGjDQcvv0bSKNLq-z90a7d5o40XfPzYLRMSK1ufd4hyphenhypheng77Qq-k8x8b3wxrYG4HtG8y3Y95Ormh42_TorNj3gGfGoP49rXalauTYf4SyV88chftxbICjMKqsB4ht9ehvb1Wa-qYkIY/s1600-h/4x6.JPG"><img id="BLOGGER_PHOTO_ID_5327877377620964610" style="DISPLAY: block; MARGIN: 0px auto 10px; WIDTH: 267px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEiVF_JGjDQcvv0bSKNLq-z90a7d5o40XfPzYLRMSK1ufd4hyphenhypheng77Qq-k8x8b3wxrYG4HtG8y3Y95Ormh42_TorNj3gGfGoP49rXalauTYf4SyV88chftxbICjMKqsB4ht9ehvb1Wa-qYkIY/s400/4x6.JPG" border="0" /></a><br /><div></div>ಅವಿhttp://www.blogger.com/profile/07196818175613402260noreply@blogger.com2tag:blogger.com,1999:blog-6342319973848548604.post-64362077890633519352009-04-17T01:31:00.000-07:002009-04-17T01:45:44.212-07:00ಚಿಕ್ಕೋಡಿ ಎಂಬ ಬೇವು ಬೆಲ್ಲದ ನಾಡಿನಲ್ಲಿ..,<a href="https://blogger.googleusercontent.com/img/b/R29vZ2xl/AVvXsEghSNMNYpycOby25dbiVVGtmsPrGK-i72cUSDAgHPopnHQVdiBHipqy2L1EICox7SjSWCQSCop8H8HqNroHP8M6PBTOoNMoEuwOVXfw4ZKZ3Dd5yx_brPDBPhTXH79F4I508_e3_C08SUU/s1600-h/16chi1.JPG"><img id="BLOGGER_PHOTO_ID_5325575993915315170" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEghSNMNYpycOby25dbiVVGtmsPrGK-i72cUSDAgHPopnHQVdiBHipqy2L1EICox7SjSWCQSCop8H8HqNroHP8M6PBTOoNMoEuwOVXfw4ZKZ3Dd5yx_brPDBPhTXH79F4I508_e3_C08SUU/s400/16chi1.JPG" border="0" /></a><br /><div></div>‘ಧಾರವಾಡ’ ಉತ್ತರ ಕರ್ನಾಟಕದಲ್ಲೇ ಇದೆ. ‘ಚಿಕ್ಕೋಡಿ’ ಉತ್ತರ ಕರ್ನಾಟಕದಲ್ಲೇ ಇದೆ.ಆದರೆ, ಧಾರವಾಡಕ್ಕೂ ಚಿಕ್ಕೋಡಿಗೂ ಸಾಮಾನ್ಯ ಎನ್ನುವಂತಹ ಒಂದೇ ಒಂದು ಅಂಶವಿಲ್ಲ.ಅಷ್ಟೇ ಏಕೆ ಬೆಳಗಾವಿ ಜಿಲ್ಲೆಯ ಒಡಲಲ್ಲೇ ಇರುವ ಚಿಕ್ಕೋಡಿಗೆ ಬೆಳಗಾವಿ ಜೊತೆಗೂಹೋಲಿಸಿ ಮಾತನಾಡುವುದು ಸಾಧ್ಯವಿಲ್ಲ. ಅಬ್ಬಬ್ಬಾ ಸಮೃದ್ಧ ನಾಡು ಎಂದುಕೊಳ್ಳುತ್ತಾ ಸಾಗುತ್ತಿದ್ದಂತೆ ನಿಮಗೆ ಬರಗಾಲ ಪ್ರದೇಶಎದುರಾಗುತ್ತದೆ. ಇಲ್ಲಿನ ಬಿಸಿಲು, ಸಮುದ್ರದಂತೆ ಕೊನೆಯಿಲ್ಲದೆ ಚಾಚಿಕೊಂಡಿರುವಬರಭೂಮಿ ಕೆಲಕಾಲ ಆತಂಕ ಮೂಡಿಸುತ್ತದೆ.<br />ಮತ್ತೆ ಒಂದಿಷ್ಟು ದೂರ ಸಾಗುತ್ತಿದ್ದಂತೆಕೃಷ್ಣಾ ನದಿ ಗಕ್ಕನೆ ಎದುರಾಗುತ್ತದೆ. ಇದು ಥೇಟು ಪುರುಷ ಗಾಂಭೀರ್ಯದಿಂದಲೇಹರಿಯುತ್ತದೆ, ಹಣಿಯುತ್ತದೆ. ಈ ನದಿಗೆ ಕಾವೇರಿ, ಮಲಪ್ರಭಾ, ಘಟಪ್ರಭಾ ನದಿಗಳಂತೆ ನಲಿಯುತ್ತಾ ಸಾಗುವುದು ಒಗ್ಗುವುದೇಇಲ್ಲ ಎಂಬಷ್ಟು ಗಾಂಭೀರ್ಯದಿಂದಲೇ ಹರಿಯುತ್ತದೆ. ತೀರಾ ಕೆಲವೇ ಕೆಲವು ಕಡೆ ಸಾಗುವ ದೃಶ್ಯ ಕಾಣುತ್ತದೆ. ಬರಗಾಲವನ್ನೇ ಹಾಸಿ, ಹೊದ್ದು, ಉಂಡು ಬದುಕುವಪ್ರದೇಶವಿದೆ. ಇಷ್ಟೆಲ್ಲದರ ಜೊತೆಗೆ ದೇವದಾಸಿ, ಗಾಳಿ ಬಿಡಿಸುವುದು ಮತ್ತಿತ್ಯಾದಿ ಕಂದಾಚಾರಗಳು ಇದರ ಒಡಲಲ್ಲಿವೆ.<br />ಇದೊಂದೇ ಲೋಕಸಭಾ ಕ್ಷೇತ್ರದಲ್ಲಿ ೧೫ ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗಳಸಮೃದ್ಧಿಯಷ್ಟೇ ರೈತರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ವ್ಯಾಪಕ ತಂತ್ರ,ಕುತಂತ್ರಗಾರಿಕೆಗಳು ಇವೆ. ಹೊಲದಲ್ಲಿ ನಡು ಬಗ್ಗಿಸಿ ದುಡಿಯುವ ರೈತ ಮಾತ್ರಚುನಾವಣೆಯಲ್ಲಿ ಉತ್ತಮನನ್ನು ಆಯ್ಕೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರಕಂಡುಕೊಳ್ಳಬಹುದು. ಆದರೆ, ಅಂತುಹುದೆಲ್ಲವನ್ನೂ ಇಡೀ ಭಾರತದಲ್ಲೇ ಕಷ್ಟವಾಗಿರುವುದರಿಂದಇಲ್ಲಿ ನಿರೀಕ್ಷಿಸುವುದು ತಪ್ಪಾಗುತ್ತದೆ. ಅಂತಹುದೊಂದು ಐಡಿಯಾವೇ ಇದ್ದಂತಿಲ್ಲಇವರಿಗೆ.<br />ಬಡತನ, ಅನಕ್ಷರತೆಯು ಸಲೀಸಾಗಿ ಪಾಳೇಗಾರಿಕೆಗೆ, ಹಣಕ್ಕೆ ಬೆದರಿ ಶರಣಾದಂತೆಯೇಇಲ್ಲಿನ ಕತ್ತಿ ಸಾಹುಕಾರ ಹಾಗೂ ಹುಕ್ಕೇರಿ ಸಾಹುಕಾರರಿಗೆ ಜನ ತಲೆಬಾಗಿದ್ದಾರೆ.ಮರಾಠಿಯ ಪ್ರಾಬಲ್ಯ, ಗಡಿ ಸಮಸ್ಯೆ, ಜಲ ಸಮಸ್ಯೆ, ಸಕ್ಕರೆಯ ಕಣಜದಲ್ಲಿ ಓಡಾಡಿ ಅನುಭವಹೆಚ್ಚಿಸಿಕೊಳ್ಳಲು ನಮ್ಮ ಸಂಪಾದಕರು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ೧೪ ದಿನಗಳಿಂದನನ್ನ ಅನುಭವದ ಬುತ್ತಿ ತುಂಬಿದೆ. ಇನ್ನು ಒಂದು ವಾರ ಇಲ್ಲೇ ಓಡಾಡುತ್ತೇನೆ. ಎಲ್ಲಾಅನುಭವಗಳನ್ನು ಹೇಳಿಕೊಳ್ಳುವುದು ಕಷ್ಟ. ಹೇಳಿಕೊಳ್ಳಲೇಬೇಕು ಎಂದು ಕಾಡುವುದನ್ನುಬರೆಯುವ ಯತ್ನ ಮಾಡುತ್ತೇನೆ. ಅಥಣಿ ಎಂಬ ಬರಗಾಲದ ಊರಿನಲ್ಲಿ ಭಗೀರಥನಂತೆಶ್ರಮಿಸುತ್ತಿರುವ ಬಿ.ಎಲ್. ಪಾಟೀಲರು ಬಗ್ಗೆ ಹೇಳಲೇಬೇಕು. ಎಲ್ಲಾ ಸರಿ ನಿಮ್ಮೂರಲ್ಲಿಎಲೆಕ್ಷನ್ ಕಾವು ಹೇಗಿದೆ...?ಅವಿhttp://www.blogger.com/profile/07196818175613402260noreply@blogger.com2tag:blogger.com,1999:blog-6342319973848548604.post-62350541274554600562009-03-21T09:31:00.000-07:002009-03-21T09:33:08.523-07:00ಯಾವ ಕಾನ್ಫಿಡೆನ್ಸಿಗಿದೆ...?<a href="https://blogger.googleusercontent.com/img/b/R29vZ2xl/AVvXsEidvMrlR1l2vMogoex3G8oPI6MO6TsIktucSfQuqkAp6ARd0BsFThKW2lj1-VW8a4S7A3pXF_PJ97am1bGCq7GzqpS9MIB6sloUX2tASxFsK2fya2clYFFGRMszPIhqiZy0vZSNYQ6_vnE/s1600-h/confidence.jpg"><img id="BLOGGER_PHOTO_ID_5315679807312544594" style="DISPLAY: block; MARGIN: 0px auto 10px; WIDTH: 266px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEidvMrlR1l2vMogoex3G8oPI6MO6TsIktucSfQuqkAp6ARd0BsFThKW2lj1-VW8a4S7A3pXF_PJ97am1bGCq7GzqpS9MIB6sloUX2tASxFsK2fya2clYFFGRMszPIhqiZy0vZSNYQ6_vnE/s400/confidence.jpg" border="0" /></a><br /><div></div>ತುಂಬಾ ಪ್ರೀತಿಸಿದ ಗರ್ಲ್ ಫ್ರೆಂಡ್ ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುರಂತ ಏನಾದರೂ ಇದೆಯಾ? ಯುವಕನೊಬ್ಬ ಸ್ವಾಮಿ ವಿವೇಕಾನಂದರ ಮುಂದೆ ನಿಂತು ಕೇಳಿದ.<br />ಹೌದು ಖಂಡಿತಾ ಇದೆ. ಮತ್ತೊಬ್ಬ ಹುಡುಗಿ ಸಿಕ್ಕೇ ಸಿಗುತ್ತಾಳೆ ಎಂಬ ಆತ್ಮವಿಶ್ವಾಸ ಕಳೆದುಕೊಳ್ಳವುದು ದೊಡ್ಡ ದುರಂತ. ಆತ್ಮವಿಶ್ವಾಸ ಕಳೆದುಕೊಂಡರೇ ಜೀವನವನ್ನೇ ಕಳೆದುಕೊಂಡಂತೆ ಎಂದು ವಿವೇಕಾನಂದರು ಉತ್ತರಿಸಿದರಂತೆ.<br />ಈ ಘಟನೆ ಎಸ್ಎಂಎಸ್ ರೂಪದಲ್ಲಿ ಒಂದು ತಡರಾತ್ರಿ ವೈದ್ಯ ಮಿತ್ರ ಡಾ. ಮಂಜು ಮೊಬೈಲ್ನಿಂದ ಬಂತು. ಮಲಗಿದ್ದರೂ ನಿದ್ದೆ ಬರದೇ ಒದ್ದಾಡುತ್ತಿದ್ದವನು, ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಏನು ಗೊತ್ತು? ಎಂದು ಮೆಸೇಜಿಸಿದ.<br />ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಗೊತ್ತಿಲ್ಲ. ಕಾನ್ಫಿಡೆನ್ಸ್ ಗೊತ್ತು ಎಂದು ಪಾಠ ಶುರುವಿಟ್ಟ.<br />ಪಾಠ ಕೇಳಿದ ಮನಸ್ಸು, ‘ಇಡೀ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವನ್ನು ಒಬ್ಬ ಗರ್ಲ್ಫ್ರೆಂಡ್ ನೀಡಬಲ್ಲಳು, ನೀಡುತ್ತಾಳೆ. ಯಾವ ಕಾನ್ಫಿಡೆನ್ಸು ಒಬ್ಬ ಗರ್ಲ್ಫ್ರಂಡ್ ಅನ್ನು ಗೆದ್ದೇ ಗೆಲ್ಲಬಲ್ಲೇ ಎಂದು ಕಾನ್ಫಿಡೆಂಟ್ ಆಗಿ ಹೇಳುತ್ತದೆ’ ಎಂಬ ಪ್ರಶ್ನೆ ಎಸೆದೆ. ಇನ್ನೂ ಉತ್ತರ ಬಂದಿಲ್ಲ.ಅವಿhttp://www.blogger.com/profile/07196818175613402260noreply@blogger.com2tag:blogger.com,1999:blog-6342319973848548604.post-86818670950244656722009-03-02T21:23:00.000-08:002009-03-02T21:27:56.637-08:00ಈ ಊರು ಪ್ರತಿ ಬೇಸಿಗೆಗೂ ಮೊಮ್ಮಕ್ಕಳಿರುವ ವೃದ್ಧಾಶ್ರಮ<a href="https://blogger.googleusercontent.com/img/b/R29vZ2xl/AVvXsEhMbxUBvTf7jHZ0IhXr3LR2iOHnl6xNCso9wmJN97tjIJuxGgO7nrtbmjf50LPBMsOgh5nwNJz6Pj3Dehbr34Gn0h5uCqDMzmjLps5EuVUJFHYHxE8yYgFOxknT3IK-S9pJWnCZp3Qt6mM/s1600-h/gg.JPG"><img id="BLOGGER_PHOTO_ID_5308828894744106050" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 265px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhMbxUBvTf7jHZ0IhXr3LR2iOHnl6xNCso9wmJN97tjIJuxGgO7nrtbmjf50LPBMsOgh5nwNJz6Pj3Dehbr34Gn0h5uCqDMzmjLps5EuVUJFHYHxE8yYgFOxknT3IK-S9pJWnCZp3Qt6mM/s400/gg.JPG" border="0" /></a><br /><div></div>ಬಿಸಿಲ ಬೇಗೆ ಶುರುವಾಗಿದೆ. ಮರದಲ್ಲಿ ಎಲೆ ಉದುರುತ್ತಿದೆ. ಗರಿಕೆ ಹುಲ್ಲು ಕಮರಿದೆ. ದನ -ಕರುಗಳಿಗೆ ಮೇವಿನ ಅಭಾವ. ದುಡಿಯುವ ಕೈಗಳಿಗೆ ಕೆಲಸದ ಅಭಾವ. ಹೀಗಾಗಿ ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಮಂದಿ ಕೆಲಸ ಅರಸಿ ಊರು ಬಿಡವುದು ಸಾಮಾನ್ಯ. ತಾಲೂಕಿನ ಹುಣಶಿಕುಮರಿ ಮತ್ತು ಉಡವನಾಗಲಾವಿ ಗ್ರಾಮಗಳಂತೂ ವಲಸೆಯಿಂದಾಗಿ ಗ್ರಾಮಗಳು ಮೊಮ್ಮಕ್ಕಳೊಂದಿಗೆ ವೃದ್ಧರಿರುವ ವೃದ್ಧಾಶ್ರಮಗಳಾಗಿ ಬಿಟ್ಟಿವೆ.<br />ಸರಿಯಾದ ರಸ್ತೆಯನ್ನೂ ಕಾಣದ ಈ ಎರಡು ಹಳ್ಳಿಗಳ ಯುವಕರು, ಮಧ್ಯ ವಯಸ್ಕರು ಪ್ರತಿ ಬೇಸಿಗೆಯಂತೆಯೇ ಈ ಬಾರಿಯೂ ಊರು ಬಿಟ್ಟಿದ್ದಾರೆ. ಕೆಲವರು ಮನೆಯಲ್ಲಿನ ದನಗಳನ್ನು ಮೇವಿರುವ ಕಡೆಗೆ ಮೇಯಿಸಲು ಹೋಗಿಬಿಟ್ಟಿದ್ದಾರೆ. ಇನ್ನು ಕೆಲವರು ಗೋವಾದಲ್ಲಿ ಕೆಲಸ ಅರಸಿ ಗಂಟು ಮೂಟೆ ಕಟ್ಟಿ ತಿಂಗಳಾಗಿದೆ. ಈಗ ಈ ಎರಡೂ ಹಳ್ಳಿಗಳಲ್ಲಿ ಇರುವುದು ವೃದ್ಧರು, ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಾತ್ರ.<br />ಇಂತಹ ವಲಸೆ ತಡೆಯಬೇಕು. ಅವರಿರುವ ಊರಿನಲ್ಲೇ ಉದ್ಯೋಗ ದೊರಕಿಸಿಕೊಡಬೇಕು. ದುಡಿಯುವ ಕೈಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ ಎಂಬ ತತ್ವದೊಂದಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಈ ವಲಸೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಎರಡೂ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯ ನೋಂದಣಿಯಾಗಿದ್ದರೂ ಯಾರೂ ಆ ಯೋಜನೆಯ ಕೆಲಸಕ್ಕೆ ಹೋಗದೇ, ಊರು ಬಿಟ್ಟಿದ್ದಾರೆ.<br />ನಿತ್ಯದ ಹಾಲಿಗೆ ಎಂದು ಒಂದೆರಡು ಹಸುಗಳನ್ನು ಕೆಲವರು ಊರಲ್ಲೇ ಉಳಿಸಿಕೊಂಡಿದ್ದಾರೆ. ಎರಡೂ ಗ್ರಾಮದಲ್ಲಿ ಜನಸಂಖ್ಯೆಗಿಂತ ಮೂರು ಪಟ್ಟು ಹಸು -ಕರುಗಳಿವೆ. ಪಶುಸಂಗೋಪನೆಯೇ ಈ ಗ್ರಾಮದ ದೊಡ್ಡ ಉದ್ಯೋಗ. ಇವರ್ಯಾರು ಹಾಲು ಮಾರುವುದಿಲ್ಲ. ಹಾಲನ್ನು ಖೋವಾ ಮಾಡಿ, ಧಾರವಾಡದ ಸಿಹಿ ತಯಾರಕರಿಗೆ ಮಾರುತ್ತಾರೆ.<br />ಆರೋಗ್ಯ ಕೆಟ್ಟರೆ..<br />ಈ ಎರಡೂ ಗ್ರಾಮಗಳು ಧಾರವಾಡ ತಾಲೂಕಿನಲ್ಲಿದ್ದರೂ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಇವು ಧಾರವಾಡದಿಂದ ೧೭ ಕಿಮೀ ದೂರದಲ್ಲಿರುವ ಕಲಕೇರಿ ಗ್ರಾಮ ಪಂಚಾಯ್ತಿಗೆ ವ್ಯಾಪ್ತಿಯಲ್ಲಿವೆ. ಕಲಕೇರಿಯಿಂದ ಕಚ್ಚಾ ಮಣ್ಣಿನ ಹಳ್ಳಕೊಳ್ಳದ ರಸ್ತೆಯಲ್ಲಿ ೫.೫ ಕಿಮೀ ಸಾಗಿದರೆ ಹುಣಶೀಕುಮರಿ ಸಿಗುತ್ತದೆ. ಅಲ್ಲಿಂದ ಇನ್ನೂ ೨.೫ ಕಿಮೀ ಸಾಗಿದರೆ ಉಡವ ನಾಗಲಾವಿ ಗ್ರಾಮ ಸಿಗುತ್ತದೆ. ೪೦೦ ಜನಸಂಖ್ಯೆ ಇರುವ ಉಡವ ನಾಗಲಾವಿಗೆ ಹೋಲಿಸದರೆ ೬೦೦ ರಷ್ಟು ಜನಸಂಖ್ಯೆ ಇರುವ ಹುಣಶೀಕುಮರಿ ಸ್ವಲ್ಪ ಅಭಿವೃದ್ಧಿ ಕಂಡಿದೆ. ಅಂದರೆ ಹೆಂಚಿನ ಮನೆಗಳು ಹೆಚ್ಚಿವೆ ಅಷ್ಟೇ. ರಸ್ತೆಯಂತೂ ಎರಡೂ ಊರಿಗೂ ಇಲ್ಲ.<br />ಊರಲ್ಲಿ ಶಕ್ತರಾದ ಮಕ್ಕಳು ಇಲ್ಲದ ಹೊತ್ತಿನಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ, ದೇವರೆ ಗತಿ. ಕಾರಣ ಅವರನ್ನು ಆಸ್ಪತ್ರೆಗೆ ಒಯ್ಯಬೇಕು ಅಂದರೆ ಹೊತ್ತುಕೊಂಡೇ ಸಾಗಬೇಕು. ಒಬ್ಬಿಬ್ಬರ ಬಳಿ ಬೈಕ್ ಇದ್ದರೂ ಅದನ್ನು ಆ ಕಲ್ಲಿನ ಹಾದಿಯಲ್ಲಿ ಓಡಿಸುವುದೇ ಒಂದು ಸಾಹಸದ ಕೆಲಸ. ಬೈಕ್ ಓಡಿಸುವ ಮಕ್ಕಳು ಸದ್ಯ ದನ ಅಟ್ಟಿಕೊಂಡು ಊರು ಬಿಟ್ಟಿದ್ದಾರೆ.<br />ಯಾರಿಗೆ ಬೇಕ್ರಿ ಖಾತ್ರಿ..?<br />ಉದ್ಯೋಗ ಖಾತ್ರಿ ಯೋಜನೆಗೆ ನಾವೆಲ್ಲಾ ಸೇರಿವಿ. ದಿನಕ್ಕೆ ೮೨ ರೂಪಾಯಿ ಕೊಡ್ತಾರಂತೆ. ಅದೇ ಗೋವಾ, ಬೆಳಗಾವಿ, ಹುಬ್ಬಳ್ಯಾಗ ಹೋದ್ರೆ ೨೦೦ ರು.ವರೆಗೂ ಸಂಪಾದಿಸ್ತಾರೆ. ಅಲ್ಲದೆ, ಇಲ್ಲಿ ಏನ ಕೆಲಸ ಸಲಾಕೆ (ಗುದ್ದಲಿ)ಯಾಗ ರಸ್ತೆ ಅಗೆಯೋದು. ಮಣ್ಣಿನಲ್ಲಿ ರಸ್ತೆ ಮಾಡಿಕೋರಿ ಅಂತ ೧.೪೦ ಲಕ್ಷ ರು.ದ ಕಾಮಗಾರಿ ಹೇಳ್ಯಾರ. ಯಾರೂ ಆ ನೌಕರಿಗೆ ಹೋಗಿಲ್ಲ. ಹೋಗಾದೂ ಇಲ್ಲ. ಎಲ್ಲಾ ದನ ಹೊಡ್ಕಂಡು, ಕೆಲವರು ಗೋವಾಗೆ ಹೋಗ್ಯಾರ ಅಂತ ಅಳಲು ತೋಡಿಕೊಂಡವರು ಹುಣಶಿಕುಮರಿ ಗ್ರಾಪಂ ಮಾಜಿ ಸದಸ್ಯ ತುಕಾರಾಮ.<br />ಮಳೆಗಾಲಕ್ಕೆ ಬರೋದು..,<br />ನಮ್ಮ ಹುಡುಗರು ದೇವಗಿರಿ ಕಡೇಗೆ ದನ ಹೊಡ್ಕಂಡು ಹೋಗ್ಯಾರ. ನಮ್ಮ ಪೈಕಿ ಕೆಲವರು ಗೋವಾಗೂ ಹೋಗ್ಯಾರ. ಇದ ಇಲ್ಲಿ ಪ್ರತಿ ಬೇಸಿಗೆಗೂ ಕಾಯಂ ನಡೆಯೋದ್ರಿ. ಮಳೆಗಾಲ ಶುರುವಾದ ಕೂಡ್ಲೆ ಎಲ್ಲಾ ವಾಪಸ್ ಬರ್ತಾರೆ. ಉದ್ಯೋಗ ಕಾರ್ಡ್ ಕೊಟ್ಟಾರೆ, ಎಲ್ಲಾ ಮನೆಯಾಗೆ ಅದಾವು. ಅದೇನು ಮಾಡೋದ್ರಿ ಎಂದು ಪ್ರಶ್ನಿಸಿದವರು ಭೈರು.<br />ಉದ್ಯೋಗ ಖಾತರಿ ಯೋಜನೆ ಎಲ್ಲಿ ವಿಫಲವಾಗಿದೆ? ಏಕೆ ವಿಫಲವಾಗಿದೆ? ಹೇಗೆ ವಿಫಲವಾಗಿದೆ? ಎಂಬ ಪ್ರಶ್ನೆಗಳಿಗೆ ಈ ಊರುಗಳಲ್ಲಿ ಉತ್ತರ ಸಿಗುತ್ತದೆ.ಅವಿhttp://www.blogger.com/profile/07196818175613402260noreply@blogger.com1tag:blogger.com,1999:blog-6342319973848548604.post-8297428346958672292009-03-02T10:36:00.000-08:002009-03-02T10:42:48.702-08:00ಹೇಳುವುದು ಏನೋ ಉಳಿದು ಹೋಗಿದೆ............<a href="https://blogger.googleusercontent.com/img/b/R29vZ2xl/AVvXsEgn3n-05RYTN_ONwUIMEMfIXA8A4dBmrEijMKQrhQ9Yuo6NGFtCzF30T3dAphgug7VgG1KBgxFDVpsy5b1GP5IdkorKkbdUziuRkz2JS-W2dz_nNbr5WmVGHdMKh6Qzs3b0qGZnCOq9KwU/s1600-h/failure.jpg"><img id="BLOGGER_PHOTO_ID_5308662685929930818" style="DISPLAY: block; MARGIN: 0px auto 10px; WIDTH: 279px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEgn3n-05RYTN_ONwUIMEMfIXA8A4dBmrEijMKQrhQ9Yuo6NGFtCzF30T3dAphgug7VgG1KBgxFDVpsy5b1GP5IdkorKkbdUziuRkz2JS-W2dz_nNbr5WmVGHdMKh6Qzs3b0qGZnCOq9KwU/s400/failure.jpg" border="0" /></a><br /><div></div>ಅವಿhttp://www.blogger.com/profile/07196818175613402260noreply@blogger.com1tag:blogger.com,1999:blog-6342319973848548604.post-40348407493164127922009-02-18T20:36:00.000-08:002009-02-18T20:54:35.747-08:00ನನ್ನೊಬ್ಬನ ಬಿಟ್ಟು...,<a href="https://blogger.googleusercontent.com/img/b/R29vZ2xl/AVvXsEhqTZ_Kq4VD1MEjq1cZMl5ITiyU4pvACLDXhCQvE1x6b1ptP4hd2m_qmnegjsx3LnjAvqk2KD2ghI5XJQeGHmplnEufhkr2Bpo5jZE7PjL-QkzTkGfUq3R4-9ZWatdIABMgaoq-6SxKyXU/s1600-h/waiting.jpg"><img id="BLOGGER_PHOTO_ID_5304367271854412338" style="DISPLAY: block; MARGIN: 0px auto 10px; WIDTH: 376px; CURSOR: hand; HEIGHT: 272px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhqTZ_Kq4VD1MEjq1cZMl5ITiyU4pvACLDXhCQvE1x6b1ptP4hd2m_qmnegjsx3LnjAvqk2KD2ghI5XJQeGHmplnEufhkr2Bpo5jZE7PjL-QkzTkGfUq3R4-9ZWatdIABMgaoq-6SxKyXU/s400/waiting.jpg" border="0" /></a><br /><div><a href="https://blogger.googleusercontent.com/img/b/R29vZ2xl/AVvXsEiNF2idKvgvT2s-eqzj_3G85ZDM-xmQtbtrAPwBZ86qBrywywzVjUVIFbY4c130VBrgKl3GXDFYCDnT9r8_xuaeg9XrJkImLEiMdJHDhqVZz21Serz57q2eoDJEjVfk_KnI0I_4Wyywj9g/s1600-h/waiting.jpg"></a><br /><br /><div></div><br /><br /><br /><p>ಕಾಯೋದಿಲ್ಲ ಯಾರು ನಿನಗೆ ಸದಾ,</p><br /><br /><br /><p>ನನ್ನೊಬ್ಬನ ಬಿಟ್ಟು...,</p><br /><br /><br /><p>ನಿನ್ನ ಇರುವಿಕೆಯ ಮಧುರ ಭಾವದಲ್ಲೇ</p><br /><br /><br /><p>ಕಾದಿರುವೆ............</p><br /><br /><br /><p>ನೀ ಬರುವ ಹಾದಿಯಲ್ಲೇ ನಾನಿರುವೆ</p><br /><br /><br /><p>ಕಾಯೋದಿಲ್ಲ ಯಾರು ಮಳೆಗೆ ಸದಾ</p><br /><br /><br /><p>ಭುವಿಯ ಬಿಟ್ಟು</p><br /><br /><br /><p>ಕಾದಿರುವೆ ನಾ ಭುವಿಯಾಗಿ</p><br /><br /><br /><p>ಎಂದು ಬರುವೆ ನೀ ಮಳೆಯಾಗಿ.....?</p><br /><br /><br /><p>ಕಾಯೋದಿಲ್ಲ ಯಾರು ಸದಾ</p><br /><br /><br /><p><span class=""></span>ನನ್ನೊಬ್ಬನ ಬಿಟ್ಟು..... </p><br /><br /><br /><p>- ಡಾ. ವಿನಯ್ ಮಂಡ್ಯ </p><br /><br /><br /><p>(ಗುಳಿಗೆ, ಸೂಜಿ, ಕಾಯಿಲೆ ಅಂತ ಓದುತ್ತ, ಕೆಲಸ ಮಾಡುತ್ತ ಬ್ಯುಸಿ ಆಗಿರಬೇಕಾದ ಗೆಳಯ ವಿನಯ್ ಅವಳಿಗೆ ಕಾಯುತ್ತ ಕವಿಯಾಗಿದ್ದಾನೆ.)</p></div>ಅವಿhttp://www.blogger.com/profile/07196818175613402260noreply@blogger.com2tag:blogger.com,1999:blog-6342319973848548604.post-19296489318357841552009-02-15T07:57:00.000-08:002009-02-15T08:09:52.699-08:0059 ಪ್ರೇಮ ವಿವಾಹ ಮಾಡಿಸಿದ 'ಸಾಧನಾ'<a href="https://blogger.googleusercontent.com/img/b/R29vZ2xl/AVvXsEi1DY8oMv6zfH4etJv7az2sIQjmk6k8ua5mBGGdBiyNqAnI4s0WQisN0yGTEZnDmWBcomPA-f83ScMxKtH6kPZxJEn-TW0z-VGnn97bhD3cEHuTcx4Ejcf4gXFUsoDHJTwWNUL_-EA_eqM/s1600-h/13dwd01.jpg"><img id="BLOGGER_PHOTO_ID_5303055955139856274" style="FLOAT: left; MARGIN: 0px 10px 10px 0px; WIDTH: 264px; CURSOR: hand; HEIGHT: 400px" alt="" src="https://blogger.googleusercontent.com/img/b/R29vZ2xl/AVvXsEi1DY8oMv6zfH4etJv7az2sIQjmk6k8ua5mBGGdBiyNqAnI4s0WQisN0yGTEZnDmWBcomPA-f83ScMxKtH6kPZxJEn-TW0z-VGnn97bhD3cEHuTcx4Ejcf4gXFUsoDHJTwWNUL_-EA_eqM/s400/13dwd01.jpg" border="0" /></a><br /><div></div>ಪ್ರೀತಿಸಿದ ಹೃದಯಗಳನ್ನು ಬೇರ್ಪಡಿಸುವ ಮನೆಯವರ ಯತ್ನಕ್ಕೆ ಹೆದರಿ ಧಾರವಾಡದತ್ತ ಓಡಿ ಬರುವ ಜೋಡಿಗಳಿಗೆ ಇಲ್ಲಿನ ತೇಜಸ್ವಿನಿನಗರದ ಮನೆಯೊಂದು ತವರು ಮನೆಯಾಗುತ್ತದೆ.<br />ಹೀಗೆ ಓಡಿ ಬಂದ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸುವಾಗ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಕೂಡಲೇ ಅವರು ತಂದು ಬಿಟ್ಟದ್ದು ಇದೇ ಮನೆಗೆ. ಪ್ರೀತಿಯ ಹೆಸರಲ್ಲಿ ಗರ್ಭವತಿ ಮಾಡಿ ಹುಡುಗ ಕೈ ಕೊಟ್ಟಾಗಲೂ ಇಲ್ಲಿನವರಿಗೆ ನೆನಪಾಗುವುದು ಇದೇ ಮನೆಯೇ. ಕಳೆದ 8 ವರ್ಷಗಳಲ್ಲಿ ಹೀಗೆ ಬಂದ 59 ಜೋಡಿಗಳಿಗೆ ಮದುವೆ ಮಾಡಿಸಿದೆ ಈ ಮನೆ. ಇದರ ಹೆಸರು 'ಸಾಧನಾ' ಸ್ವಯಂ ಸೇವಾ ಸಂಸ್ಥೆ. ಇದು ಮನೆಯೂ ಹೌದು. 'ಸಾಧನಾ'ದ ಕಚೇರಿಯೂ ಹೌದು.<br />ಇಸೆಬೆಲ್ಲಾ ಝೇವಿಯರ್ ಪಾಟೀಲ್ ಎಂಬಾಕೆಯೇ ಇದರ ಮುಖ್ಯಸ್ಥೆ. ಪ್ರೇಮಿಗಳ ಪೈಕಿ ಹೆಣ್ಣು ಮಕ್ಕಳಿಗೆ ತಾಯಿಯಾಗಿ, ಹುಡುಗರಿಗೆ ಅತ್ತೆಯಾಗುವ ಈಕೆಯದೂ ಒಂದು ದುರಂತ ಪ್ರೇಮ ಕಥೆ ಇದೆ. <span class="">8ನೇ</span> ತರಗತಿಯಲ್ಲಿರುವಾಗಲೇ ತನ್ನ ಮೇಲೆ ನಡೆದ ದೌರ್ಜನ್ಯಗಳೇ ಈ ಕಾರ್ಯಕ್ಕೆ ಪ್ರೇರಣೆ. ತನ್ನ ಪ್ರೀತಿಯಂತೆ ಇನ್ನೊಬ್ಬರ ಪ್ರೀತಿಯು ಸಮಸ್ಯೆಗೆ ಸಿಲುಕಬಾರದು ಎಂಬ ಆಸೆ, ಪ್ರೇಮ ವಿವಾಹದಿಂದ ಜಾತಿಯ ಎಲ್ಲೆಗಳು ನಾಶವಾಗುತ್ತವೆ ಎಂಬ ಆಶಯದಿಂದ ಪ್ರೇಮ ವಿವಾಹಕ್ಕೆ ಪೌರೋಹಿತ್ಯ ವಹಿಸುತ್ತಾ, ಮಾನವ ಹಕ್ಕುಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ.<br />59ರಲ್ಲಿ..<br />59 ಮದುವೆಗಳ ಪೈಕಿ 26 ಜೋಡಿಗಳು ಮನೆಯವರಿಗೆ ಹೆದರಿ ಓಡಿ ಬಂದಾಗ ನಿಂತು ಮದುವೆ ಮಾಡಿಸಿದವು. 26ರ ಪೈಕಿ 23 ಜೋಡಿಗಳು ಸುಖಿ ಸಂಸಾರ ಸಾಗಿಸುತ್ತಿದ್ದಾರೆ. ಅಂತರ್ಜಾತಿ ವಿವಾಹಗಳೇ ಹೆಚ್ಚು. 3 ಕುಟುಂಬಗಳು ಮಾತ್ರ ಅತಿಯಾದ ಪ್ರೀತಿ, ಅನುಮಾನದಿಂದ, ಕೇವಲ ದೈಹಿಕ ಆಕರ್ಷಣೆಯಾದ್ದರಿಂದ ಒಡೆದ ಮನೆಯಾಗಿವೆ. ಸಾಧನಾ ಸಂಸ್ಥೆಗೂ ಮೊದಲು ತಾನು ಶಿಕ್ಷಕಿಯಾಗಿದ್ದಾಗ ಬೆಂಬಲಿಸಿ ಮಾಡಿಸಿದ ಪ್ರೇಮ ವಿವಾಹಗಳ ಸಂಖ್ಯೆ ಲೆಕ್ಕಕ್ಕಿಟ್ಟಿಲ್ಲ ಎಂದು ತಾವು ನಡೆದು ಬಂದ ಹಾದಿ, ಅನುಭವದ ಬಗ್ಗೆ ಇಸೆಬೆಲ್ಲಾ, ಮಾಹಿತಿ ನೀಡಿದರು.<br />ಉಳಿದ 33 ಮದುವೆಗಳು ಮಾತ್ರ ತೀವ್ರ ತರಹದ ಹೋರಾಟದಿಂದಲೇ ಮಾಡಿಸಿದವು. ಊರಿನಲ್ಲಿ ಹುಡುಗಿಯನ್ನು ನಂಬಿಸಿ, ಗರ್ಭವತಿ ಮಾಡಿದ ನಂತರ ಜಾತಿ, ಅಂತಸ್ತಿನ ನೆಪ ಹೇಳಿ ಕೈ ಕೊಡುತ್ತಿದ್ದ ವಂಚಕ ಪ್ರಕರಣಗಳ ಮದುವೆ ಅವು. ಕಾನೂನು ಪ್ರಕಾರ ಸಿಗಬೇಕಾದ ನ್ಯಾಯ ಒದಗಿಸಿದ ತೃಪ್ತಿ ಅಷ್ಟೇ ಇದರಿಂದ ಸಿಕ್ಕಿದ್ದು. ಈ ಜೋಡಿಗಳ ಪೈಕಿ ಸುಖಿ ಸಂಸಾರ ಕಾಣುತ್ತಿರುವುದು ಕೆಲವೇ ಕೆಲವು ಅಂತಾರೆ.<br />ಹೇಳಿಕೊಳ್ಳಲು..<br />ನಮ್ಮ ಎಲ್ಲಾ ಆಚರಣೆಯಂತೆಯೇ 'ಪ್ರೇಮಿಗಳ ದಿನ'ವೂ ಒಂದು. ಅದು ಅಗತ್ಯ ಕೂಡ. ಆಕೆ ಅಥವಾ ಆತನ ಮೇಲೆ ಆಸೆ, ಪ್ರೀತಿ ಹುಟ್ಟಿದ್ದರೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿರುತ್ತಾರೆ. ಪಿಸು ಮಾತಿನಲ್ಲಿ ಉಸುರಲೂ ಹೆದರುತ್ತಿರುತ್ತಾರೆ. ಕಡೇ ಪಕ್ಷ ಪ್ರೇಮಿಗಳ ದಿನವಾದರೂ ನೇರವಾಗಿ, ನಡುಗುತ್ತಲೋ, ಒಂದು ಸಣ್ಣ ಗಿಫ್ಟ್ ಮೂಲಕವೋ ತನ್ನ ಪ್ರೀತಿ ಹೇಳಿಕೊಳ್ಳುವ ಅವಕಾಶವಾಗುತ್ತದೆ. ಪ್ರೇಮಿಗಳ ದಿನ ತಪ್ಪಲ್ಲ. ನಡೀಬೇಕು ಎನ್ನೋದು ಇಸೆಬೆಲ್ಲಾ ಅವರ ವಾದ.<br />ಯಾವ ದಿನವಾದರೂ..,<br />ಆದರೆ, ಪ್ರೇಮಿಗಳ ದಿನದ ಮಹತ್ವ ಗೊತ್ತಿಲ್ಲದವರು ಮಾತ್ರ ಅದರ ಹೆಸರಲ್ಲಿ ಕಾಮಕೇಳಿ, ಕುಡಿತ, ಕುಣಿತ ಮಾಡುತ್ತಾರೆ. ಅವರನ್ನೇ ನೋಡಿ, ಅವರಷ್ಟೇ ಪ್ರೇಮಿಗಳು. ಅದೇ ಪ್ರೇಮಿಗಳ ದಿನ ಎಂದು ಭಾವಿಸಿ ಕೆಲವು ಸಂಘಟನೆಗಳು ವಿರೋಧದ ಕೂಗು ಎಬ್ಬಿಸಿವೆ. ಹೀಗೆ ಕುಡಿದು, ಕಾಮಕೇಳಿ ಆಡುವವರಿಗೆ ಅದು ಪ್ರೇಮಿಗಳ ದಿನವೇ ಆಗಬೇಕಿಲ್ಲ, ಹೊಸ ವರ್ಷದ ನೆಪದಲ್ಲೂ ಮಾಡುತ್ತಾರೆ. ಹುಟ್ಟಿದ ಹಬ್ಬಗಳಾದರೂ ಇವರಿಗೆ ಸಾಕು. ಅವರಿಂದಾಗಿ, ನಿಜವಾದ ಪ್ರೇಮಿಗಳಿಗೆ, ಮುಕ್ತವಾಗಿ ಹೇಳಿಕೊಳ್ಳಬಹುದಾದ ಅವಕಾಶವೂ ತಪ್ಪಿಸುವ ಕೆಲಸ ಆಗುವುದು ಬೇಡ. ಹೃದಯದ ಪಿಸು ಮಾತುಗಳು ಇಷ್ಟ ಪಟ್ಟ ಹೃದಯಕ್ಕೆ ಕೇಳಿಸುವ ಅವಕಾಶ ತಪ್ಪಿಸಬೇಡಿ ಎಂದೂ ಮನವಿ ಮಾಡುತ್ತಾರೆ.<br />ಕಾಮವಲ್ಲ..<br />ಪ್ರೀತಿ -ಪ್ರೇಮ ಎಂದರೆ ಬರಿಯ ಕಾಮವಲ್ಲ. ಕಾಮಕ್ಕಲ್ಲ. ಪ್ರೀತಿ ಎಂದರೆ ಅದೊಂದು ಪರಿಶುದ್ಧ ಸ್ನೇಹ. ಪ್ರೀತಿ ಆದ ಕೂಡಲೇ ಕಾಮಕ್ಕೆ ಇಳಿಯಬೇಡಿ. ಅದು ಪ್ರೀತಿಯ ಒಂದು ಭಾಗ ಅಷ್ಟೇ. ಇನ್ನು ಟೀನೇಜ್ ಜೋಡಿಗಳು ಸಾಕಷ್ಟು ಬರುತ್ತಾರೆ. ಅವರಿಗೆ ಕೌನ್ಸೆಲಿಂಗ್ ನಡೆಸಿ ಇದು ಪ್ರೀತಿ -ಪ್ರೇಮಕ್ಕೆ ಸಕಾಲವಲ್ಲ ಎಂದೂ ತಿಳುವಳಿಕೆ ನೀಡಿ ಕಳುಹಿಸುತ್ತೇವೆ. ಓಡಿ ಬಂದ ಕೂಡಲೇ ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಅದು ನಿಜವಾದ ಪ್ರೀತಿಯಾ ಎಂದು ಅರಿತೇ ಮದುವೆ ಮಾಡಿಸುತ್ತೇವೆ. ಕೆಲವರಿಗೆ ನಾವೇ ಕೆಲಸ ಕೊಡಿಸಿದ್ದೂ ಇದೆ. ಮನೆಯವರನ್ನೇ ಒಪ್ಪಿಸಿ ಮದುವೆ ಮಾಡಿಸಿದ ಅನುಭವವೂ ಇದೆ ಎಂದರು.<br />ನನ್ನ ಪ್ರೀತಿಯಂತಹ ದುರಂತ ಯಾರಿಗೂ ಆಗಬಾರದು. ನನ್ನ ಎಲ್ಲಾ ಹಿನ್ನೆಲೆ ಅರಿತು ನನ್ನ ಮದುವೆಯಾದ ಎಲ್.ಟಿ. ಪಾಟೀಲರು ಈ ಸಂಸ್ಥೆ ನಡೆಸಲು ನನ್ನ ಜೊತೆಗೆ ಬಂಬಲವಾಗಿ ನಿಂತಿದ್ದಾರೆ. ಪ್ರೀತಿಸಿದವರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪ್ರೀತಿ ನಿಜವಾಗಿದ್ದರೆ ಅದನ್ನು ಅರ್ಥ ಮಾಡಿಸಿ, ಆಗದಿದ್ದರೆ ಇಲ್ಲಿಗೆ ಬನ್ನಿ ನಾವು ನೆರವಾಗುತ್ತೇವೆ ಎಂದು ಇಸೆಬೆಲ್ಲಾ ಅಭಯ ನೀಡುತ್ತಾರೆ.<br />ಅವರ ವಿಳಾಸ -ಇಸೆಬೆಲ್ಲಾ ಝೇವಿಯರ್ ಪಾಟೀಲ, ಸಾಧನಾ ಸಂಸ್ಥೆ, ತೇಜಸ್ವಿನಿನಗರ, ಧಾರವಾಡ, ದೂರವಾಣಿ 0836 - 6551190 ಅಥವಾ ಮೊಬೈಲ್ -99452 57473 ಸಂಪರ್ಕಿಸಬಹುದು.ಅವಿhttp://www.blogger.com/profile/07196818175613402260noreply@blogger.com3tag:blogger.com,1999:blog-6342319973848548604.post-77556929412598475582009-01-30T09:33:00.000-08:002009-01-31T02:53:34.624-08:00ಸಮಸ್ಯೆಗಳ ಸುನಾಮಿ ಮಾನೋಮಿಯಲ್ಲಿ ಜಗಳದ ಸುದ್ದಿ...<a href="https://blogger.googleusercontent.com/img/b/R29vZ2xl/AVvXsEi3IQ5z9P1I90gjusOxa1Th7rt25GitC4HrR4Y_roeVtuAN_EpJhbpJJ8xwcbj-ie0inEUdeuY7aj2MVXx0rpoKeM8XM0h6oxxKlIbpWnyiSDEUDgWWh6T1i1Hsl3y7D68zYBUQmSyPA7Q/s1600-h/man1.JPG"><img id="BLOGGER_PHOTO_ID_5297141956946653986" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEi3IQ5z9P1I90gjusOxa1Th7rt25GitC4HrR4Y_roeVtuAN_EpJhbpJJ8xwcbj-ie0inEUdeuY7aj2MVXx0rpoKeM8XM0h6oxxKlIbpWnyiSDEUDgWWh6T1i1Hsl3y7D68zYBUQmSyPA7Q/s400/man1.JPG" border="0" /></a> ಸಮಸ್ಯೆಗಳಲ್ಲಿ ಹಳ್ಳಿ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಆದರೆ ಈ ಊರಿನಲ್ಲಿ ಭರ್ಜರಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಂತಿಲ್ಲ...?ಎಂಬಿತ್ಯಾದಿಯಾಗಿ ಕ್ಯಾಮೆರಾ ಮುಂದೆ ನಿಂತ ಟಿವಿ 9 ವರದಿಗಾರ ಮಿತ್ರ ರೆಹಮತ್ ಕಂಚಿಗಾರ ಅವರು ತಮ್ಮ ವಿಶೇಷ ವಿಶಿಷ್ಟ ಶೈಲಿಯಲ್ಲಿ ವರದಿ ಒಪ್ಪಿಸುತ್ತಿದ್ದರು.<br />ಅವರ ಒಂದು ಕೈ ಮೈಕ್ ಹಿಡಿದಿದ್ದರೆ ಮತ್ತೊಂದು ಕೈ ಪ್ಯಾಂಟು ನೀರಿನಲ್ಲಿ ತೋಯ್ದೀತು ಎಂದು ಪ್ಯಾಂಟು ಹಿಡಿದುಕೊಂಡಿದ್ದರು. ಅವರು ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ನಿಂತಿದ್ದರು.<br />ಅವರ ಎಡ ಬದಿಗೆ ಪ್ರತಿ ಮಳೆಗಾಲದಲ್ಲಿ ದ್ವೀಪವಾಗುವ, ರಸ್ತೆ ಇಲ್ಲದ ಸಮಸ್ಯೆಗಳ ಸುನಾಮಿಯಲ್ಲೇ ಇರುವ ಮಾನೋಮಿ?ಗ್ರಾಮ ಅಚ್ಚರಿಯಿಂದ ನೋಡುತಿತ್ತು. ಇನ್ನಾದರೂ ರಾಜಕಾರಣಿಗಳು ನಮ್ಮ ಸಮಸ್ಯೆಗೆ ಧಾವಿಸುವರೆ ಎಂದು ಆಸೆಯನ್ನು ಕಣ್ಣುಗಳಲ್ಲಿ ತುಂಬಿ ನಿಂತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಟಿವಿ ಛಾನಲ್ ವರದಿಗಾರರನ್ನು ತದೇಕ ಚಿತ್ತದಿಂದ ಗ್ರಾಮಸ್ಥರು ನೋಡುತ್ತಿದ್ದರು.<br />ಆರು ಕಿಮೀ ನಡೆಯಬೇಕು..,<br />ಅದು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅರಬಾವಿ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ. ಆ ಗ್ರಾಮಕ್ಕೆ ನೀವು ಹೋಗಬೇಕು ಅಂದರೆ ಬರೋಬ್ಬರಿ 6 ಕಿಮೀ ನಡೆಯಬೇಕು. ಮೂರು ಕಿಮೀ ನಡೆಯಲು ಕಚ್ಚಾ ಹಾದಿ ನಿಮ್ಮ ನೆರವಿಗೆ ಬಂದರೆ, ಇನ್ನು 3 ಕಿಮೀ ಸಾಗಲು ನೀವು ಹೊಲದ ಬದಿಯ ಕಾಲು ಹಾದಿಯನ್ನೇ ಆಶ್ರಯಿಸಬೇಕು. ಇಷ್ಟೆಲ್ಲಾ ಸಾಗಿ ಬಂದ ಮೇಲೆ ಹೊಳೆಯಂತಹ ಹಳ್ಳ ನಿಮ್ಮನ್ನು ಅಡ್ಡಗಟ್ಟುತ್ತದೆ. ಆ ಹೊಳೆಯನ್ನು ದಾಟಿದರೆ ಊರು ಸಿಗುತ್ತದೆ. ಮಳೆಗಾಲದಲ್ಲಿ ಈ ಹಳ್ಳ ನಾಲ್ಕು ಆಳು ಎತ್ತರಕ್ಕೆ ಹರಿಯಲು ತೊಡಗುತ್ತದೆ. ಆಗ ಈ ಊರು ಅಕ್ಷರಶಃ ದ್ವೀಪವಾಗುತ್ತದೆ. ಸರಿ ಸುಮಾರು ಒಂದೂವರೆಯಿಂದ ಎರಡು ತಿಂಗಳು ಇಲ್ಲಿನವರಿಗೆ ಹೊರಗಿನ ಸಂಪರ್ಕ ಕಟ್ ಆಗುತ್ತದೆ. ಈ ಊರಿನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬರಲಾಗುವುದಿಲ್ಲ. ಹೀಗಾಗಿ ಈ ಶಾಲೆಗೆ ಅಘೋಷಿತ ರಜೆ. ಇನ್ನು ಊರ ಹೊರಗೆ ಶಾಲೆ ಕಾಲೇಜಿಗೆ ಹೋಗುವ ಹುಡುಗರಿಗೂ ರಜೆ. ಇದರಿಂದಾಗಿಯೇ ಈ ಊರಿನಲ್ಲಿ ಹೆಚ್ಚು ಓದಿದವರು ಇಲ್ಲ.<br />ಇಷ್ಟೆಲ್ಲಾ ಸಮಸ್ಯೆ ಇರುವ ಈ ಊರಿನಲ್ಲಿ 400 ಮತಗಳಿವೆ. ಸರಿಸುಮಾರು 1200ರಷ್ಟು ಜನಸಂಖ್ಯೆ ಇದೆ. ಆದರೂ ಇಲ್ಲಿಗೆ ವೋಟು ಕೇಳಲು ಅಭ್ಯರ್ಥಿ ಬರುವುದಿಲ್ಲ. ಅವನ ಬಂಟರು ಬಂದು ಆಶ್ವಾಸನೆಯ ಮಳೆ ಸುರಿಸಿ, ಮತ ಯಾಚಿಸಿ ಹೋಗುತ್ತಾರೆ. ಅದನ್ನೇ ನಂಬಿದಂತೆ ಮಾಡಿ ಇವರು ವೋಟು ಹಾಕುತ್ತಾರೆ.<br />ಕೈ ತಪ್ಪಿತ್ತು..<br />ಈ ಗ್ರಾಮದ ಸಮಸ್ಯೆ, ಪಡಿಪಾಟಲನ್ನು ನಾನು ಅರಬಾವಿ ಕ್ಷೇತ್ರಕ್ಕೆ ಹೋಗುವ ಮುನ್ನಾ ದಿನವೇ ನಮ್ಮ ಬೆಳಗಾವಿಯ ಹಿರಿಯ ವರದಿಗಾರ ಎಂ.ಕೆ. ಹೆಗಡೆ ವಿಶೇಷ ವರದಿ ಬರೆದಿದ್ದರು. ನಾನು ಹೋಗಿ ಈ ಸುದ್ದಿ ನೋಡಿ, ನನ್ನ ಕೈಯಿಂದ ತಪ್ಪಿತಲ್ಲ. ವಾಪಸ್ ಹೋಗುವುದರೊಳಗೆ ಆ ಊರಿಗೆ ಹೋಗಿ ಬರಬೇಕು. ಎಂದುಕೊಂಡಿದೆ. ನನಗಿಂತ ಮುಂಚಿತವಾಗಿ ಹೋಗಿದ್ದರೂ ಆ ಸುದ್ದಿ ಮೊದಲು ತನಗೆ ಸಿಗಲಿಲ್ಲವಲ್ಲ ಎಂದು ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ ಕೈ ಕೈ ಹಿಸುಕಿಕೊಂಡಿದ್ದರು. ತಾವೂ ಅಲ್ಲಿಗೆ ಹೋಗು ಬರುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ, ಸುದ್ದಿಯ ಒತ್ತಡಗಳಿಂದಾಗಿ ತಾಸು ಗಟ್ಟಲೆ ನಡೆದು ಹೋಗಿ ಸುದ್ದಿ ಮಾಡುವ ಸಮಯ ಯಾರಿಗೂ ಸಿಕ್ಕಿರಲಿಲ್ಲ.<br />ಜಗಳ ಎಂದೂ...<br />ಅರಬಾವಿ ಉಪ ಚುನಾವಣೆ ದಿನ ಇಂತಿಪ್ಪ ಮಾನೋಮಿ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಅಧಿಕಾರಿಗಳು ಪಕ್ಷವೊಂದರ ಪರ ಮತ ಹಾಕುವಂತೆ ಹೇಳುತ್ತಿದ್ದರು. ಇದರಿಂದಾಗಿ ಜಗಳ ಶುರುವಾಗಿ ಮತದಾನ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಸುದ್ದಿಗಾರರಿಗೆ ದೊರೆಯಿತು. ಈ ಜಗಳದ ಸುದ್ದಿಗಾಗಿ ಟಿವಿ೯ನೇ ರೆಹಮತ್ ಕಂಚಿಗಾರ, ಅವರ ಕ್ಯಾಮೆರಾ ಕಣ್ಣು ಸ್ಟೀಫನ್, ಈಟಿವಿಯ ಗುರುಲಿಂಗಸ್ವಾಮಿ, ರಾಕೇಶ್, ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ, ಝೀ ಟಿವಿಯ ನಾಗರಾಜ್ ಕಿರಣಗಿ, ನಮ್ಮೆಲ್ಲರ ಪಾಲಿನ ಗೈಡ್ ಮುನ್ನಾ ಬಾಗವಾನ್ ಜೊತೆಯಲ್ಲಿ ಮಾನೋಮಿಗೆ ಹೋದೆವು.<br />ಆ ಊರಿಗೆ ಮಾಧ್ಯಮ ತಂಡವು ಕಾಲಿಡುತ್ತಿದ್ದಂತೆ ಆ ಊರಿನ ಮಂದಿ ರಾಜಕೀಯ ಜಗಳ ಮರೆತರು. (ರಾಜಕಾರಣಿಗಳು ಬಂದಾಗಲೂ ಗ್ರಾಮಸ್ಥರು ಹೀಗೆ ವರ್ತಿಸಿದರೆ ಚೆನ್ನಾಗಿರುತ್ತೆ.) ಅದು ಸಣ್ಣ ಜಗಳ ಬಿಡಿ. ಈ ವೋಟಿಂಗು ಶುರು ಆಗ್ಯದ. ನಮ್ಮೂರು ಸಮಸ್ಯೆ ಹಿಂಗಿಂಗ ಅದ ಎಂದು ಅಲವತ್ತುಕೊಳ್ಳಲು ತೊಡಗಿದರು. ಎಲ್ಲವೂ ಕ್ಯಾಮೆರಾಗಳ ಕಣ್ಣು ತುಂಬಿಕೊಳ್ಳ ತೊಡಗಿತು. ಆ ಊರಿನ ಸಮಸ್ಯೆ ಎಲ್ಲವೂ ದಾಖಲಾಯಿತು. ಅಲ್ಲಿಗೆ ನಮ್ಮಂತೆಯೇ ಚುನಾವಣಾ ಕರ್ತವ್ಯಕ್ಕಾಗಿ ನಮ್ಮ ಧಾರವಾಡದ ಪಿಎಸೈ ಒಬ್ಬರನ್ನು ಹಾಕಿದ್ದರು. ಅವರು ಊರಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ, ರಾಜಕೀಯ ಬಿಡಿ ಅಭಿವೃದ್ಧಿ ಕೇಳಿ ಎಂಬ ಕಿವಿಮಾತನ್ನು ಗ್ರಾಮಸ್ಥರಿಗೆ ಹೇಳುತ್ತಿದ್ದರು. ಎಲ್ಲವನ್ನೂ ಕೇಳಿಕೊಂಡಂತೆ ಗ್ರಾಮಸ್ಥರು ಮಾಡಿದರು. ಆದರೆ, ವಾಪಸ್ ನಾವು ಹೋಗುವಾಗ ದಾರಿ ಜೊತೆಗೆ ಸಿಕ್ಕ ಮಹಿಳೆ ಪಾರವ್ವ, ಹೇಳಿದ್ದು - ಎಲ್ಲಾ ನಮ್ಮೂರಿನವರದೇ ತಪ್ಪು. ರಸ್ತೆ ಮಾಡಿಸಿಕೊಡಿ ಎಂದು ಎಲ್ಲಾ ಒಗ್ಗಟ್ಟಾಗಿ ಕೇಳದ್ರ ಆಗುತ್ತೆ. ಆ ಪಾರ್ಟಿ, ಈ ಪಾರ್ಟಿ ಮಾಡಿಕೊಂಡು ಏನೂ ಆಗದಂಗೆ ಆಗೈತಿ. ರಸ್ತೆಗೆ ಜಾಗ ಬಿಡಿಸೋದು ಕಷ್ಟ ಆಗೈತೆ. ಈ ಕಷ್ಟ ಎಲ್ಲಾ ಗೆದ್ದವರೆಗೆ ಯಾಕೆ ಬೇಕು? ಎಂಬ ಪ್ರಶ್ನೆ, ವಿಷಾದವನ್ನು ವ್ಯಕ್ತಪಡಿಸಿ ಹಳ್ಳ ದಾಟಲಾಗದೆ ಸತ್ತ ಗರ್ಭಿಣಿಯರು, ಅಂಗವಿಕಲರ ಕಥೆಗಳನ್ನು ಹೇಳಿದರು. ಎಲ್ಲವೂ ಎಲ್ಲದರಲ್ಲೂ ಪ್ರಸಾರವಾಯಿತು. ಆದರೆ, ಆ ಹಳ್ಳಿಯತ್ತ ಚುನಾವಣೆ ನಂತರ ಗೆದ್ದವರು ಹೋಗಿಲ್ಲ, ಸೋತವರು ಹೋಗಿಲ್ಲ. ವೋಟು ಕೇಳಾಕೆ ಅವರು ಹೋಗಿರಲಿಲ್ಲ.<br />ಪಂಚಿಂಗ್ ಪಿಟಿಸಿ ಕೊಡುವ ರೆಹಮತ್ ಹೇಳುತ್ತಿದ್ದ - ಹಳ್ಳಿಗಳಲ್ಲಿ ಸಮಸ್ಯೆ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ...............ಅಭಿವೃದ್ಧಿಯ ಪಂಚಮಿ ಈ ಮಾನೋಮಿಗೆ ಯಾವಾಗ ಬರುತ್ತೋ ಎಂಬ ಮಾತು ಮಾತ್ರ ಈಗಲೂ ನೆನಪಾಗುತ್ತಿದೆ...,<br /><div></div>ಅವಿhttp://www.blogger.com/profile/07196818175613402260noreply@blogger.com4tag:blogger.com,1999:blog-6342319973848548604.post-25121534439796523612009-01-30T09:12:00.000-08:002009-01-30T09:17:33.581-08:00ಮಾನೋಮಿ ಚಿತ್ರಗಳು...,<a href="https://blogger.googleusercontent.com/img/b/R29vZ2xl/AVvXsEhl_BGJKu1-EkgRykulX7xToX7oNM2Bu5K-yNgujOI6OADIVx6XdGQn8ul-MUj3rxdUpJOpKLxbtKiLWGW_r6dHNcYIHQvvx1PLBYnmywVG-6bGOfE5Rh2GVj55RMGGyY8DTSQHJQ7H9h8/s1600-h/man6.JPG"><img id="BLOGGER_PHOTO_ID_5297137083968471490" style="DISPLAY: block; MARGIN: 0px auto 10px; WIDTH: 300px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhl_BGJKu1-EkgRykulX7xToX7oNM2Bu5K-yNgujOI6OADIVx6XdGQn8ul-MUj3rxdUpJOpKLxbtKiLWGW_r6dHNcYIHQvvx1PLBYnmywVG-6bGOfE5Rh2GVj55RMGGyY8DTSQHJQ7H9h8/s400/man6.JPG" border="0" /></a><br /><div><a href="https://blogger.googleusercontent.com/img/b/R29vZ2xl/AVvXsEjxadni9K27zaKMkLXQCu2gLzysp00LH44vYPthKbfFMKWLjyo_G9EhGIWgqf90IpYJCHWM3V9006YVi77ukvJqNw6Pdvzc4VowzGHi9jNGwrmlYHCzGmAS8VBGSx1UF-CzhUGilXDJdMg/s1600-h/man5.JPG"><img id="BLOGGER_PHOTO_ID_5297136891986202914" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjxadni9K27zaKMkLXQCu2gLzysp00LH44vYPthKbfFMKWLjyo_G9EhGIWgqf90IpYJCHWM3V9006YVi77ukvJqNw6Pdvzc4VowzGHi9jNGwrmlYHCzGmAS8VBGSx1UF-CzhUGilXDJdMg/s400/man5.JPG" border="0" /></a><br /><br /><div><a href="https://blogger.googleusercontent.com/img/b/R29vZ2xl/AVvXsEjCDJbPEytjHUQUP9dUVD-BBO9uyyI3rTtvw2LjxC0A572cYUdEV-s67gtjeAkKLPhgvbvORxW_wboE-3t16H_kOLgyNwZZLvaCCo4fdt0g8N5y7cuheTWGWeTc_JvMRdoqJs7fumrynSY/s1600-h/man4.JPG"><img id="BLOGGER_PHOTO_ID_5297136319535712034" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjCDJbPEytjHUQUP9dUVD-BBO9uyyI3rTtvw2LjxC0A572cYUdEV-s67gtjeAkKLPhgvbvORxW_wboE-3t16H_kOLgyNwZZLvaCCo4fdt0g8N5y7cuheTWGWeTc_JvMRdoqJs7fumrynSY/s400/man4.JPG" border="0" /></a><br /><br /><br /><div><a href="https://blogger.googleusercontent.com/img/b/R29vZ2xl/AVvXsEjRxDpH4O8VYG1cQEnn1hLDgJefB5BAfdAAVK8kG3xjk8zCWlubjvZqyczv4dLxUITX8ZXfVnpBzGvky86Zwqy0m92x1abYN-Xj91-ePHxwG9fIsKCbttkAK3Z9J10Ii9rU538cL_EA0ME/s1600-h/man3.JPG"><img id="BLOGGER_PHOTO_ID_5297136202053240642" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjRxDpH4O8VYG1cQEnn1hLDgJefB5BAfdAAVK8kG3xjk8zCWlubjvZqyczv4dLxUITX8ZXfVnpBzGvky86Zwqy0m92x1abYN-Xj91-ePHxwG9fIsKCbttkAK3Z9J10Ii9rU538cL_EA0ME/s400/man3.JPG" border="0" /></a><br /><br /><br /><br /><div><a href="https://blogger.googleusercontent.com/img/b/R29vZ2xl/AVvXsEjCtRKwWXyCaSJRAr5iC-tmyeRVMGvdxSCvEhZnmGS7ZJglO7Q1P5Pa2XJhy8gb0goQaPIEhFez0HUr9-AaWnlrOAvuX9aBNM4FQRlu6yK_Vli642-gzCLUR5ox0z6kwGg8Ga0DMO22ayE/s1600-h/man2.JPG"><img id="BLOGGER_PHOTO_ID_5297136101435772578" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 300px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjCtRKwWXyCaSJRAr5iC-tmyeRVMGvdxSCvEhZnmGS7ZJglO7Q1P5Pa2XJhy8gb0goQaPIEhFez0HUr9-AaWnlrOAvuX9aBNM4FQRlu6yK_Vli642-gzCLUR5ox0z6kwGg8Ga0DMO22ayE/s400/man2.JPG" border="0" /></a><br /><br /><br /><br /><br /><div></div></div></div></div></div>ಅವಿhttp://www.blogger.com/profile/07196818175613402260noreply@blogger.com1tag:blogger.com,1999:blog-6342319973848548604.post-88074498893647557602009-01-13T10:38:00.000-08:002009-01-13T10:46:11.570-08:00ಆ ಮನೆಯಲ್ಲೇ ಎಲ್ಲರ ಫಸ್ಟ್ ನೈಟ್ ನಡೆಯುತಿತ್ತು...!<a href="https://blogger.googleusercontent.com/img/b/R29vZ2xl/AVvXsEjQH3hIb_EHDXxV0p-eaSppQUDGBTc3rs_SRAlffHFCfRp_llmhd_g7h6uWhjQJSOfTdM0w6FxukRbtq0pfYFUDr0p0_qd3yRf2pN6LwFutqhxBwzhPC5vU_1uQYfjX0z-XkQhd2Ws19d0/s1600-h/large_lemasque.jpg"><img id="BLOGGER_PHOTO_ID_5290851453555973010" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 265px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjQH3hIb_EHDXxV0p-eaSppQUDGBTc3rs_SRAlffHFCfRp_llmhd_g7h6uWhjQJSOfTdM0w6FxukRbtq0pfYFUDr0p0_qd3yRf2pN6LwFutqhxBwzhPC5vU_1uQYfjX0z-XkQhd2Ws19d0/s400/large_lemasque.jpg" border="0" /></a><br /><div></div>ಘಟಪ್ರಭ ನೀರಿನ ನಾಲೆ ಅಲ್ಲೇ ಮಗುಲಲ್ಲೇ ಹರಿಯುತಿತ್ತು. ಹೆಣ್ಣು ಮಕ್ಕಳು ಯಾವುದರ ಪರಿವೇ ಇಲ್ಲದೆ ಬಟ್ಟೆ ತೊಳೆಯುತ್ತಿದ್ದರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವವರಿಗೂ ಯಾವುದೇ ಅರಿವಿರಲಿಲ್ಲ. ಅಂತಹ ಹೊತ್ತಿನಲ್ಲೇ ನಮ್ಮ ಕಾರು ಅಲ್ಲಿಗೆ ಪ್ರವೇಶಿಸಿತು. ಪ್ರವೇಶದಲ್ಲೇ ಧೂಳು ಹೊದ್ದುಕೊಂಡಂತೆ ಇದ್ದ ಆ ಮನೆಯತ್ತಲೇ ನನ್ನ ದೃಷ್ಟಿ ನೇರವಾಗಿ ಬಿತ್ತು.<br />ನೀವು ಅಷ್ಟೇ ಗೋಕಾಕದಿಂದ ಕೊಟ್ಟೂರು ಬಸವೇಶ್ವರ ಸನ್ನಿಧಾನ ಇರುವ ಅರಬಾವಿಗೆ ಹೋದರೆ ಮೊದಲು ಸ್ವಾಗತಿಸುವುದೇ ಆ ಮನೆ. ಛೇ ಛೇ ಅದನ್ನು ಮನೆ ಎನ್ನುವುದಕ್ಕಿಂತ ಹಳೆಯ ಬಂಗಲೆ ಎನ್ನಲು ಅಡ್ಡಿ ಇಲ್ಲ. ಆ ಭಾರಿ ಮನೆಯತ್ತಲೇ ನನ್ನ ನೋಟ ನೆಟ್ಟಿತ್ತು. ಏನಿದು ಮನೆಯಾ? ಅರಮನೆಯಾ? ಕಾರು ನಿಲ್ಲಿಸಿ ಫೋಟೋ ತೆಗೆಯುವ ಎಂದು ನಾನು ಮಾತು ಆರಂಭಿಸುವ ಮುನ್ನವೇ ಗೆಳೆಯ ಮುನ್ನಾ ಮಾತನಾಡಲು ಶುರು ಮಾಡಿದ್ದರು.<br />ಒಂದು ಕಾಲದಲ್ಲಿ ಇದೇ ಮನೆಯಲ್ಲೇ ಸುತ್ತಲ ಹತ್ತು ಹಳ್ಳಿಯ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತಿತ್ತು ಎಂದರು.<br />ಓಹೋ..ಓಹೋ.. ಅಂತ ವಿಶೇಷ ಏನ್ ಗುರುವೇ ಈ ಮನೆಯಲ್ಲಿ, ನಿಲ್ಲಿಸು ಈಗ ಡೇನಲ್ಲಿ ಏನು ನಡೆಯುತ್ತೆ ನೋಡೋಣ ಅಂದೆ ಗೇಲಿಯಿಂದ.<br />ಕಾರು ನಿಲ್ಲಿಸಬೇಡಿ. ನಡೆಯಿರಿ. ಹತ್ತೂ ಊರಿನ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತ್ತಿದ್ದದ್ದು ಇಲ್ಲೇ. ಆದರೆ, ಎಲ್ಲಾ ಹೆಣ್ಣು ಮಕ್ಕಳ ಜೊತೆ ಮಲಗುತ್ತಿದ್ದದ್ದು ಮಾತ್ರ ಒಬ್ಬನೇ. ಅವನೇ ಸತ್ಯಪ್ಪ ವಡ್ಡರ ಎಂದು ಪ್ರಥಮ ರಾತ್ರಿಗಳ ಕಥೆಯ ಹಾಳೆಗಳು ತಿರುಗತೊಡಗಿದವು.<br />ಅದು ಸುಮಾರು 1935 - 1960ರ ನಡುವೆ ನಡೆದ ದರ್ಬಾರಿನ ದಿನಗಳು. ಈ ಸತ್ಯಪ್ಪ ವಡ್ಡರ ಶ್ರೀಮಂತನೂ ಹೌದು, ದೊಡ್ಡ ಪಾಳೇಗಾರ. ಈಗಿನ ಅರ್ಥದಲ್ಲಿ ಹೇಳಬೇಕು ಅಂದರೆ ರೌಡಿ. ಗೂಂಡಾ ಆಗಿದ್ದ. ಅರಬಾವಿಯಿಂದ ಜಮಖಂಡಿಯವರೆಗೂ ಎಲ್ಲೂ ತಪ್ಪದಂತೆ ಹೊಲವಿತ್ತು ಸತ್ಯಪ್ಪನಿಗೆ ಎಂದು ಹೇಳುತ್ತಾರೆ. ಸುತ್ತಲ ಯಾವುದೇ ಹಳ್ಳಿಯಲ್ಲಿ ಮದುವೆಯಾದರೂ ಆ ಹೆಣ್ಣು ಮಗಳ ಮೊದಲ ರಾತ್ರಿ ಮಾತ್ರ ಸತ್ಯಪ್ಪ ವಡ್ಡರ ಜೊತೆಯೇ ಆಗಬೇಕಿತ್ತು. ಇಲ್ಲವೇ ಜೀವ ಕಳೆದುಕೊಳ್ಳಬೇಕಿತ್ತು.<br />ಅದೇ ಕಟ್ಟಪ್ಪಣೆಯನ್ನು ತನ್ನ ಹಣಕಾಸಿನ ಲೆಕ್ಕ ನೋಡಿಕೊಳ್ಳುತ್ತಿದ್ದಾತನ ಮಗಳಿಗೂ ಅನ್ವಯಿಸಿದ. ಕೈ ಕೈ ಮುಗಿದು ಕಾಲಿಗೆ ಬಿದ್ದರೂ ಸತ್ಯಪ್ಪನ ಆಸೆ ಮಾತ್ರ ಕರಗಲಿಲ್ಲ. ಲೆಕ್ಕದವನ ಮಗಳೊಂದಿಗೆ ಮಲಗಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿಬಿಟ್ಟ. ಬಡಪಾಯಿ ಲೆಕ್ಕದವ ಸತ್ಯಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದು ದೂರದ ಮಾತಾಗಿತ್ತು. ಆಗ, ಬ್ರಿಟೀಷರು ಆದಾಯ ತೆರಿಗೆಗಾಗಿ ತಪಾಸಣೆ ನಡೆಸ ತೊಡಗಿದರು. ಗುಟ್ಟಾಗಿ ಸತ್ಯಪ್ಪನ ಕಳ್ಳಲೆಕ್ಕದ ಮಾಹಿತಿ, ಅವಿತಿಟ್ಟ ಸಂಪತ್ತಿನ ಮಾಹಿತಿಯನ್ನು ಬ್ರಿಟೀಷರಿಗೆ ಮುಟ್ಟಿಸಿದ. ಬ್ರಿಟೀಷರು ಎಲ್ಲವನ್ನೂ ಜಫ್ತು ಮಾಡಿಕೊಂಡರು.<br />ಎಲ್ಲಾ ಗೂಂಡಾಗಿರಿಯ ಮೊದಲ ಶಕ್ತಿಯಾದ ಸಂಪತ್ತು ಅವನಿಂದ ದೂರಾಗಲು ತೊಡಗಿತ್ತು. ಅವನ ದರ್ಪವೂ ನಿಧನವಾಗಿ ಕ್ಷೀಣಿಸತೊಡಗಿತು. ಅಷ್ಟರಲ್ಲಿ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಅನೇಕ ಬದಲಾವಣೆಗಳ ಗಾಳಿಗೆ ಗೋಕಾಕ ತಾಲೂಕು ಮೈ ಒಡ್ಡಿಕೊಂಡಿತು. ಆದರೆ, ವಯಸ್ಸಾಗುತ್ತಿದ್ದ ಸತ್ಯಪ್ಪನಿಗೆ ಮತ್ತಷ್ಟು ಹೆಣ್ಣು ಚಪಲ ಹೆಚ್ಚಾಯಿತು. ಮೊದಲಿನಂತೆ ಅಲ್ಲವಾದರೂ ಹೆದರುವವರನ್ನು ಹೆದರಿಸಿ ಚಪಲ ತೀರಿಸಿಕೊಳ್ಳುತ್ತಿದ್ದ. ಸತ್ಯಪ್ಪನ ತೆವಲಿಗೆ ಜೀವ ಕಳೆದುಕೊಂಡಕೆಯ ಸಾವಿನ ಪ್ರಕರಣದ ತನಿಖೆ ಖಡಕ್ ಅಧಿಕಾರಿಗಳು ಮುಂದಾದರು. ಆಗ ಸತ್ಯಪ್ಪನ ಮನೆ ಮೇಲೆ ದಾಳಿ ನಡೆಸಿದರು. ಅವನ ಮನೆ ಹಿಂದೆ ತೆಗ್ಗು ತೆಗೆಯಲು ತೊಡಗಿದರು. ಸುಮಾರು ೨ ಅಡಿಯಷ್ಟು ಆಳ ತೆಗೆಯುತ್ತಿದ್ದಂತೆ ಮೊದಲು ಚಿಮ್ಮಿದ್ದು ತಲೆಬುರುಡೆ. ಹಾಗೆ ಅಗೆಯುತ್ತಾ ಹೋಗುತ್ತಿದ್ದಂತೆ ತಲೆಬುರುಡೆ, ಮೂಳೆಗಳು ಎಷ್ಟು ಎಂಬುದನ್ನು ಲೆಕ್ಕ ಇಟ್ಟವರಾರು ಈಗ ಉಳಿದಿಲ್ಲವಂತೆ. ಅದಾದ ನಂತರ ಸತ್ಯಪ್ಪನ ಅವನತಿ ಆರಂಭವಾಯಿತಂತೆ. ಕೊನೆಗೆ ನಾನಾ ಕಾಯಿಲೆಗಳು ಅಮರಿಕೊಂಡು ಚಿಂತಾಜನಕ ಸಾವು ಕಂಡನಂತೆ. ಆತನ ಅಧಿಕೃತ ಪತ್ನಿಗೆ ಹುಟ್ಟಿದ ಮಕ್ಕಳ ಮಕ್ಕಳು ಈಗ ಆ ಬಂಗಲೆಯಲ್ಲಿ ಇದ್ದಾರೆ. ಆ ಬಂಗಲೆ ಮೇಲಿನ ಧೂಳು ನೋಡಿದರೆ ತಾತನ ಅಬ್ಬರ ಯಾವುದೂ ಆ ಮನೆ, ಮನದಲ್ಲಿ ಉಳಿದಿಲ್ಲ. ಸತ್ಯಪ್ಪ ವಡ್ಡರ ಎಂದರೆ ನಡಗುತ್ತಿದ್ದ ಗೋಕಾಕ ತಾಲೂಕು ಈಗ ಈ ಮನೆ ಕಡೆಗೆ ಅಸಹ್ಯದಿಂದ ನೋಡುತ್ತಾ ತಮಗೆ ತೋಚಿದಂತೆ ಕಥೆ ಹಳಲು ಶುರುವಿಡುತ್ತಾರೆ. ಆ ಮನೆಯಲ್ಲಿ ಇರುವವರನ್ನು ಕರುಣೆಯಿಂದ ನೋಡುತ್ತಾರೆ. ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುತ್ತಿದೆ ಎಂಬುದು ಅರಬಾವಿ ಮಠದ ಪಕ್ಕದ ಗುಡಿಸಲು ಕ್ಯಾಂಟೀನ್ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದ ಹಿರಿಯರೊಬ್ಬರ ವಾದವಾಗಿತ್ತು.<br />ಎಲ್ಲಾ ಅನ್ಯಾಯ, ಅಕ್ರಮ ಎಸಗಿದವರೇ ಸುಖದಿಂದಲೇ ಜೀವಿಸುತ್ತಾ, ಜೀವ ಬಿಟ್ಟ ಅನೇಕ ಉದಾಹರಣೆಗಳಿವೆ. ಇನ್ನು ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುವುದೇ ಎಂಬ ನನ್ನ ನಖರ ಪ್ರಶ್ನೆ ತುಟಿಗೆ ಬಂತೇ ಹೊರತು ಶಬ್ದವಾಗಿ ಹೊರ ಹೊಮ್ಮಲಿಲ್ಲ.<br />ಗೋಕಾಕ ತಾಲೂಕಿಗೆ ಕುಟುಂಬ ರಾಜಕಾರಣ, ಗೂಂಡಾಗಿರಿ ಇತ್ತೀಚಿಗೆ ಅಂಟಿಕೊಂಡ ರೋಗವಲ್ಲ. ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಜಮೀನುದಾರಿಕೆ, ಪಾಳುದಾರಿಕೆಯ ಗಟ್ಟಿ ಬೇರಿದೆ ಎಂಬುದು ಅರ್ಥವಾಯಿತು. ಆಮೇಲೆ ಆಧುನಿಕ ಪಾಳೇಗಾರರ ಮೇಲೆ ನನಗೆ ಅಷ್ಟಾಗಿ ಸಿಟ್ಟು ಬರಲಿಲ್ಲ. ಶಿಕ್ಷಣ, ಸ್ವಾತಂತ್ರ್ಯ ಜನಪ್ರಿಯ ಆಗಿರುವ ಈ ಕಾಲದಲ್ಲೂ ಜನರನ್ನು ಇನ್ನು ಹಿಡಿದಿಟ್ಟಿದ್ದಾರಲ್ಲ ಎಂದು ಆಶ್ಚರ್ಯವೇ ಆಯಿತು.ಅವಿhttp://www.blogger.com/profile/07196818175613402260noreply@blogger.com6tag:blogger.com,1999:blog-6342319973848548604.post-63844033475336941802009-01-02T21:29:00.000-08:002009-01-02T21:32:26.691-08:00ಎಡವಿಬಿದ್ದರೆ ಬಾರ್ನಲ್ಲಿ ಎಂಬ ಊರಿನಲ್ಲಿ..,<a href="https://blogger.googleusercontent.com/img/b/R29vZ2xl/AVvXsEgRFwSrCgIQy9cLVQUsK97_6GHjw1An-uG4ak_cOmJqumyji4PRUBlX5OsIVy2GPZA87DBB7h5VXQLB7pJyFMyekFzZoLUO6YuelKVWSRpS5ruhOnLkN2ziAT-IIzj1dxzfW355YBw8rhw/s1600-h/bar_bottom_shelf.jpg"><img id="BLOGGER_PHOTO_ID_5286936028003222578" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 285px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEgRFwSrCgIQy9cLVQUsK97_6GHjw1An-uG4ak_cOmJqumyji4PRUBlX5OsIVy2GPZA87DBB7h5VXQLB7pJyFMyekFzZoLUO6YuelKVWSRpS5ruhOnLkN2ziAT-IIzj1dxzfW355YBw8rhw/s400/bar_bottom_shelf.jpg" border="0" /></a><br /><div></div>ನಮ್ಮೂರಿನಲ್ಲಿ ಒಂದು ಮಾತಿದೆ, <em><span style="color:#33ccff;">ಎಡವಿ ಬಿದ್ದರೆ ಬಾರ್ನಲ್ಲಿ, ನಗೆದು ಬಿದ್ದರೆ ದವಾಖಾನೆಯಲ್ಲಿ</span></em> ಎಂದೇ ಮಾತಿಗೆ ಆರಂಭಿಸಿದರು ನನಗೆ ಗೋಕಾಕ ತಾಲೂಕು ಪರಿಚಯಿಸಿದ ಹಿರಿಯ ವರದಿಗಾರ ಮಿತ್ರ ಮುನ್ನಾ ಬಾಗವಾನ್. ಗೋಕಾಕ ನಗರದ ರಸ್ತೆಯೊಂದರಲ್ಲೇ ನಾಲ್ಕಾರು ಬಾರ್ ಅಂಡ್ ರೆಸ್ಟೋರಂಟ್ಗಳು, ಅದು ತಾಲೂಕಾದರೂ ಮೆಘಾ ಸಿಟಿಯಲ್ಲಿ ಕಾಣುವಂತಹ ಫೈವ್ ಸ್ಟಾರ್ ಶೈಲಿಯ ಆಸ್ಪತ್ರೆಗಳನ್ನು ಕಂಡು ನಾನು ಅವಕ್ಕಾದಾಗ ಮುನ್ನಾ ಹೇಳಿದ್ದೇ ಹಾಗೆ.<br />ಕರದಂಟು ಖ್ಯಾತಿಯ ಗೋಕಾಕ ನಗರವು ರಕ್ತಸಿಕ್ತ ರಾಜಕಾರಣಕ್ಕೂ ಹೆಸರು ವಾಸಿ. ಹೆಸರಿಗೆ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಆದರೆ, ಇದು ಒಂದು ಜಿಲ್ಲೆಯಾಗುವಷ್ಟು ಬೆಳೆದಿದೆ. ಈ ತಾಲೂಕಿನ ಒಡಲಲ್ಲಿ ನಾಲ್ಕಾರು ಸಕ್ಕರೆ ಕಾರ್ಖಾನೆ, ಸಿಮೆಂಟು ಕಾರ್ಖಾನೆ ಹಾಗೂ ಕುಟುಂಬ ರಾಜಕಾರಣವಿದೆ.<br />ಇದೇ ತಾಲೂಕಿನ ಅರಬಾವಿ ವಿಧಾನಸಭಾ ಕ್ಷೇತ್ರವು ಆಪರೇಷನ್ ಕಮಲದಿಂದಾಗಿ ಇತ್ತೀಚೆಗೆ ಉಪ ಚುನಾವಣೆ ಎದುರಿಸಿತು. ಅದಕ್ಕೆ ಸಾಕ್ಷಿಯಾಗುವ ಅವಕಾಶವನ್ನು ನಮ್ಮ ಸಂಪಾದಕರು ನನಗೆ ಕಲ್ಪಿಸಿ ಕಳುಹಿಸಿಕೊಟ್ಟಿದ್ದರು. 10 ದಿನಗಳು ಅಲ್ಲಿ ಕೆಲಸ ಮಾಡಿದ್ದು, ಸಿಕ್ಕ ಗೆಳೆಯರು, ಗಳಿಸಿದ ಅನುಭವ ನನ್ನ ಪಾಲಿಗೆ ಅಮೂಲ್ಯ. 10 ದಿನದ ಉದ್ದಕ್ಕೂ ನನ್ನ ಸಲುಹಿದ ಮುನ್ನಾ ಯಾವಾಗಲೂ ನನೆಪಿನಲ್ಲಿ ಉಳಿಯುತ್ತಾರೆ. ಅವರೊಬ್ಬ ಅದ್ಭುತ ಸ್ಟೋರಿ ಟೆಲ್ಲರ್. ಅದೆಲ್ಲಕ್ಕಿಂತ ಹೆಚ್ಚಾಗಿ ಜೀವನ ಪ್ರೇಮ ಉಳಿಸಿಕೊಂಡಿರುವ ರಸಿಕ. ಅದೇ ತಾಲೂಕಿನ ಮೂಡಲಗಿ ಗ್ರಾಮದ ನಮ್ಮ ಪ್ರತಿನಿಧಿ ಕೃಷ್ಣ ಗಿರಿಯಣ್ಣವರ ತೋರಿಸಿದ ಪ್ರೀತಿ, ಕಳಕಳಿ ನೆನೆದರೆ ಇಂದಿಗೂ ಮನಸ್ಸು ಪ್ರಫುಲ್ಲವಾಗುತ್ತದೆ.<br />ಈ ತಾಲೂಕಿನಲ್ಲಿ ಜಾರಕಿಹೊಳಿ ಕುಟುಂಬವನ್ನು ಸಾಹುಕಾರರು ಎಂದೇ ಕರೆಯುತ್ತಾರೆ. ಗೋಕಾಕ ತಾಲೂಕಿನ ಬಗ್ಗೆ ಮತಾನಾಡುವಾಗ ಆ ಕುಟುಂಬವನ್ನು ಬಿಟ್ಟು ಮಾತನಾಡುವುದೇ ಕಷ್ಟ. ಅವರ ಬಗ್ಗೆ ಹೆಚ್ಚು ಮಾತನಾಡುವುದು ಕಷ್ಟ. ಇಡೀ ತಾಲೂಕಿನಲ್ಲಿ ಆ ಕುಟುಂಬದ ಬಗ್ಗೆ ಮೆಚ್ಚುವವರು, ಭಕ್ತಿ ತೋರುವವರು, ಭೀತಿಯಿಂದಲೇ ಬಾಯಿ ತೆರೆಯುವವರು, ಅವರ ಕಂಡರೆ ಹಲ್ಲು ಹಲ್ಲು ಕಡಿಯುವವರು ಸಿಗುತ್ತಾರೆ. ಅವರ ರಕ್ತಸಿಕ್ತ ರಾಜಕಾರಣ, ವ್ಯವಹಾರದ ಬಗ್ಗೆ ಮುಂದೆದಾದರೂ ಬರೆದೇನು.<br />ದಾರಿ ತಪ್ಪುವ ಮುನ್ನ - ಎಡವಿಬಿದ್ದರೆ ಬಾರಿನಲ್ಲಿ ಎಂಬ ಊರಿನಲ್ಲಿ ಸಿಕ್ಕ ಮುನ್ನಾ ಬಾಗವಾನ ಅವರು ಒಂದು ರಾತ್ರಿಯ ತೀರ್ಥಗೋಷ್ಠಿಯ ನಂತರ ಲಾಡ್ಜ್ ಎದುರಿನ ರಸ್ತೆಯಲ್ಲಿ ಏಳೆಂಟು ವರದಿಗಾರ ಮಿತ್ರರು ಮಾತನಾಡುತ್ತಾ ನಿಂತಿದ್ದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರನ್ನು ನೋಡಿದ ಕೂಡಲೇ ಮುನ್ನಾ ಜಾಗೃತರಾದರು. ತಾವು ತೀರ್ಥ ಸೇವನೆ ಶುರು ಮಾಡಿದಕ್ಕೆ ಪೊಲೀಸರೇ ಕಾರಣ ಎಂದು ಹೇಳಿದ ಕಥೆ ಹೀಗಿದೆ...,<br />ಅದು ಬಾಬ್ರಿ ಮಸೀದಿ ಉರುಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಮು ಗಲಭೆ ನಡೆಯುತ್ತಿದ್ದ ದಿನಗಳು. ಆಗ ಅಲ್ಲಿನ ಸ್ಥಳೀಯ ಪತ್ರಿಕೆಯಾದ ಗೋಕಾಕ ಟೈಮ್ಸ್ನಲ್ಲಿ ಮುನ್ನಾ ವರದಿಗಾರರಾಗಿದ್ದರು. ಆಗೆಲ್ಲಾ ಒಂದು ಫೋಟೋ ಬ್ಲಾಕ್ ಮಾಡಿಸಲು ಸಹ ಬೆಳಗಾವಿಗೆ ಹೋಗಬೇಕಿತ್ತು. ಇನ್ನು ಪಿಟಿಐ ಸುದ್ದಿಗಳಿಗೂ ಬೆಳಗಾವಿಗೆ ಹೋಗಿ, ಅಲ್ಲಿಯೇ ಅನುವಾದ ಮುಗಿಸಿ ಹೊತ್ತುಕೊಂಡು ಬರುವ ಕೆಲಸ ಮುನ್ನಾ ಅವರದು. ಹಾಗೆ ಹೊರಟ ಒಂದು ದಿನ ಗೋಕಾಕದಲ್ಲಿ ಕರ್ಫ್ಯೂ.. ವಿಧಿಸಲಾಗಿತ್ತು. ತನ್ನ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಬಿಟ್ಟುಕೊಂಡು ರಸ್ತೆಗಿಳಿದರು ಮುನ್ನಾ. ಎಲ್ಲಾ ಹೊರಗಿನ ಪೊಲೀಸರೇ ಆದ್ದರಿಂದ ಇವರನ್ನು ವರದಿಗಾರರು ಎಂದು ಗುರುತಿಸಬೇಕಿದ್ದದ್ದು ಕೊರಳಿನಲ್ಲಿದ್ದ ಐಡಿ ಕಾರ್ಡ್ನಿಂದಲೇ. ಅವರು ಬಸ್ಸು ನಿಲ್ದಾಣದ ಕಡೆಯಿಂದ ಹಾದು ಹೋಗುವಾಗ ಮಲ್ಲಿಕಾಜನ ಗುಡ್ಡದ ಕಡೆಯಿಂದ ಇಬ್ಬರು ಕಂದಮ್ಮಗಳೊಂದಿಗೆ ಮಹಿಳೆಯೊಬ್ಬರು ಬ್ಯಾಗು, ಬಿದಿರು ಬುಟ್ಟಿ ಹಿಡಿದು ಬರುತ್ತಿದ್ದಳು. ಕೂಡಲೇ ಆಕೆಯನ್ನು ಮುತ್ತಿಕೊಂಡ ಪೊಲೀಸರು ತಪಾಸಣೆಗೆ ಇಳಿದರು. ಮಕ್ಕಳು ಅಳಲಾರಂಭಿಸಿದವು. ಇಬ್ಬರು ಪೊಲೀಸರು ಬುಟ್ಟಿ ಬ್ಯಾಗು ಜಾಲಾಡಿ, ಅದರಲ್ಲಿದ್ದ ಒಂದಷ್ಟು ಅನ್ನ ಚೆಲ್ಲಿದರು. ಬಟ್ಟೆ ಎಳೆದಾಡಿದರು. ಪೊಲೀಸೊಬ್ಬ ಆಕೆಯತ್ತ ಲಾಠಿ ಬೀಸತೊಡಗಿದ. ಬೇಡಿ ತಂದಿದ್ದ ಅನ್ನವನ್ನು ಕಸಿದುಕೊಂಡಿರಲ್ಲಾ. ಇನ್ನು ಯಾವ ಮನೆಯಲ್ಲಿ ಬೇಡಲಿ. ಯಾರೂ ಬಾಗಿಲು ತೆಗೆಯೊಲ್ಲಾ ಎಂದು ಕಣ್ಣೀರಾಗತೊಡಗಿದಳು. ಆದರೂ ಲಾಠಿಗೆ ಕನಿಕರ ಬರಲಿಲ್ಲ.<br />ಅದನ್ನು ತಡೆಯಲು ಹೋದೆ ಅಷ್ಟೇ. ಹಿಗ್ಗಾ ಮುಗ್ಗಾ ಲಾಠಿಗಳು ಅಬ್ಬರಿಸಿ ಮುಗಿಬಿದ್ದು ನಗ್ಗು ಮಾಡಿದವು ನನ್ನ. ಕಾಲುಗಳು ಸರಿದಾಡಿದವು. ತೋಳಿಗೆ, ಮುಖಕ್ಕೆ ಬ್ಯಾಂಡೇಜ್ ಬಂತು. ಆ ನೋವು ಗೊತ್ತಾಗದೇ ಇರಲು ಕುಡಿ ಎಂದು ಗೆಳೆಯರು ಪ್ರೇರೇಪಿಸಿದರು. ಅಂದಿನಿಂದ ತೀರ್ಥ ಸೇವನೆ ಶುರುವಾಯಿತು ಎಂದು ಅವರದ ಅದ್ಭುತ ಶೈಲಿಯಲ್ಲಿ ಕಥೆ ಹೇಳಿದರು. ನಮ್ಮೊಂದಿಗೆ ಪೊಲೀಸರು ನಕ್ಕರು. ನಾವು ನಕ್ಕೆವು. ಆದರೆ ಮುನ್ನಾ ಮುಖದಲ್ಲಿ ನಗುವಿಗಿಂತ ಹೆಚ್ಚು ವಿಷಾದವೇ ಕಾಣುತಿತ್ತು...,<br /><br /><strong>ಮುಂದಿನ ಘಟನೆ</strong> - ಆ ಊರಲ್ಲಿ ಯಾರದೇ ಮದುವೆಯಾದರೂ ಅವರ ಫಸ್ಟ್ ನೈಟ್ ಮಾತ್ರ ಆ ಮನೆಯಲ್ಲೇ ನಡೆಯುತಿತ್ತು...!ಅವಿhttp://www.blogger.com/profile/07196818175613402260noreply@blogger.com3tag:blogger.com,1999:blog-6342319973848548604.post-12405747730180771892008-12-31T07:29:00.000-08:002008-12-31T07:35:18.587-08:00ಕಳೆಯಿತು ಮತ್ತೊಂದು ವರ್ಷ<a href="https://blogger.googleusercontent.com/img/b/R29vZ2xl/AVvXsEhAFTSHsXv4HQn7tAFOD0rCi1T7DDSdAxR9Yhokdgg0U9TQH4pjLPW_y77yDbxFyKCJfgodlMk7Q3fsinzGJYpCLrCR5sz4y0cgAx-4LRUJbdncLryNQoDCwT22VykLbLM3dvmexRlt2_M/s1600-h/I_Miss_You_back_1134589525_9967057.jpg"><img id="BLOGGER_PHOTO_ID_5285978179551295458" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 255px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhAFTSHsXv4HQn7tAFOD0rCi1T7DDSdAxR9Yhokdgg0U9TQH4pjLPW_y77yDbxFyKCJfgodlMk7Q3fsinzGJYpCLrCR5sz4y0cgAx-4LRUJbdncLryNQoDCwT22VykLbLM3dvmexRlt2_M/s400/I_Miss_You_back_1134589525_9967057.jpg" border="0" /></a><br /><div><span style="color:#33ffff;">ಕಳೆಯಿತು ಮತ್ತೊಂದು ವರ್ಷ</span><br />ಹರ್ಷವೂ ಇತ್ತು, ಸಮಸ್ಯೆಗಳ ವರ್ಷವೂ ಇತ್ತು ಯುಗಾದಿಯಂತೆ. ಮತ್ತೆ ಗೋಡೆ ಮೇಲಿನ ಕ್ಯಾಲೆಂಡರ್ ಬದಲಿಸಿ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದೇವೆ<br />ಈ ವರ್ಷವಾದರೂ ಹರ್ಷ ಹೆಚ್ಚಾಗಿರಲಿ. ಬೇವೂ ಇರಲಿ, ಇಲ್ಲದಿದ್ದರೆ ಬೆಲ್ಲದ ಸವಿ ಗೊತ್ತಾದೀತು ಹೇಗೆ?<br />2008ರ ಅಂತ್ಯದ ತಿಂಗಳು ನನಗೆ ನಾನಾ ಅನುಭವ ನೀಡಿತು. ವಿವಾದಿತ ಸುದ್ದಿಯೊಂದರ ಬೆನ್ನತ್ತಿದ್ದು, ನಂತರ ಅರಬಾವಿ ಚುನಾವಣಾ ವರದಿಗೆ ತೆರಳಿ ಸಾಕಷ್ಟು ಅನುಭವ ಪಡೆದುಕೊಂಡು ಬಂದೆ. ಒಂದಿಷ್ಟು ರೋಚಕ ಕಥೆಗಳನ್ನು ಗೋಕಾಕದಲ್ಲಿ ಕೇಳಿ ಬಂದಿದ್ದೇನೆ. ಅವೆಲ್ಲವನ್ನೂ ಹೇಳಿಕೊಳ್ಳುವ ಆಶಯವಿದ. 2009ರಲ್ಲಿ ನಾನು ನಿಮಗೆ ಕಥೆ ಹಳಿ ಕಾಡುತ್ತೇನೆ. ಸಹಿಸಿಕೊಳ್ಳಿ.<br />2008ರಲ್ಲಿ ನನ್ನ ಟೀಕಿಸಿ ತಪ್ಪು ತಿದ್ದಿಕೊಳ್ಳುವಂತೆ ಮಾಡಿದವರಿಗೆ, ಸವಾಲು ಹಾಕಿ ನನ್ನ ಶಕ್ತಿ, ದೌರ್ಬಲ್ಯ ತಿಳಿಸಿಕೊಟ್ಟವರಿಗೆ, ನಿಂದಿಸುವವರೆ ಹೆಚ್ಚಿದ್ದಾಗ ಮೆಚ್ಚಿ ಬೆನ್ನು ತಟ್ಟಿದವರಿಗೆ, ನಾನು ಏನೇ ಮಾಡಿದರೂ ಸಲಹುವ, ಪ್ರೀತಿಸುವ ಅವ್ವ, ಅಪ್ಪ, ತರಲೆ ತಮ್ಮ ಹಾಗೂ ಅಸಂಖ್ಯ ಗೆಳೆಯರಿಗೆ ಧನ್ಯವಾದಗಳು. ಇಂಥದಕ್ಕೆಲ್ಲಾ ಕಾರಣವಾಗಿರುವ ನನ್ನ ಸಂಸ್ಥೆಗೆ, ಸಹೋದ್ಯಗಿಗಳಿಗೆ 2009 ಒಳಿತು ಮಾಡಲಿ. ನಿಮ್ಮ ಕನಸುಗಳು ನನಸಾಗಲಿ, ನಿಮ್ಮ ಗುರಿಗಳಿಗೆ ನೀವು ತಲುಪಿಕೊಳ್ಳಿ ಎಂಬ ಹಾರೈಕೆಯೊಂದಿಗೆ...,</div>ಅವಿhttp://www.blogger.com/profile/07196818175613402260noreply@blogger.com5